![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 27, 2022, 12:16 AM IST
ಟೋಕಿಯೊ: ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಪುರುಷರ ಡಬಲ್ಸ್ನಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಪದಕವೊಂದು ಒಲಿದು ಬರಲಿದೆ. ಇದನ್ನು ಖಾತ್ರಿಗೊಳಿಸಿದವರು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ. ಇವರಿಬ್ಬರೂ ಸೆಮಿಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆಗೈದರು. ಆದರೆ ಪುರುಷರ ಸಿಂಗಲ್ಸ್ನಲ್ಲಿ ಎಡವಿದ ಎಚ್.ಎಸ್. ಪ್ರಣಯ್ ಪದಕದಿಂದ ವಂಚಿತರಾಗಬೇಕಾಯಿತು.
ಶುಕ್ರವಾರ ನಡೆದ ಜಿದ್ದಾಜಿದ್ದಿ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ 7ನೇ ನಂಬರ್ ಜೋಡಿಯಾದ ಸಾತ್ವಿಕ್-ಚಿರಾಗ್ ಸೇರಿಕೊಂಡು ಜಪಾನ್ನ ಟಕುರೊ ಹೊಕಿ-ಯುಗೊ ಕೊಬಯಾಶಿ ಅವರನ್ನು 24-22, 15-21, 21-14 ಅಂತರದಿಂದ ಮಣಿಸಿದರು. ಒಂದು ಗಂಟೆ, 15 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.
ಸಾತ್ವಿಕ್-ಚಿರಾಗ್ ಕಳೆದ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಇಲ್ಲಿಯೂ ದೊಡ್ಡ ಪದಕವೊಂದರ ನಿರೀಕ್ಷೆ ಇರಿಸಲಾಗಿದೆ. ಸೆಮಿಫೈನಲ್ನಲ್ಲಿ ಇವರ ಎದುರಾಳಿ ಮಲೇಷ್ಯಾದ ಆರನ್ ಚಿಯ-ಸೋಹ್ ವೂಯಿ ಯಿಕ್.
ಪ್ರಣಯ್ಗೆ ಸೋಲು
ಭಾರತದವರೇ ಆದ ಲಕ್ಷ್ಯ ಸೇನ್ ಅವರನ್ನು ಮಣಿಸಿ ಮುನ್ನಡೆದಿದ್ದ ಎಚ್.ಎಸ್. ಪ್ರಣಯ್ ಅವರ ಆಟ ಚೀನದ ಜಾವೊ ಜುನ್ ಪೆಂಗ್ ಮುಂದೆ ಸಾಗ ಲಿಲ್ಲ. ಪೆಂಗ್ 19-21, 21-6, 21-18 ರಿಂದ ಪ್ರಣಯ್ ಅವರನ್ನು ಪರಾಭವ ಗೊಳಿಸಿ ಸೆಮಿಫೈನಲ್ ತಲುಪಿದರು.
ಪುರುಷರ ಡಬಲ್ಸ್ನಲ್ಲಿ ಕಣದಲ್ಲಿದ್ದ ಭಾರತದ ಮತ್ತೊಂದು ಜೋಡಿ ಎಂ.ಆರ್. ಅರ್ಜುನ್-ಧ್ರುವ ಕಪಿಲ 3 ಬಾರಿಯ ಚಾಂಪಿಯನ್ ಮೊಹಮ್ಮದ್ ಅಹಸಾನ್-ಹೆಂಡ್ರಾ ಸೆತಿಯವಾನ್ ಕೈಯಲ್ಲಿ 8-21, 14-21 ಅಂತರದಿಂದ ಸೋತಿತು.
ಭಾರತ ಗೆದ್ದ
13ನೇ ಪದಕ
ಇದು ವಿಶ್ವ ಚಾಂಪಿಯನ್ಶಿಪ್ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಒಲಿಯಲಿರುವ ದ್ವಿತೀಯ ಪದಕ. ಇದಕ್ಕೂ ಮುನ್ನ 2011ರ ವನಿತಾ ಡಬಲ್ಸ್ನಲ್ಲಿ ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಕಂಚಿನ ಪದಕ ತಂದಿತ್ತಿದ್ದರು.
ಒಟ್ಟಾರೆಯಾಗಿ ಈ ಕೂಟದಲ್ಲಿ ಭಾರತದ 13ನೇ ಪದಕ ಇದಾಗಲಿದೆ. ಇದರಲ್ಲಿ ಗರಿಷ್ಠ 5 ಪದಕಗಳನ್ನು ಗೆದ್ದ ಹಿರಿಮೆ ಪಿ.ವಿ. ಸಿಂಧು ಅವರದು. 2019ರಲ್ಲಿ ಅವರು ಬಂಗಾರದಿಂದ ಸಿಂಗಾರಗೊಂಡಿದ್ದರು. ಸೈನಾ ನೆಹ್ವಾಲ್ 2 ಪದಕ ಜಯಿಸಿದ್ದಾರೆ (ಬೆಳ್ಳಿ, ಕಂಚು). ಕೆ. ಶ್ರೀಕಾಂತ್ (ಬೆಳ್ಳಿ), ಪ್ರಕಾಶ್ ಪಡುಕೋಣೆ (ಕಂಚು), ಲಕ್ಷ್ಯ ಸೇನ್ (ಕಂಚು) ಮತ್ತು ಬಿ. ಸಾಯಿ ಪ್ರಣೀತ್ (ಕಂಚು) ಇತರ ಪದಕವೀರರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.