Chess Olympiad: ಚೆಸ್ ಸಾಧಕರಿಗೆ ಮೋದಿ ಸಮ್ಮಾನ
Team Udayavani, Sep 25, 2024, 11:16 PM IST
ಹೊಸದಿಲ್ಲಿ: ಬುಡಾಪೆಸ್ಟ್ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ಹಾಗೂ ವನಿತಾ ತಂಡಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಮ್ಮಾನಿಸಿದರು. ಭಾರತದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದರು.
ಡಿ. ಗುಕೇಶ್, ಅರ್ಜುನ್ ಎರಿಗೇಸಿ, ಆರ್. ಪ್ರಜ್ಞಾನಂದ, ವಿದಿತ್ ಗುಜರಾತಿ, ಪಿ. ಹರಿಕೃಷ್ಣ, ಆರ್. ವೈಶಾಲಿ, ಡಿ. ಹರಿಕಾ, ತಾನಿಯಾ ಸಚ್ದೇವ್, ದಿವ್ಯಾ ದೇಶ್ಮುಖ್, ವಂತಿಕಾ ಅಗರ್ವಾಲ್ ಭಾರತದ ವಿಜೇತ ತಂಡದ ಸದಸ್ಯರಾಗಿದ್ದರು.
ಈ ಸಂದರ್ಭದಲ್ಲಿ ವಿಜೇತ ಆಟಗಾರರು ಮೋದಿ ಅವರಿಗೆ ಚೆಸ್ ಬೋರ್ಡ್ ಒಂದನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಜ್ಞಾನಂದ ಮತ್ತು ಅರ್ಜುನ್ ಅವರು “ಕ್ವಿಕ್’ ಗೇಮ್ ಒಂದನ್ನು ಆಡಿದರು. ಇದನ್ನು ಮೋದಿ ಅವರು ಬಹಳ ಕುತೂಹಲದಿಂದ ವೀಕ್ಷಿಸಿದರು.
3.2 ಕೋಟಿ ರೂ. ಬಹುಮಾನ
ಚೆಸ್ ಒಲಿಂಪಿಯಾಡ್ ಪ್ರಶಸ್ತಿ ವಿಜೇತರಿಗೆ ಎಐಎಫ್ಸಿ ಅಧ್ಯಕ್ಷ ನಿತಿನ್ ನಾರಂಗ್ 3.2 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.
ಮೋದಿ ಭೇಟಿ ಮಾಡಲು ಭಾಕು ಕೂಟದಿಂದ ಹಿಂದೆ ಸರಿದ ವಿದಿತ್
ಚೆಸ್ ಒಲಿಂಪಿಯಾಡ್ನಲ್ಲಿ ಭಾರತ ಮೊದಲ ಸಲ ಚಿನ್ನದ ಪದಕ ಗೆಲ್ಲಲು ಮಹತ್ತರ ಪಾತ್ರ ವಹಿಸಿದ್ದ ವಿದಿತ್, ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾಕು ತಲುಪಿದ್ದರು. ಆದರೆ ಅಷ್ಟರಲ್ಲಿ, ಪ್ರಧಾನಿ ಮೋದಿ ಅವರು ಚೆಸ್ ಒಲಿಂಪಿಯಾಡ್ ಚಾಂಪಿಯನ್ ಆಟಗಾರರನ್ನು ಸಮ್ಮಾನಿಸುವ ಸುದ್ದಿ ತಿಳಿದ ಕಾರಣ ತವರಿಗೆ ವಾಪಸಾದರು.
“ಗೌರವಾನ್ವಿತ ಪ್ರಧಾನಿಯವರು ನಮ್ಮನ್ನು ಸಮ್ಮಾನಿಸುವ ವಿಷಯ ತಿಳಿಯಿತು. ನಾನು ಈ ಕಾರ್ಯಕ್ರಮದ ಭಾಗವಾಗಲು ಬಯಸಿದ್ದೇನೆ. ಅಲ್ಪಾವಧಿಯಲ್ಲೇ ಅವರು ನಮಗಾಗಿ ಬಿಡುವು ಮಾಡಿಕೊಂಡಿರುವುದು ಸಂತಸ ತಂದಿದೆ’ ಎಂದು ವಿದಿತ್ “ಎಕ್ಸ್’ನಲ್ಲಿ ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Macau Open 2024: ಮಕಾವು ಬ್ಯಾಡ್ಮಿಂಟನ್: ಶ್ರೀಕಾಂತ್, ಆಯುಷ್ ಮುನ್ನಡೆ
England Test Series: ಇಂಗ್ಲೆಂಡ್ ಟೆಸ್ಟ್ ಸರಣಿಗೆ ಪಾಕಿಸ್ಥಾನ ತಂಡ ಪ್ರಕಟ
Harry Brook: ಮೊದಲ ಶತಕ, ಮೊದಲ ಜಯ… ಮೂರನೇ ಏಕದಿನ ಇಂಗ್ಲೆಂಡ್ ಪಾಲಿಗೆ
Irani Cup: ಶೇಷ ಭಾರತಕ್ಕೆ ಋತುರಾಜ್ ಗಾಯಕ್ವಾಡ್ ನಾಯಕ
Women’s T20 World Cup; ಟಿ20 ವಿಶ್ವಕಪ್ಗೆ ಹೊರಟು ನಿಂತ ವನಿತೆಯರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್ ಪಟ್ಟು, ಪ್ರತಿಭಟನೆ
Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ
MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್
MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್
Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.