![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 9, 2018, 6:55 AM IST
ಮುಂಬೈ: ಹನ್ನೊಂದನೇ ಆವೃತ್ತಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಸೋಲಿನ ಆರಂಭ ಪಡೆದಿದೆ. ಮಾಲೀಕರ ಬೆಟ್ಟಿಂಗ್ ಪ್ರಕರಣದಿಂದಾಗಿ 2 ವರ್ಷ ಐಪಿಎಲ್ನಿಂದ ನಿಷೇಧಕ್ಕೆ ಒಳಗಾಗಿ ಈಗ ವಾಪಸ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ರೋಚಕ 1 ವಿಕೆಟ್ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಸ್ಪರ್ಧಾತ್ಮಕ 166 ರನ್ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲಿ ಮುಂಬೈ ದಾಳಿಗೆ ಸಿಲುಕಿ ಕುಸಿಯಿತು. ನಂತರ ಚೇತರಿಸಿ ಕೊಂಡು ಮುನ್ನುಗ್ಗಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಡ್ವೇನ್ ಬ್ರಾವೋ (68 ರನ್) ಅರ್ಧಶತಕ ಹೋರಾಟದಿಂದಾಗಿ 19.5 ಓವರ್ಗೆ 9 ವಿಕೆಟ್ಗೆ 169 ರನ್ಗಳಿಸಿ ರೋಚಕ ಗೆಲುವು ದಾಖಲಿಸಿತು.
ಮಾಯಾಂಕ್, ಹಾರ್ದಿಕ್ ಮಾರಕ ದಾಳಿ: ಇದೇ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಪಂಜಾಬ್ ಸ್ಪಿನ್ನರ್ ಮಾಯಾಂಕ್ ಮಾರ್ಕಂಡೆ (23ಕ್ಕೆ3) ಹಾಗೂ ಹಾರ್ದಿಕ್ ಪಾಂಡ್ಯ (24ಕ್ಕೆ 3) ವಿಕೆಟ್ ಮಿಂಚಿನ ದಾಳಿ ನಡೆಸಿದರು. ಸಿಎಸ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಪತನಕ್ಕೆ ಪ್ರಮುಖ ಕಾರಣರಾದರು. ರೈನಾ (4 ರನ್)ಹಾಗೂ ಧೋನಿ (5 ರನ್)ಗಳಿಸಿ ಔಟಾಗಿದ್ದು ಚೆನ್ನೈಗೆ ಕಷ್ಟದ ಹಾದಿಯನ್ನು ತಂದೊಡ್ಡಿತು. ಆದರೆ ಮಕ್ಲೆನಗನ್ ಅವರು ಎಸೆದ 18ನೇ ಓವರ್ನಲ್ಲಿ 2 ಸಿಕ್ಸರ್, 1 ಬೌಂಡರಿ,ಹಾಗು ಬುಮ್ರಾ ಎಸೆತದ
19ನೇ ಓವರ್ನಲ್ಲಿ 3 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಕೊನೆ ಓವರ್ನಲ್ಲಿ 7 ರನ್ ಅಗತ್ಯವಿತ್ತು. ಈ ಹಂತದಲ್ಲಿ ಕೇದಾರ್ ಜಾಧವ್ (ಅಜೇಯ 24 ರನ್) ಮುಸ್ತಾμಜುರ್ ಎಸೆತದಲ್ಲಿ ಸಿಕ್ಸರ್ವೊಂದನ್ನು ಸಿಡಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.
ಮುಂಬೈ ನಿಧಾನ ಅರಂಭ: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಬರೀ 20 ರನ್ಗಳಾಗುವಾಗ ಎವಿನ್ ಲೆವಿಸ್ ಮತ್ತು ನಾಯಕ ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡಿತು. ಈ ಪತನದ ನಂತರ ತಂಡದ ಸ್ಥಿತಿ ಸುಧಾರಿಸಿತು. ಕಿರಿಯ ಕ್ರಿಕೆಟಿಗ, ಭಾರತ 19 ವಯೋಮಿತಿಯೊಳಗಿನ ತಂಡದ ಮಾಜಿ ನಾಯಕ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆಸಿ 29 ಎಸೆತದಲ್ಲಿ 40 ರನ್ ಗಳಿಸಿದರು.
ಇವರೊಂದಿಗೆ ನಂಬಿಕಸ್ಥ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಸಿಡಿದರು. ಅವರು 29 ಎಸೆತದಲ್ಲಿ 43 ರನ್ ಗಳಿಸಿದರು. ಈ ಎರಡು ಜೋಡಿಗೆ ಅಂತಿಮ ಹಂತದಲ್ಲಿ ನೆರವಿಗೆ ಬಂದಿದ್ದು ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಸಹೋದರರು.ಅದರಲ್ಲೂ ಕೃಣಾಲ್ ಪಾಂಡ್ಯ ಬರೀ 22 ಎಸೆತದಲ್ಲಿ 41 ರನ್ ರುಬ್ಬಿದರು. ಅದರಲ್ಲಿ 5 ಬೌಂಡರಿ, 2 ಸಿಕ್ಸರ್ ಸೇರಿದ್ದವು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.