ಕಂಠೀರವದಲ್ಲಿ ಮುರಿದ ಕುರ್ಚಿಗಳು; ಮಹತ್ವದ ಕೂಟದ ವೇಳೆ ಇಂತಹ ಪರಿಸ್ಥಿತಿಯೇಕೆ?


Team Udayavani, Jun 23, 2023, 4:26 PM IST

ಕಂಠೀರವದಲ್ಲಿ ಮುರಿದ ಕುರ್ಚಿಗಳು; ಮಹತ್ವದ ಕೂಟದ ವೇಳೆ ಇಂತಹ ಪರಿಸ್ಥಿತಿಯೇಕೆ?

ಬೆಂಗಳೂರು: ಅಖೀಲ ಭಾರತ ಫುಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸ್ಯಾಫ್ ಕೂಟ ನಗರದ ಕಂಠೀರವ ಮೈದಾನದಲ್ಲಿ ನಡೆಯುತ್ತಿದೆ. ಈ ಹೊತ್ತಿನಲ್ಲಿ ಫುಟ್‌ಬಾಲ್‌ ಮೈದಾನದಲ್ಲಿ ಪ್ರೇಕ್ಷಕರಿಗಾಗಿ ಹಾಕಿರುವ ಕೆಲವು ಕುರ್ಚಿಗಳು ಮುರಿದು ಬಿದ್ದಿರುವ, ಕೂರುವ ಸ್ಥಳವೂ ಗಲೀಜಾಗಿರುವ ಚಿತ್ರಗಳು ಕಂಡುಬಂದಿವೆ.

ಈ ಚಿತ್ರಗಳು ಏಕಕಾಲದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಈ ಮೈದಾನದ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ಕ್ರೀಡಾ ಮತ್ತು ಯುವಜನ ಇಲಾಖೆ ಮೈದಾನವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೇ? ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಕಚೇರಿ ಇಲ್ಲಿಯೇ ಇದ್ದರೂ ಈ ಸಂಸ್ಥೆ ಯಾಕೆ ಅದರ ಬಗ್ಗೆ ಗಮನ ಹರಿಸಿಲ್ಲ? ಬೆಂಗಳೂರಿನ ಅತ್ಯಂತ ಪ್ರಮುಖ ಕ್ರೀಡಾ ಕೇಂದ್ರದಲ್ಲಿ ಯಾಕೆ ಪರಿಸ್ಥಿತಿ? ಕಡೆಯ ಪಕ್ಷ ಮಹತ್ವದ ಕೂಟವನ್ನು ಆಯೋಜಿಸುತ್ತಿರುವಾಗ ಎಐಎಫ್ಎಫ್ ಇದನ್ನೆಲ್ಲ ಯಾಕೆ ಗಮನಿಸಿಲ್ಲ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಕಂಠೀರವ ಮೈದಾನಕ್ಕೆ ಗೇಟ್‌ ನಂ.10ರಿಂದ ಪ್ರವೇಶಿಸಿದರೆ ಅಲ್ಲೇ ಎಡಭಾಗದಲ್ಲಿ ಈ ರೀತಿಯ ಮುರಿದ ಕುರ್ಚಿಗಳು, ಗಲೀಜಾದ ನೆಲ, ಅಸ್ತವ್ಯಸ್ತ ಪರಿಸ್ಥಿತಿ ಕಾಣಿಸುತ್ತದೆ. ಇಂತಹ ಜಾಗಕ್ಕೆ ಅಭಿಮಾನಿಗಳು ಬಂದು ಕುಳಿತುಕೊಳ್ಳಲು ಹೇಗೆ ಸಾಧ್ಯ? ಕ್ರೀಡೆಗಳು ಬೆಳೆಯಲು ಇಂತಹ ಸಣ್ಣಪುಟ್ಟ ಸಂಗತಿಗಳನ್ನು ಗಮನಿಸುವುದು ಅನಿವಾರ್ಯವಲ್ಲವೇ ಎಂಬುದು ಈಗ ಕೇಳಲೇಬೇಕಾಗಿರುವ ಪ್ರಶ್ನೆ.

