ಕಾಮನ್ವೆಲ್ತ್ ಗೇಮ್ಸ್ 2022: ಬಾಕ್ಸಿಂಗ್; ಅಮಿತ್ ಪಂಘಲ್, ನೀತು ಫೈನಲ್ಗೆ
ಉಪಾಂತ್ಯದಲ್ಲಿ ಮೆರೆದಾಡಿದ ಭಾರತೀಯ ಸ್ಪರ್ಧಿಗಳು
Team Udayavani, Aug 6, 2022, 10:25 PM IST
ಬರ್ಮಿಂಗ್ ಹ್ಯಾಮ್: ಭಾರತದ ಖ್ಯಾತ ಬಾಕ್ಸರ್ ಅಮಿತ್ ಪಂಘಲ್ 51 ಕೆಜಿ ವಿಭಾಗದಲ್ಲಿ ಫೈನಲ್ಗೇರಿದ್ದಾರೆ. ಇನ್ನು ಮಹಿಳೆಯರ 48 ಕೆಜಿ ವಿಭಾಗದಲ್ಲಿ ನೀತು ಘಂಘಾಸ್ ಕೂಡ ಫೈನಲ್ಗೇರಿದ್ದಾರೆ. ಇಬ್ಬರಿಗೂ ಕನಿಷ್ಠ ಬೆಳ್ಳಿ ಖಾತ್ರಿಯಾಗಿದೆ. ಅಮಿತ್ ಪಂಘಲ್ 2018 ಕಾಮನ್ವೆಲ್ತ್ನಲ್ಲಿ ಫೈನಲ್ಗೇರಿ, ಬೆಳ್ಳಿ ಗೆದ್ದಿದ್ದರು. ಇನ್ನು ನೀತುಗೆ ಇದೇ ಮೊದಲ ಕೂಟವಾಗಿದೆ.
ಅಮಿತ್ ಸೆಮಿಫೈನಲ್ನಲ್ಲಿ ಝಾಂಬಿಯದ ಪ್ಯಾಟ್ರಿಕ್ ಚಿನ್ಯೆಂಬ ವಿರುದ್ಧ 5-0 ಅಂಕಗಳಿಂದ ಗೆದ್ದರು. ಇಡೀ ಪಂದ್ಯ ಏಕಪಕ್ಷೀಯವಾಗಿ ನಡೆದರೂ, ಆರಂಭಿಕ ಸುತ್ತಿನಲ್ಲಿ ಅಮಿತ್ ತುಸು ಹಿನ್ನಡೆ ಅನುಭವಿಸಿದ್ದರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದ ಅಮಿತ್, ಇಲ್ಲಿ ಆ ತಪ್ಪನ್ನು ಮಾಡಲು ಹೋಗಲಿಲ್ಲ. ಅದ್ಭುತ ಹೊಡೆತಗಳನ್ನು ಬಾರಿಸಿ ಹಿನ್ನಡೆಯನ್ನು ನಿವಾರಿಸಿಕೊಂಡರು. ಪ್ರಸ್ತುತ 26 ವರ್ಷದ ಅಮಿತ್ 2018ರ ಏಷ್ಯಾಡ್ನಲ್ಲಿ ಚಿನ್ನ ಗೆದ್ದಿದ್ದಾರೆ.
ಆಕ್ರಮಣಕಾರಿ ನೀತು: ಮಹಿಳೆಯರ 48 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಕೆನಡಾದ ಪ್ರಿಯಾಂಕಾ ಧಿಲ್ಲೋನ್ ವಿರುದ್ಧ ನೀತು ಘಂಘಾಸ್ ಗೆದ್ದರು. ಈ ಪಂದ್ಯ ಆರ್ಎಸ್ಸಿ (ರೆಫರಿ ಸ್ಟಾಪ್ಡ್ ಕಂಟೆಸ್ಟ್) ರೀತಿಯಲ್ಲಿ ಮುಗಿಯಿತು. ನೀತು ಆಕ್ರಮಣಕಾರಿ ಆಟ, ಎದುರಾಳಿಯ ಸ್ಥಿತಿಯನ್ನು ಗಮನಿಸಿ ರೆಫರಿಯೇ ಪಂದ್ಯವನ್ನು ನಿಲ್ಲಿಸಿದರು!
ನೀತು ರಕ್ಷಣೆಯನ್ನಿಟ್ಟುಕೊಳ್ಳದೇ ಎದುರಾಳಿಯನ್ನು ಮುಕ್ತವಾಗಿ ಆಹ್ವಾನಿಸಿದರು. ಎದುರಾಳಿಯ ಮುಖಕ್ಕೆ ನೇರವಾಗಿ ಹೊಡೆಯುತ್ತ, ಎರಡೂ ಕೈಗಳನ್ನು ಬಳಸಿಕೊಂಡು ಆಕ್ರಮಣ ಮಾಡುತ್ತ ಸಾಗಿದರು. ಇದು ಎದುರಾಳಿಯನ್ನು ಅಕ್ಷರಶಃ ತಬ್ಬಿಬ್ಟಾಗಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.