![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jan 27, 2022, 12:04 PM IST
ಸಿಡ್ನಿ: ಇಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ನ ಪಂದ್ಯ ಅಚ್ಚರಿಯ ಘಟನೆಗೆ ಸಾಕ್ಷಿಯಾಯಿತು. ಪಂದ್ಯ ಗೆಲ್ಲುವ ಸಲುವಾಗಿ ಕೊನೆಯ ಎಸೆತದಲ್ಲಿ ಕೋಚ್ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಿಡ್ನಿ ಸಿಕ್ಸರ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯ ಹಲವು ತಿರುವುಗಳಿಗೆ ಕಾರಣವಾಯಿತು. ಪ್ಲೇ ಆಫ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಡಿಲೇಡ್ 4 ವಿಕೆಟ್ ಗೆ 167 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಸಿಡ್ನಿ ತಂಡಕ್ಕೆ ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿತ್ತು. ನಾನ್ ಸ್ಟ್ರೇಕ್ ನಲ್ಲಿದ್ದ ಜೋರ್ಡಾನ್ ಸಿಲ್ಕ್ ಗಾಯಗೊಂಡ ಕಾರಣ ಅವರಿಗೆ ಓಡಲು ಕಷ್ಟವಾಗುತ್ತದೆ ಎಂದು ಕೋಚ್ ಕೂಡಲೇ ಅವರನ್ನು ಮೈದಾನದಿಂದ ಹೊರಬರಲು ಸೂಚಿಸಿದರು.
ಸಿಲ್ಕ್ ರಿಟೈಡ್ ಔಟ್ ಎಂದು ಘೋಷಿಸಿದ ಕೋಚ್ ಕೊನೆಯ ಎಸೆತಕ್ಕೆ ನಾನ್ ಸ್ಟ್ರೇಕ್ ನಲ್ಲಿ ಗೆ ಜೇ ಲೆಂಟನ್ ಅವರನ್ನು ಕಳುಹಿಸಿದರು. ಕೊನೆಯ ಎಸೆತ ಎದುರಿಸಿದ ಹೇಡನ್ ಕೆರ್ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಸಿಡ್ನಿ ಸಿಕ್ಸರ್ ಫೈನಲ್ ತಲುಪಿತು.
ಇದನ್ನೂ ಓದಿ:ಬೀಚ್ನಲ್ಲಿ ಸ್ಟ್ರೀಟ್ ಫುಡ್ ಅಂಗಡಿಗೆ ನುಗ್ಗಿದ ಕಾರು: ಮಹಿಳೆ ಸಾವು, ಐವರು ಗಂಭೀರ
ಸಿಡ್ನಿ ಸಿಕ್ಸರ್ಸ್ ತಂಡದ ಈ ನಡೆಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಸಿಕ್ಸರ್ ತಂಡದ ನಿರ್ಧಾರವು ಕ್ರೀಡೆಯ ನಿಯಮಗಳಿಗೆ ಒಳಪಟ್ಟಿರಬಹುದು ಆದರೆ ಆಟದ ಸ್ಪೂರ್ತಿಗೆ ವಿರುದ್ಧವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. “ಇದು ನಿಯಮಗಳಲ್ಲಿದೆ ಆದರೆ ಇದು ಬಹುಶಃ ಆಟದ ಸ್ಪೂರ್ತಿಯಲ್ಲಿಲ್ಲ” ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಹೇಳಿದ್ದಾರೆ.
With two needed off the final ball, the Sydney Sixers decided to retire hurt Jordan Silk ?
(via @BBL) pic.twitter.com/YAODQRcGV6
— ESPNcricinfo (@ESPNcricinfo) January 26, 2022
ಶುಕ್ರವಾರ ನಡೆಯಲಿರುವ ಬಿಬಿಎಲ್ ಫೈನಲ್ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವು ಪರ್ತ್ ಸ್ಕಾರ್ಚರ್ಸ್ ತಂಡವನ್ನು ಎದುರಿಸಲಿದೆ.
ಕಣಕ್ಕಿಳಿದ ಕೋಚ್: ಅಡಿಲೇಡ್ ಸ್ಟ್ರೈಕರ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ಪರ ಸಹಾಯಕ ಕೋಚ್ ಕೂಡ ಕಣಕ್ಕಿಳಿಯುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು! ಪಂದ್ಯದ ಆರಂಭಕ್ಕೂ ಮುನ್ನ ಸಿಡ್ನಿ ತಂಡದ ಆರಂಭಿಕ ಮತ್ತು ಕೀಪರ್ ಜೋಶ್ ಫಿಲಿಪ್ಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ಹೊರಗುಳಿದರು. ಆದರೆ ಬದಲಿ ವಿಕೆಟ್ ಕೀಪರ್ ಯಾರೂ ಇರಲಿಲ್ಲ. ಹೀಗಾಗಿ ತಂಡದ ಸಹಾಯಕ ಕೋಚ್ ಜೇ ಲೆಂಟನ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಯಿತು! ಕೊನೆಯ ಎಸೆತದಲ್ಲಿ ನಾನ್ ಸ್ಟ್ರೇಕ್ ಗೆ ಬಂದಿದ್ದು ಇದೇ ಜೇ ಲೆಂಟನ್!
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.