ಮುರಿದುಬಿದ್ದಿರುವ ಕುರ್ಚಿಗಳು, ಗಲೀಜಾಗಿರುವ ನೆಲವನ್ನು ನೋಡಿದರೆ ಅದು ಹೊಸತಾಗಿ ಆಗಿರುವಂತೆ ಕಾಣುತ್ತಿಲ್ಲ. ಬಹಳ ಹಿಂದೆಯೇ ಇಂತಹದ್ದೊಂದು ಪರಿಸ್ಥಿತಿ ಉಂಟಾಗಿದೆ. ಅರ್ಥಾತ್‌ ನಿರ್ವಹಣೆ ಮಾಡದೆಯೇ ಬಹಳ ಸಮಯ ಕಳೆದುಹೋಗಿದೆ. ಕಂಠೀರವ ಮೈದಾನದಲ್ಲೇ 2022ರಲ್ಲಿ ಖೇಲೋ ಇಂಡಿಯಾ ವಿವಿ ಗೇಮ್ಸ್‌ ನಡೆದಿತ್ತು. ಕೇಂದ್ರ ಗೃಹಸಚಿವ ಅಮಿತ್‌ ಶಾ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕರ್ನಾಟಕ ಅಥ್ಲೆಟಿಕ್ಸ್‌ನ ಹೆಮ್ಮೆಯಾಗಿರುವ ಈ ಮೈದಾನದಲ್ಲಿ ಸತತವಾಗಿ ಕೂಟಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ನಿರ್ವಹಣೆ ಏಕೆ ಕಳಪೆಯಾಗಿದೆ ಎಂಬ ಪ್ರಶ್ನೆಗೆ ಕರ್ನಾಟಕ ಕ್ರೀಡಾ ಇಲಾಖೆ ಉತ್ತರಿಸಬೇಕಾಗುತ್ತದೆ.

ಇದನ್ನೂ ಓದಿ:ವಿಮಾನ ಹೈಜಾಕ್ ಕುರಿತು ಮೊಬೈಲ್ ಸಂಭಾಷಣೆ… ವಿಮಾನ ಪ್ರಯಾಣಿಕ ಮುಂಬೈ ಪೊಲೀಸರ ವಶಕ್ಕೆ

ಕರ್ನಾಟಕ ಒಲಿಂಪಿಕ್‌ ಸಂಸ್ಥೆಯೂ ಇದಕ್ಕೆ ಉತ್ತರದಾಯಿಯಾಗಿದೆ. ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಗಮನಿಸುವ ಪ್ರಮುಖ ಹೊಣೆಗಾರಿಕೆ ಕೆಒಎಯದ್ದೇ. ಇಂತಹ ವಿಚಾರಗಳನ್ನು ಅದು ಗಮನ ಕೊಟ್ಟು ಸರಿಪಡಿಸಬೇಕು. ಅದನ್ನು ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರವೇನು ಎಂದು ಕ್ರೀಡಾಭಿಮಾನಿಗಳು ಕೇಳುತ್ತಿದ್ದಾರೆ.

ಸದ್ಯ ಎಐಎಫ್ಎಫ್ ಈ ಮೈದಾನದಲ್ಲಿ ಫುಟ್‌ಬಾಲ್‌ ಪಂದ್ಯಗಳನ್ನು ನಡೆಸುತ್ತಿದೆ. ಅದು ವಿಷಯವನ್ನು ಗಮನಿಸ ಬೇಕಾಗಿತ್ತಾದರೂ, ಈ ಮೈದಾನದ ನಿರ್ವಹಣೆಯಲ್ಲಿ ಅದು ಯಾವುದೇ ಪಾತ್ರವನ್ನು ವಹಿಸಲು ಸಾಧ್ಯವಿಲ್ಲ. ಇದರ ನೇರ ಉಸ್ತುವಾರಿ ರಾಜ್ಯ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್‌ ಸಂಸ್ಥೆಗೆ ಬರುತ್ತದೆ ಎಂದು ಮೂಲಗಳು ಹೇಳಿವೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಸಂಸ್ಥೆಗಳು ಬೇಗ ಹರಿಸಬೇಕೆನ್ನುವುದೇ ಕ್ರೀಡಾಭಿಮಾನಿಗಳ ಕಾಳಜಿ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.