ಏಕದಿನ ಕ್ರಿಕೆಟ್ ಗೆ 50: ವಿಶ್ವಕ್ರಿಕೆಟ್ ಗೆ ರಂಗು ಹಚ್ಚಿದ ಐದು ರೋಚಕ ಪಂದ್ಯಗಳು!


Team Udayavani, Jan 5, 2021, 2:12 PM IST

ಏಕದಿನ ಕ್ರಿಕೆಟ್ ಗೆ 50: ವಿಶ್ವಕ್ರಿಕೆಟ್ ಗೆ ರಂಗು ಹಚ್ಚಿದ ಐದು ರೋಚಕ ಪಂದ್ಯಗಳು!

ನಾಲ್ಕು ಸಾವಿರದಷ್ಟು ಏಕದಿನ ಪಂದ್ಯಗಳಲ್ಲಿ ಅಚ್ಚರಿ, ಅನಿರೀಕ್ಷಿತ, ರೋಮಾಂಚಕಾರಿ ಫ‌ಲಿತಾಂಶ ದಾಖಲಿಸಿದ ಮುಖಾಮುಖೀಗಳೆಷ್ಟೋ!  ಇವನ್ನು ವಿಂಗಡಿಸಿ ದಾಖಲಿಸುವುದೇ ದೊಡ್ಡ ಸವಾಲು. ಇಲ್ಲಿ ಆಯ್ದ ಕೇವಲ 5 ಪಂದ್ಯಗಳನ್ನು ಉಲ್ಲೇಖೀಸಲಾಗಿದೆ.

ಭಾರತ-ವೆಸ್ಟ್‌ ಇಂಡೀಸ್‌:  ವಿಶ್ವಕಪ್‌ ಫೈನಲ್‌, ಲಾರ್ಡ್ಸ್‌

ವೆಸ್ಟ್‌ ಇಂಡೀಸ್‌ ಹ್ಯಾಟ್ರಿಕ್‌ ಹಾದಿಯಲ್ಲಿತ್ತು. ಮೊದಲ ಸುತ್ತಿನಲ್ಲೇ ವಿಂಡೀಸಿಗೆ ವಿಶ್ವಕಪ್‌ನಲ್ಲಿ ಮೊದಲ ಆಘಾತವಿಕ್ಕಿದ ಕಪಿಲ್‌ದೇವ್‌ ಸಾರಥ್ಯದ ಭಾರತ ಎದುರಾಳಿ. ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡನ್ನೇ ಹೊಡೆದುರುಳಿಸಿ ಬಂದ ಹುರುಪಿನಲ್ಲಿತ್ತು ಭಾರತ. ಆದರೆ 183ಕ್ಕೆ ಆಲೌಟ್‌ ಆದಾಗ ಆಶಾಗೋಪುರವೊಂದು ಕುಸಿದು ಬಿದ್ದ ಅನುಭವ. “ಪಂದ್ಯವಿನ್ನೂ ಮುಗಿದಿಲ್ಲ, ಬೌಲರ್ ಕೈ ಬಿಡುವುದಿಲ್ಲ’ ಎಂದು ಇನ್ನಿಂಗ್ಸ್‌ ಬ್ರೇಕ್‌ ವೇಳೆ ಕಪಿಲ್‌ ಹುರಿದುಂಬಿಸಿದರು. ಇದು ನಿಜವಾಯಿತು. ವಿಂಡೀಸ್‌ 140ಕ್ಕೆ ಪಲ್ಟಿ; ಭಾರತ ಏಕದಿನ ಸಿಂಹಾಸನದಲ್ಲಿ ವಿರಾಜಮಾನವಾಗಿತ್ತು. ಕ್ರಿಕೆಟ್‌ ಜಗತ್ತು ಈ ವಿದ್ಯಮಾನವನ್ನು ಬೆರಗುಗಣ್ಣಿನಿಂದ ನೋಡಿತು, ಚಿವುಟಿ ಚಿವುಟಿ ಖಚಿತಪಡಿಸಿಕೊಂಡಿತು!

ಭಾರತ-ಪಾಕಿಸ್ಥಾನ: ಆಸ್ಟ್ರೇಲೇಶ್ಯ ಕಪ್‌ ಫೈನಲ್‌, ಶಾರ್ಜಾ

ಅಂತಿಮ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ಪಂದ್ಯವನ್ನು ಗೆಲ್ಲಿಸುವುದು ಈಗ ಮಾಮೂಲು. ಆದರೆ ಏಕದಿನದ ಆರಂಭಿಕ ದಶಕಗಳಲ್ಲಿ ಅದೊಂದು ಮಹಾನ್‌ ಸಾಧನೆ. ಇದಕ್ಕೆ ಸಾಕ್ಷಿ ಭಾರತ-ಪಾಕಿಸ್ಥಾನ ನಡುವಿನ 1986ರ ಆಸ್ಟ್ರೇಲೇಶ್ಯ ಕಪ್‌ ಫೈನಲ್‌.

