1ನೇ ಟಿ20: ಭುವಿ ಪಂಚ್‌ಗೆ ತತ್ತರಿಸಿದ ಆಫ್ರಿಕಾ


Team Udayavani, Feb 19, 2018, 6:00 AM IST

AP2_18_2018_000255B.jpg

ಜೋಹಾನ್ಸ್‌ಬರ್ಗ್‌: ಭುವನೇಶ್ವರ್‌ ಕುಮಾರ್‌ (24ಕ್ಕೆ5) ವಿಕೆಟ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 28 ರನ್‌ ಗೆಲುವು ಸಾಧಿಸಿದೆ. ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಟೆಸ್ಟ್‌, ಏಕದಿನ ಸರಣಿಯಲ್ಲಿ ಸೋಲುಂಡಿರುವ ದಕ್ಷಿಣ ಆಫ್ರಿಕಾ ತವರಿನಲ್ಲಿ ಮತ್ತೂಂದು ಮುಖಭಂಗ ಎದುರಿಸಿತು. ಅಷ್ಟೇ ಅಲ್ಲ ಟಿ20 ಕೂಟವನ್ನೂ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದೆ. ಎಬಿಡಿ ವಿಲಿಯರ್, ಡುಪ್ಲೆಸಿಸ್‌ ಸೇರಿದಂತೆ ಅಗ್ರ ಬ್ಯಾಟ್ಸ್‌ಮನ್‌ಗಳು ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದ ಆಫ್ರಿಕಾ ಭಾರತ ನೀಡಿದ 203 ರನ್‌ ಸವಾಲನ್ನು ಬೆನ್ನಟ್ಟಲು ವಿಫ‌ಲವಾಯಿತು. 175 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಂಡಿತು.

ಆಫ್ರಿಕನ್ನರ ಪೆವಿಲಿಯನ್‌ ಪರೇಡ್‌: ಭಾರತ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಆಫ್ರಿಕಾ ಪರ ಆರಂಭಿಕ ಬ್ಯಾಟ್ಸ್‌ಮನ್‌ ಹೆಂಡ್ರಿಕ್ಸ್‌ (70 ರನ್‌)ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಆಟ ಸಾಗಲಿಲ್ಲ. ನಾಯಕ ಡುಮಿನಿ (3 ರನ್‌), ಡೇವಿಡ್‌ ಮಿಲ್ಲರ್‌ (9 ರನ್‌) ಬೇಗ ಔಟಾದರು. ಆದರೆ ಬೆಹ್ರುದ್ದೀನ್‌ (33 ರನ್‌) ಕೊಂಚ ಹೋರಾಟ ನೀಡಿದರಾದರೂ ಚಹಲ್‌ ಎಸೆತದಲ್ಲಿ ಔಟಾದರು. ಅಲ್ಲಿಂದ ನಂತರ ಪಂದ್ಯ ಭಾರತದ ಕೈವಶವಾಗುವತ್ತ ಸಾಗಿತು.

ಶಿಖರ್‌ ಧವನ್‌ ಬಿರುಸಿನ ಆಟ: ಭಾರತದ ಸ್ಕೋರ್‌ ಇನ್ನೂರರ ಗಡಿ ದಾಟುವಲ್ಲಿ ಎಡಗೈ ಆರಂಭಕಾರ ಶಿಖರ್‌ ಧವನ್‌ ಪಾಲು ಮಹತ್ವದ್ದಾಗಿತ್ತು. 15ನೇ ಓವರ್‌ ತನಕ ಕ್ರೀಸಿಗೆ ಅಂಟಿಕೊಂಡು ಲೀಲಾಜಾಲವಾಗಿ ಬ್ಯಾಟ್‌ ಬೀಸತೊಡಗಿದ ಧವನ್‌ ಕೇವಲ 39 ಎಸೆತಗಳಲ್ಲಿ 72 ರನ್‌ ಬಾರಿಸಿದರು. ಈ ಆಕರ್ಷಕ ಆಟದಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು. ಇದು ಟಿ20 ಕ್ರಿಕೆಟ್‌ನಲ್ಲಿ ಅವರ 4ನೇ ಅರ್ಧ ಶತಕವಾಗಿದೆ. ಧವನ್‌ ಆವರ ಅರ್ಧ ಶತಕ 27 ಎಸೆತಗಳಲ್ಲಿ ಪೂರ್ತಿಗೊಂಡಿತ್ತು.

