![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 12, 2020, 6:46 AM IST
ಪೋರ್ಟ್ ಆಫ್ ಸ್ಪೇನ್: 2020ರ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಕ್ರಿಕೆಟ್ ಪಂದ್ಯಾವಳಿ ಆ. 18ರಿಂದ ಸೆ. 20ರ ತನಕ ಸಾಗಲಿದೆ.
ಎಲ್ಲ ಪಂದ್ಯಗಳು ಟ್ರಿನಿಡಾಡ್ ಆ್ಯಂಡ್ ಟೊಬಾಗೊದ ರಾಜಧಾನಿ ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆಯಲಿವೆ.
ಸ್ಥಳೀಯ ಸರಕಾರ ಅನುಮತಿ ನೀಡಿದ ಬಳಿಕ ಈ ಕೂಟವನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಇದರೊಂದಿಗೆ ಕೋವಿಡ್-19 ಕಾಲದಲ್ಲಿ ನಡೆಯಲಿರುವ ಮೊದಲ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆ ಸಿಪಿಎಲ್ನದ್ದಾಗಿದೆ.
ಇದರಲ್ಲಿ ವಿದೇಶಿಗರೂ ಪಾಲ್ಗೊಳ್ಳಲಿದ್ದಾರೆ. ಇವರೆಲ್ಲ ಇಲ್ಲಿಗೆ ಆಗಮಿಸುವ ಮುನ್ನ ಹಾಗೂ ಆಗಮಿಸಿದ ಬಳಿಕ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.
ಎಲ್ಲ ತಂಡಗಳ ಆಟಗಾರರು ಮತ್ತು ಅಧಿಕಾರಿಗಳು ಒಂದೇ ಹೊಟೇಲಿನಲ್ಲಿ ತಂಗಲಿದ್ದು, ಎಲ್ಲರೂ ಮೊದಲೆರಡು ವಾರ ಕಟ್ಟುನಿಟ್ಟಾಗಿ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇ ಕಿದೆ ಎಂದು ಸಿಪಿಎಲ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ವೀಕ್ಷಕರಿಗೆ ಪ್ರವೇಶವಿಲ್ಲ
ಈ ಕೂಟಕ್ಕೆ ವೀಕ್ಷಕರ ನಿರ್ಬಂಧ ಇರಲಿದ್ದು, ಪಂದ್ಯಗಳೆಲ್ಲ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆ. ರಶೀದ್ ಖಾನ್, ಮಾರ್ಕಸ್ ಸ್ಟೋಯಿನಿಸ್, ರಾಸ್ ಟೇಲರ್, ಕಾರ್ಲೋಸ್ ಬ್ರಾತ್ವೇಟ್, ಡ್ವೇನ್ ಬ್ರಾವೊ, ಕೈರನ್ ಪೊಲಾರ್ಡ್ ಮೊದಲಾದ ಸ್ಟಾರ್ ಆಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ.
48 ವರ್ಷದ ಪ್ರವೀಣ್ ತಾಂಬೆ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಮೊದಲ ಕ್ರಿಕೆಟಿಗ. ಇವರು ಟ್ರಿನ್ಬಾಂಗೊ ನೈಟ್ರೈಡರ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕೆರಿಬಿಯನ್ನಲ್ಲಿ ಕೋವಿಡ್ 19 ಈವರೆಗೆ ದೊಡ್ಡ ಮಟ್ಟದಲ್ಲೇನೂ ವ್ಯಾಪಿಸಿಲ್ಲ. ಟ್ರಿನಿಡಾಡ್ನಲ್ಲಿ ಈವರೆಗೆ 133 ಪ್ರಕರಣಗಳಷ್ಟೇ ಕಂಡುಬಂದಿವೆ. ಹೀಗಾಗಿ ಇಲ್ಲಿ ಇಡೀ ಕೂಟವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.