ಭಾರತ ಪೇರಿಸಿದ ಮೊತ್ತ 7ಕ್ಕೆ 245. ಪಾಕ್‌ ಒಂದೆಡೆ ಕುಸಿಯುತ್ತಿದ್ದರೂ ಜಾವೇದ್‌ ಮಿಯಾಂದಾದ್‌ ಮಾತ್ರ ಕ್ರೀಸಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದರು. ಶತಕ ಬಾರಿಸಿ ಮುನ್ನುಗ್ಗುತ್ತಿದ್ದರು. ಉಳಿದದ್ದು ಒಂದೇ ವಿಕೆಟ್‌. ಚೇತನ್‌ ಶರ್ಮ ಬೌಲರ್‌. ಎದುರಿಗೆ ದೈತ್ಯ ಮಿಯಾಂದಾದ್‌. ಅಂತಿಮ ಎಸೆತದಲ್ಲಿ ಗೆಲುವಿಗೆ ಬೌಂಡರಿ ಬೇಕೇ ಬೇಕು. ಮಿಯಾಂದಾದ್‌ ಆ ಎಸೆತವನ್ನು ಆಗಸಕ್ಕೆ ಎತ್ತಿ ಬಾರಿಸಿದರು. ಸಿಕ್ಸರ್‌! ಹೇಳಲಿಕ್ಕೇನೂ ಉಳಿದಿರಲಿಲ್ಲ. ಅನುಭವಿಸಿದವರಿಗಷ್ಟೇ ಗೊತ್ತು ಆ ನೋವು!

ಇದನ್ನೂ ಓದಿ:ಒನ್‌ ಡೇ ಕ್ರಿಕೆಟ್‌ ಗೆ 50ರ ಸಂಭ್ರಮ: ಉದಯವೇ ವಿಸ್ಮಯ, ಅಚ್ಚರಿ, ಅನಿರೀಕ್ಷಿತ, ರೋಮಾಂಚನ!

ಆಸ್ಟ್ರೇಲಿಯ-ವೆಸ್ಟ್‌ ಇಂಡೀಸ್‌:  ಬೆನ್ಸನ್‌ ಆ್ಯಂಡ್‌ ಹೆಜಸ್‌ ಸೀರಿಸ್‌, ಸಿಡ್ನಿ,

ಇದು ಮಳೆಪೀಡಿತ ಪಂದ್ಯ. 43 ಓವರ್‌ಗಳಿಗೆ ಸೀಮಿತ. ಸಣ್ಣ ಮೊತ್ತದ ಸವಾಲು. ರೋಮಾಂಚನ ಸಾಟಿಯಿಲ್ಲದ್ದು. ವೆಸ್ಟ್‌ ಇಂಡೀಸ್‌ ಗಳಿಸಿದ್ದು 9ಕ್ಕೆ 172 ರನ್‌. ಬೆನ್ನಟ್ಟಲಿಳಿದ ಆಸ್ಟ್ರೇಲಿಯದ 6 ವಿಕೆಟ್‌ ಬರೀ 38 ರನ್ನಿಗೆ ಢಮಾರ್‌. ವಿಂಡೀಸ್‌ ಗೆಲುವಿನ ಅಂತರದ ಲೆಕ್ಕಾಚಾರದಲ್ಲಿರುವಾಗಲೇ ಮೈಕಲ್‌ ಬೆವನ್‌ ಬಿರುಗಾಳಿಯಾದರು. ಚೇಸಿಂಗ್‌ ಬಿರುಸು ಪಡೆಯಿತು. ರೋಜರ್‌ ಹಾರ್ಪರ್‌ ಅಂತಿಮ ಓವರ್‌ ಎಸೆಯಲು ಬಂದಾಗ ಆಸೀಸ್‌ 2 ವಿಕೆಟ್‌ಗಳಿಂದ 7 ರನ್‌ ಮಾಡಬೇಕಿತ್ತು. ಡಾಟ್‌, ವೈಡ್‌, ರನೌಟ್‌, 2 ಸಿಂಗಲ್ಸ್‌, ಮತ್ತೂಂದು ಡಾಟ್‌… ಅಂತಿಮ ಎಸೆತದಲ್ಲಿ 4 ರನ್‌ ಎಂಬಲ್ಲಿಗೆ ಬಂದು ನಿಂತಿತು ಲೆಕ್ಕಾಚಾರ. ಸ್ಟ್ರೈಕರ್‌ ಬೆವನ್‌ ಬ್ಯಾಟ್‌ ಬೀಸಿದ ಹೊಡೆತಕ್ಕೆ ಚೆಂಡು ಬೌಂಡರಿ ಗೆರೆಯಾಚೆ ಸಿಡಿಯಿತು. ಆಸೀಸ್‌ ಒಂದು ವಿಕೆಟ್‌ನಿಂದ ವಿನ್‌!