ಭಾರತದ ಆರಂಭ ಅತ್ಯಂತ ಬಿರುಸಿನಿಂದ ಕೂಡಿತ್ತು. ಪ್ಯಾಟರ್ಸನ್‌ ಅವರ ಮೊದಲ ಓವರಿನಲ್ಲೇ ಸಿಡಿದು ನಿಂತ ರೋಹಿತ್‌ ಶರ್ಮ 2 ಸಿಕ್ಸರ್‌, ಒಂದು ಬೌಂಡರಿ ಸಹಿತ 18 ರನ್‌ ಬಾರಿಸಿ ಅಪಾಯದ ಸೂಚನೆಯಿತ್ತರು. ಆದರೆ ಇದೇ ರಭಸವನ್ನು ಮುಂದುವರಿಸಿಕೊಂಡು ಹೋಗಲು ಅವರಿಂದ ಸಾಧ್ಯವಾಗಲಿಲ್ಲ. ದ್ವಿತೀಯ ಓವರ್‌ ಎಸೆದ ಜೂನಿಯರ್‌ ಡಾಲ, ಕೀಪರ್‌ ಕ್ಲಾಸೆನ್‌ಗೆ ಕ್ಯಾಚ್‌ ಕೊಡಿಸುವ ಮೂಲಕ ರೋಹಿತ್‌ ಆಟಕ್ಕೆ ತೆರೆ ಎಳೆದರು. ವಿಶೇಷವೆಂದರೆ, ಇದು ಕ್ಲಾಸೆನ್‌ ಮತ್ತು ಡಾಲ ಇಬ್ಬರ ಪಾಲಿಗೂ ಪಾದಾರ್ಪಣಾ ಪಂದ್ಯವಾಗಿತ್ತು. ರೋಹಿತ್‌ ಗಳಿಕೆ 9 ಎಸೆತಗಳಿಂದ 21 ರನ್‌ (2 ಬೌಂಡರಿ, 2 ಸಿಕ್ಸರ್‌).

ಸುರೇಶ್‌ ರೈನಾ ವಿಫ‌ಲ: ಬಹಳ ಸಮಯದ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡ ಎಡಗೈ ಆಟಗಾರ ಸುರೇಶ್‌ ರೈನಾ 2ನೇ ಕ್ರಮಾಂಕದಲ್ಲಿ ಇಳಿದು  15 ರನ್‌ ಮಾಡಿದರು (7 ಎಸೆತ, 2 ಬೌಂಡರಿ, 1 ಸಿಕ್ಸರ್‌). ಈ ವಿಕೆಟ್‌ ಕೂಡ ಡಾಲ ಪಾಲಾಯಿತು. ಪುಲ್‌ ಮಾಡುವ ಪ್ರಯತ್ನದಲ್ಲಿ ರೈನಾ ಎಡವಿದರು. ಆಕಾಶಕ್ಕೆ ನೆಗೆದ ಚೆಂಡು ನೇರವಾಗಿ ಡಾಲ ಕೈಗೆ ಬಂದು ಬಿತ್ತು. ಇದಕ್ಕೂ ಮುನ್ನ 7 ರನ್‌ ಮಾಡಿದ್ದ ವೇಳೆ ಮಿಡ್‌ ಆಫ್ನಲ್ಲಿದ್ದ ಬೆಹದೀìನ್‌ ಅವರಿಂದ ರೈನಾ ಜೀವದಾನ ಪಡೆದಿದ್ದರು. ಧವನ್‌-ರೈನಾ 13 ಎಸೆತಗಳಲ್ಲಿ 26 ರನ್‌ ಪೇರಿಸಿದರು. ಪವರ್‌-ಪ್ಲೇ ಅವಧಿಯಲ್ಲಿ ಭಾರತ 2 ವಿಕೆಟಿಗೆ 78 ರನ್‌ ರಾಶಿ ಹಾಕಿತು.

ಧವನ್‌-ಕೊಹ್ಲಿ ಜತೆಗೂಡಿದೊಡನೆ ಭಾರತದ ಬ್ಯಾಟಿಂಗ್‌ ಮತ್ತಷ್ಟು ಬಿರುಸು ಪಡೆದುಕೊಂಡಿತು. ಇವರಿಬ್ಬರು ಕೇವಲ 25 ಎಸೆತಗಳಿಂದ 50 ರನ್‌ ಪೂರ್ತಿಗೊಳಿಸಿ, 3ನೇ ವಿಕೆಟಿಗೆ 59 ರನ್‌ ರಾಶಿ ಹಾಕಿದರು. ಹೀಗಾಗಿ ಭಾರತದ 100 ರನ್‌ ಕೇವಲ 8.2 ಓವರ್‌ಗಳಲ್ಲಿ ಬಂತು. ಕೊಹ್ಲಿ 20 ಎಸೆತಗಳಿಂದ 26 ರನ್‌ ಶಂಸಿಗೆ ಎಲ್‌ಬಿ ಆದರು. ಈ ಡಿಆರ್‌ಎಸ್‌ ತೀರ್ಪು ಬೌಲರ್‌ ಪರವಾಗಿ ಬಂತು.

