ಭಾರತ ಅದ್ಭುತ ಕಬಡ್ಡಿ ಆಟಗಾರರ ಗಣಿ

ಉದಯವಾಣಿ ಸಂದರ್ಶನದಲ್ಲಿ ಬುಲ್ಸ್‌ ತಂಡದ ನಾಯಕ ಪವನ್‌

Team Udayavani, Feb 23, 2022, 6:15 AM IST

ಭಾರತ ಅದ್ಭುತ ಕಬಡ್ಡಿ ಆಟಗಾರರ ಗಣಿ

ದಿಲ್ಲಿಯ ಖ್ಯಾತ ಕಬಡ್ಡಿ ಆಟಗಾರ ಪವನ್‌ ಸೆಹ್ರಾವತ್‌. ಕೂಟದ ಘಾತಕ ದಾಳಿಗಾರರಾದ ಅವರು ಪ್ರಸ್ತುತ ಬುಲ್ಸ್‌ ತಂಡದ ನಾಯಕ. ತಮ್ಮ ಮಿಂಚಿನ ಕಾಲ್ಚಳಕದಿಂದ ಎದು ರಾಳಿ ತಂಡಗಳನ್ನು ಬೆಚ್ಚಿಬೀಳಿಸಿರುವ ಅವರ ನೇತೃತ್ವದಲ್ಲೇ ಬುಲ್ಸ್‌ ಸೆಮಿಫೈನಲ್‌ಗೇರಿದೆ. ಈ ಹಿನ್ನೆಲೆಯಲ್ಲಿ ಅವರ ಸಂದರ್ಶನ ಇಲ್ಲಿದೆ.

ಬೆಂಗಳೂರು ಪರ ಆಡುವುದು ನಿಮಗೆ ಹೇಗನಿಸುತ್ತದೆ? ನೀವು ಬೇರೊಂದು ರಾಜ್ಯದಿಂದ ಬಂದಿದ್ದೀರಿ, ಆದರೆ ಕರ್ನಾಟಕದ ಭಾವನೆಗಳನ್ನು ಪ್ರತಿನಿಧಿಸುವ ಸ್ಥಾನದಲ್ಲಿದ್ದೀರಿ. ನೀವು ಕನ್ನಡಿಗರಲ್ಲದಿದ್ದರೂ, ಕರ್ನಾಟಕದ ಜನ ನಿಮ್ಮನ್ನು, ನಮ್ಮವರು ಎಂದೇ ಸ್ವೀಕರಿಸಿದ್ದಾರೆ. ಇದು ನಿಮ್ಮಲ್ಲಿ ಎಂತಹ ಭಾವನೆಗಳನ್ನುಂಟು ಮಾಡುತ್ತದೆ?
ಉ: ಬೆಂಗಳೂರು ಪರ ಆಡುವ ಅನುಭವ ಅನನ್ಯವಾದದ್ದು. ನಾವೀಗಾಗಲೇ ಲೀಗ್‌ನಲ್ಲಿ ಸೆಣೆಸಿ, ಸೆಮಿಫೈನಲ್‌ಗೆ ಬಂದಿದ್ದೇವೆ. ತಂಡದ ಅಭಿಮಾನಿಗಳ ಬಗ್ಗೆ ಬಹಳ ಪ್ರೀತಿಯಿದೆ. ಅವರಿಗೆ ನನ್ನೆದೆಯಲ್ಲಿ ಅಪೂರ್ವ ಸ್ಥಾನವಿದೆ. ಬೆಂಗಳೂರು ಬುಲ್ಸ್‌ ಸೇರಿಕೊಂಡಾಗಿನಿಂದ ಪಂದ್ಯದ ವೇಳೆ ಮತ್ತು ನಂತರ ಅತ್ಯುತ್ತಮವಾದದ್ದನ್ನೇ ನೀಡಲು ಯತ್ನಿಸಿದ್ದೇನೆ. ಈ ತಂಡವನ್ನು ಮುನ್ನಡೆಸುವುದು ನನಗೊಂದು ಗೌರವ. ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವಂತೆ ಮಾಡುವುದು ನಮ್ಮ ಗುರಿ.