ಭಾರತ-ಇಂಗ್ಲೆಂಡ್‌:  ನಾಟ್‌ವೆಸ್ಟ್‌ ಫೈನಲ್‌, ಲಾರ್ಡ್ಸ್‌

ಐತಿಹಾಸಿಕ ಲಾರ್ಡ್ಸ್‌ನಲ್ಲಿ ಭಾರತ ಮತ್ತೂಂದು ಫೈನಲ್‌ ಆಡಲಿಳಿದಿತ್ತು. ಎದುರಾಳಿ ಇಂಗ್ಲೆಂಡ್‌. ಗಂಗೂಲಿ ಪಡೆಗೆ 326 ರನ್‌ ಬೃಹತ್‌ ಟಾರ್ಗೆಟ್‌. 14.2 ಓವರ್‌ಗಳಲ್ಲಿ 106 ರನ್‌ ಪೇರಿಸಿದ ಭಾರತದಿಂದ ದಿಟ್ಟ ಆರಂಭ. ಆದರೆ ಸ್ಕೋರ್‌ 146ಕ್ಕೆ ಏರುವಷ್ಟರಲ್ಲಿ 5 ವಿಕೆಟ್‌ ಪತನ. ಮುಂದಿನದು ಯುವರಾಜ್‌ ಸಿಂಗ್‌-ಮೊಹಮ್ಮದ್‌ ಕೈಫ್ ಸಾಹಸಗಾಥೆ. 6ನೇ ವಿಕೆಟಿಗೆ 121 ರನ್‌ ಸಂಗ್ರಹ. ಯುವಿ ನಿರ್ಗಮಿಸುವಾಗ 50 ಎಸೆತಗಳಿಂದ ಇನ್ನೂ 59 ರನ್‌ ಅಗತ್ಯವಿತ್ತು. ಕೈಫ್ಗೆ ಹರ್ಭಜನ್‌ ಬೆಂಬಲ ನೀಡಿದರು. 47 ರನ್‌ ಹರಿದು ಬಂತು. 49ನೇ ಓವರಿನ 3ನೇ ಎಸೆತದಲ್ಲಿ ಭಾರತ ಗುರಿ ಮುಟ್ಟಿತು. ಅತ್ತ ಲಾರ್ಡ್ಸ್‌ ಬಾಲ್ಕನಿಯಲ್ಲಿ ಅಂಗಿ ಕಳಚಿದ ನಾಯಕ ಗಂಗೂಲಿ ಸಂಭ್ರಮದ ಪರಾಕಾಷ್ಠೆ ತಲುಪಿದ್ದರು!

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯ: ಜೊಹಾನ್ಸ್‌ಬರ್ಗ್‌ ಪಂದ್ಯ

ಅನುಮಾನವೇ ಬೇಡ, ಇದು ಶತಮಾನದ ಪಂದ್ಯ. ಆಸ್ಟ್ರೇಲಿಯ ಏಕದಿನ ಇತಿಹಾಸದಲ್ಲೇ ಮೊದಲ ಸಲ 400 ರನ್‌ ಗಡಿ ದಾಟಿ ವಿಶ್ವದಾಖಲೆ ಸ್ಥಾಪಿಸಿತ್ತು. 4 ವಿಕೆಟಿಗೆ 434 ರನ್‌ ಸಂಗ್ರಹಗೊಂಡಿತ್ತು. ಇದನ್ನು ಬೆನ್ನಟ್ಟಲು ಎಲ್ಲಿ ಸಾಧ್ಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹರಿಣಗಳ ಜೊಹಾನ್ಸ್‌ಬರ್ಗ್‌ ಜೋಶ್‌ಗೆ ಸಾಟಿ ಇರಲಿಲ್ಲ. ಗಿಬ್ಸ್ (175), ಸ್ಮಿತ್‌ (90), ಬೌಷರ್‌ (ಅಜೇಯ 50) ವೀರಾವೇಶದಲ್ಲಿದ್ದರು. ಆಸೀಸ್‌ ಸಂಪೂರ್ಣ ನಿಯಂತ್ರಣ ತಪ್ಪಿತ್ತು. ಒಂದು ಎಸೆತ, ಒಂದೇ ವಿಕೆಟ್‌ ಬಾಕಿ ಇರುವಾಗ ಐತಿಹಾಸಿಕ ಚೇಸಿಂಗ್‌ ಮೂಲಕ ದಕ್ಷಿಣ ಆಫ್ರಿಕಾ ಜಯಭೇರಿ ಮೊಳಗಿಸಿತ್ತು (9ಕ್ಕೆ 438). ಕ್ರಿಕೆಟ್‌ ಜಗತ್ತು ಸ್ತಬ್ಧಗೊಂಡಿತ್ತು! ಒಂದೇ ದಿನ ಎರಡು ವಿಶ್ವದಾಖಲೆಯ ಮೊತ್ತ, ಬೃಹತ್‌ ಮೊತ್ತದ ಯಶಸ್ವೀ ಚೇಸಿಂಗ್‌… ಅಬ್ಬಬ್ಬ!

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.