Buchi Babu ಕ್ರಿಕೆಟ್ ಇಂದಿನಿಂದ: ಸೂರ್ಯಕುಮಾರ್, ಶ್ರೇಯಸ್ ಅಯ್ಯರ್ ಆಕರ್ಷಣೆ
Team Udayavani, Aug 27, 2024, 6:31 AM IST
ಕೊಯಮತ್ತೂರು: ಬುಚ್ಚಿಬಾಬು ಕ್ರಿಕೆಟ್ ಕೂಟದ ಪಂದ್ಯದಲ್ಲಿ ಮುಂಬಯಿ ತಂಡವು ತಮಿಳುನಾಡು ಕ್ರಿಕೆಟ್ ಅಸೋಸಿಯೆಶನ್ (ಟಿಎನ್ಸಿಎ) ಇಲೆವೆನ್ ತಂಡವನ್ನು ಎದುರಿಸಲಿದೆ. ಮಂಗಳವಾರದಿಂದ ಆರಂಭವಾಗುವ ಈ ಪಂದ್ಯದಲ್ಲಿ ಟೆಸ್ಟ್ ಬಾಳ್ವೆಗೆ ಮರಳಲು ಸಿದ್ಧತೆ ನಡೆಸುತ್ತಿರುವ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಸಫìರಾಜ್ ಖಾನ್ ಆಕರ್ಷಣೆಯಾಗಿದ್ದಾರೆ.
ಮುಂಬಯಿ ತಂಡದ ಅಂಗವಾಗಿರುವ ಶ್ರೇಯಸ್ ಕೂಡ ಟೆಸ್ಟ್ ತಂಡಕ್ಕೆ ಮರಳಲು ಹಾತೊರೆಯುತ್ತಿದ್ದು ಈ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ನೀಡಲು ಉತ್ಸುಕರಾಗಿದ್ದಾರೆ. ಖ್ಯಾತ ಆಟಗಾರರನ್ನು ಒಳಗೊಂಡ ಮುಂಬಯಿ ತಂಡವನ್ನು ಸಫìರಾಜ್ ಖಾನ್ ನೇತೃತ್ವ ವಹಿಸಿದ್ದಾರೆ. ಅವರು ಕೂಡ ಟೆಸ್ಟ್ ತಂಡಕ್ಕೆ ಮರಳಲು ಸ್ಪರ್ಧೆಯಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳಿಗೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಬೇರೆ ಬೇರೆ ಕಾರಣಕ್ಕೆ ಆಯ್ಕೆಗೆ ಲಭ್ಯವಿಲ್ಲದ ಕಾರಣ ಸೂರ್ಯ, ಶ್ರೇಯಸ್ ಅವರಿಗಿದು ಈ ಪಂದ್ಯ ಅತೀಮುಖ್ಯವಾಗಿದೆ. ಮುಂಬಯಿಯ ಎದುರಾಳಿ ಟಿಎನ್ಸಿಎ ಇಲೆಲೆನ್ ತಂಡವನ್ನು ಆರ್. ಸಾಯಿ ಕಿಶೋರ್ ಮುನ್ನಡೆಸಲಿದ್ದಾರೆ. ಅವರು ಕಳೆದ ಋತುವಿನ ರಣಜಿ ಟ್ರೋಫಿಯಲಿಜÉ ಗರಿಷ್ಠ ವಿಕೆಟ್ ಕಿತ್ತ ಸಾಧಕರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nagamangala Case: “ಟಾರ್ಗೆಟ್ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ
Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ
Ramanagara: ಎಚ್ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ
Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು
BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.