![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Dec 12, 2023, 6:00 AM IST
ವಿಜಯವಾಡ: ಭರ್ತಿ ಒಂದು ದಶಕದ ಬಳಿಕ ಭಾರತದ ಕ್ರಿಕೆಟ್ ಸ್ಕೋರ್ಕಾರ್ಡ್ ನಲ್ಲಿ ದ್ರಾವಿಡ್ ಮತ್ತು ಸೆಹವಾಗ್ ಹೆಸರು ಕಂಡುಬಂದಿದೆ. ಆದರೆ ಇದು ಸೀನಿಯರ್ಗಳದ್ದಲ್ಲ, ಜೂನಿಯರ್ಗಳದ್ದು!
ಸೋಮವಾರ ಇಲ್ಲಿ ಆರಂಭಗೊಂಡ “ವಿಜಯ್ ಮರ್ಚಂಟ್ ಟ್ರೋಫಿ’ ಅಂಡರ್-16 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ-ದಿಲ್ಲಿ ತಂಡಗಳು ಮುಖಾಮುಖಿಯಾಗಿವೆ. ಈ ತ್ರಿದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹವಾಗ್ ಅವರ ಪುತ್ರರು ಆಡಲಿಳಿದಿದ್ದಾರೆ.
ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವವರು ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್. ಇನ್ನೊಂದೆಡೆ ವೀರೇಂದ್ರ ಸೆಹವಾಗ್ ಪುತ್ರ ಆರ್ಯವೀರ್ ಸೆಹವಾಗ್ ದಿಲ್ಲಿ ತಂಡದ ಇನ್ನಿಂಗ್ಸ್ ಆರಂಭಿಸಿದರು.
ಮೊದಲ ದಿನದಾಟದಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿಳಿದ ಜೂನಿಯರ್ ದ್ರಾವಿಡ್ ಖಾತೆ ತೆರೆಯದೆ ಔಟಾದರೆ, ಜೂನಿಯರ್ ಸೆಹವಾಗ್ 50 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅನ್ವಯ್ ಅವರನ್ನು ದಿಲ್ಲಿಯ ಯಶಸ್ವಿ ಬೌಲರ್ ಆಯುಷ್ ಲಾಕ್ರಾ 2ನೇ ಎಸೆತದಲ್ಲೇ ಬೌಲ್ಡ್ ಮಾಡಿದರು.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 144ಕ್ಕೆ ಆಲೌಟಾಗಿದ್ದು, ದಿಲ್ಲಿ ಒಂದು ವಿಕೆಟಿಗೆ 107 ರನ್ ಗಳಿಸಿದೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.