ಜೈವಿಕ ಸುರಕ್ಷಾ ವಲಯದ ಬಗ್ಗೆ ಏನನ್ನಿಸುತ್ತೆ? ದೀರ್ಘ‌ಕಾಲದ ಸುರûಾ ವಲಯದಲ್ಲಿನ ಜೀವನ ನಿಮ್ಮನ್ನು ಸುಸ್ತು ಮಾಡಿದೆಯಾ ಅಥವಾ ಸಹಜವಾಗಿಯೇ ಇದ್ದೀರಾ? ಮಾಮೂಲಿ ಸ್ಥಿತಿಗೂ, ಸುರûಾ ವಲಯದ ಬದುಕಿಗೂ ಏನು ವ್ಯತ್ಯಾಸ?
: ಅಂತಹ ಮುಖ್ಯ ವ್ಯತ್ಯಾಸಗಳೇನಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ಒಂದು ನಿರ್ದಿಷ್ಟ ಜಾಗದಲ್ಲಿರಬೇಕು ಅನ್ನುವುದೊಂದೇ ವ್ಯತ್ಯಾಸ. ಉಳಿದಂತೆ ನಾವೇನು ಮಾಡಬಹುದೋ ಅದನ್ನು ಇಲ್ಲಿಯೂ ಮಾಡಬಹುದು. ನಮ್ಮ ಮನರಂಜನೆಗೆ ಬೇಕಾದ ವ್ಯವಸ್ಥೆಯಿದೆ. ಜಿಮ್‌ ಇದೆ, ನಮ್ಮ ಬಗ್ಗೆ ಪೂರ್ಣ ಕಾಳಜಿ ವಹಿಸುವ ಅತ್ಯುತ್ತಮ ಸಿಬಂದಿ ಇದ್ದಾರೆ. ನಾವು ಈಗ ಎಲ್ಲಿದ್ದೀವೋ ಅಲ್ಲೇ ಸಂತೋಷದಿಂದ ಇದ್ದೇವೆ. ಪ್ರಶಸ್ತಿ ಗೆಲ್ಲುವುದಕ್ಕಾಗಿ ಇಲ್ಲಿದ್ದೇವೆ, ಅದೊಂದೇ ಈಗ ಮನಸ್ಸಿನಲ್ಲಿರುವುದು.

ಬುಲ್ಸ್‌ ಈ ಬಾರಿಯ ಋತುವನ್ನು ಭರ್ಜರಿಯಾಗಿಯೇ ಆರಂಭಿಸಿತ್ತು. ದೀರ್ಘ‌ಕಾಲ ಅಗ್ರಸ್ಥಾನದಲ್ಲೂ ಇತ್ತು. ಆದರೆ ದಿಢೀರನೇ ಐದನೇ ಸ್ಥಾನಕ್ಕೆ ಕುಸಿಯಿತು. ಈ ಕುಸಿತಕ್ಕೆ ಕಾರಣವೇನು?
ಉ: ಭಾರತದಲ್ಲಿಯೇ ಪ್ರೊ ಕಬಡ್ಡಿ ಅತ್ಯಂತ ಸ್ಪರ್ಧಾತ್ಮಕ ಕೂಟಗಳಲ್ಲೊಂದು. ಇದರಲ್ಲಿ ಶ್ರೇಷ್ಠ ಆಟಗಾರರು ಆಡುತ್ತಾರೆ. ಯಾವಾಗಲೂ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು, ಪಂದ್ಯದ ವೇಳೆ ಶೇ.100 ಯತ್ನ ಹಾಕುವುದು ನಮ್ಮ ಗುರಿ. ಆರಂಭದಲ್ಲಿ ಅತ್ಯುತ್ತಮವಾಗಿಯೇ ಆಡಿದೆವು. ಆನಂತರ ರಕ್ಷಣಾ ವಿಭಾಗದಲ್ಲಿ ಕೆಲವು ಸವಾಲುಗಳನ್ನು ಎದುರಿಸಿದೆವು. ಅದನ್ನು ನಮ್ಮ ತರಬೇತುದಾರರು ಮಾತನಾಡಿ ಸರಿ ಮಾಡಿದರು. ನಾವು ಅದಕ್ಕೊಂದು ಯೋಜನೆ ರೂಪಿಸಿ, ಹಾಗೆಯೇ ಆಡಿ ಯಶಸ್ವಿಯಾಗಿದ್ದೇವೆ.

– ಕೆ.ಪೃಥ್ವಿಜಿತ್‌

ಟಾಪ್ ನ್ಯೂಸ್

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.