ಕೊಹ್ಲಿ ನಿರ್ಗಮನದ ಬಳಿಕ ಮನೀಷ್‌ ಪಾಂಡೆ ಜತೆಗೂಡಿ ಇನ್ನಿಂಗ್ಸ್‌ ಬೆಳೆಸಿದ ಧವನ್‌ 4ನೇ ವಿಕೆಟಿಗೆ 47 ರನ್‌ ಪೇರಿಸಿದರು. ಉಳಿದವರಿಗೆ ಹೋಲಿಸಿದರೆ ಪಾಂಡೆ ಆಟ ತುಸು ನಿಧಾನ ಗತಿಯಿಂದ ಕೂಡಿತ್ತು. ಅಜೇಯ 29 ರನ್ನಿಗೆ 27 ಎಸೆತ ಎದುರಿಸಿದರು. ಇದರಲ್ಲಿ ಒಂದೇ ಸಿಕ್ಸರ್‌ ಮಾತ್ರ ಇತ್ತು. ಧವನ್‌ 15ನೇ ಓವರಿನಲ್ಲಿ ಔಟಾದ ಬಳಿಕ ಆಗಮಿಸಿದ ಧೋನಿ 11 ಎಸೆತ ಎದುರಿಸಿ 16 ರನ್‌ ಮಾಡಿದರೆ (2 ಬೌಂಡರಿ), ಹಾರ್ದಿಕ್‌ ಪಾಂಡ್ಯ 7 ಎಸೆತಗಳಿಂದ 13 ರನ್‌ ಮಾಡಿ ಔಟಾಗದೆ ಉಳಿದರು (2 ಬೌಂಡರಿ).

ಟಾಪ್ ನ್ಯೂಸ್

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

lakshmi hebbalkar

CM-DCM ಬದಲಾವಣೆ  ಚರ್ಚೆಯಲ್ಲಿ ನಾನಿಲ್ಲ: ಸಚಿವೆ ಹೆಬ್ಬಾಳ್ಕರ್

prahlad-joshi

Mahadayi ಪ್ರವಾಹ್ ಸಮಿತಿ ಭೇಟಿ ಬಗ್ಗೆ ಬೇರೆ ಅರ್ಥ ಕೊಡಬಾರದು: ಜೋಶಿ

samanta

Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

ಪಂಚಮಸಾಲಿ ಮೀಸಲಾತಿ ಶಿಫಾರಸ್ಸಿಗೆ ಒತ್ತಾಯಿಸಿ ಶಾಸಕರಿಗೆ ಹಕ್ಕೊತ್ತಾಯಪತ್ರ ಸಲ್ಲಿಕೆ

Hubli; ಪಂಚಮಸಾಲಿ ಮೀಸಲಾತಿ ಶಿಫಾರಸ್ಸಿಗೆ ಒತ್ತಾಯಿಸಿ ಶಾಸಕರಿಗೆ ಹಕ್ಕೊತ್ತಾಯಪತ್ರ ಸಲ್ಲಿಕೆ

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-shetl

Badminton: ವಿಶ್ವದ 4ನೇ ಶ್ರೇಯಾಂಕದ ಆಂಟೊನ್ಸೆನ್ ಗೆ ಶಾಕ್ ನೀಡಿದ ಪ್ರಿಯಾಂಶು ರಾಜಾವತ್

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

1-gill

Young India ಟಿ20 ಸರಣಿ; ಹೊಸ ಪೀಳಿಗೆಯ ಕ್ರಿಕೆಟಿಗರ ಆಟ ಆರಂಭ

1-wqewqewq

Team India ತ್ರೋಡೌನ್‌ ಸ್ಪೆಷಲಿಸ್ಟ್‌  ರಾಘವೇಂದ್ರರ ಕುಕ್ಕೆ ಸುಬ್ರಹ್ಮಣ್ಯ ನಂಟು

1—-dsasd

Women’s ಟಿ20 ಪಂದ್ಯ; ದಕ್ಷಿಣ ಆಫ್ರಿಕಾಕ್ಕೆ  ಗೆಲುವು

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

lakshmi hebbalkar

CM-DCM ಬದಲಾವಣೆ  ಚರ್ಚೆಯಲ್ಲಿ ನಾನಿಲ್ಲ: ಸಚಿವೆ ಹೆಬ್ಬಾಳ್ಕರ್

prahlad-joshi

Mahadayi ಪ್ರವಾಹ್ ಸಮಿತಿ ಭೇಟಿ ಬಗ್ಗೆ ಬೇರೆ ಅರ್ಥ ಕೊಡಬಾರದು: ಜೋಶಿ

1-saddsa

Bantwal; ನೇಲ್ಯಪಲ್ಕೆಯಲ್ಲಿ ಬಿರುಗಾಳಿಗೆ ಹಾರಿದ ಅಂಗಡಿಗಳ ಮೇಲ್ಛಾವಣಿ ಶೀಟುಗಳು

samanta

Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.