ರಾಹುಲ್ ಆಸ್ಪೋಟ, ಬೆಚ್ಚಿ ಬಿದ್ದ ಚೆನ್ನೈ
Team Udayavani, Oct 8, 2021, 7:59 AM IST
ದುಬೈ: ತನ್ನ ಕಟ್ಟಕಡೆಯ ಲೀಗ್ ಪಂದ್ಯದಲ್ಲಿ ಚೆನ್ನೈಯನ್ನು 6 ವಿಕೆಟ್ಗಳಿಂದ ಪಂಜಾಬ್ ಕಿಂಗ್ಸ್ ತಂಡ ಸೋಲಿಸಿದೆ. ದೊಡ್ಡ ಅಂತರದಲ್ಲಿ ಗೆದ್ದು ರನ್ರೇಟ್ ಹೆಚ್ಚಿಸಿಕೊಳ್ಳಬೇಕಿದ್ದ ಪಂಜಾಬ್, ಗುರುವಾರದ ಮೊದಲ ಪಂದ್ಯದಲ್ಲಿ ಈ ಯೋಜನೆಯಲ್ಲಿ ಬಹುತೇಕ ಯಶಸ್ಸು ಸಾಧಿಸಿತು.
ಚೆನ್ನೈಯನ್ನು 20 ಓವರ್ಗಳಲ್ಲಿ 6 ವಿಕೆಟಿಗೆ 134 ರನ್ಗಳಿಗೆ ನಿಯಂತ್ರಿಸಿದ ಪಂಜಾಬ್, ಬಳಿಕ ಕೇವಲ 13 ಓವರ್ ಗಳಲ್ಲಿ 4 ವಿಕೆಟಿಗೆ 139 ರನ್ ಬಾರಿಸಿ ತನ್ನ 6ನೇ ಗೆಲುವನ್ನು ದಾಖಲಿಸಿತು. ಈ ಸೋಲಿನಿಂದ ಅಗ್ರಸ್ಥಾನಕ್ಕೆ ನೆಗೆಯುವ ಧೋನಿ ಪಡೆಯ ಯೋಜನೆ ವಿಫಲಗೊಂಡಿತು.
ಈ ಪಂದ್ಯವನ್ನು 10-11 ಓವರ್ಗಳಲ್ಲಿ ಅಥವಾ 7-8 ವಿಕೆಟ್ಗಳ ಅಂತರದಲ್ಲಿ ಗೆದ್ದದ್ದಿ ದ್ದರೆ ಪಂಜಾಬ್ ತಂಡದ ರನ್ರೇಟ್ನಲ್ಲಿ ಉತ್ತಮ ಪ್ರಗತಿಯಾಗಿ ಅದು “ಪ್ಲಸ್’ಗೆ ಏರುತ್ತಿತ್ತು. ಸದ್ಯ ಮೈನಸ್ನಲ್ಲೇ ಉಳಿದಿದೆ. ಆದರೆ ಅಂಕಪಟ್ಟಿಯಲ್ಲಿ ಮುಂಬೈಯನ್ನು ಹಿಂದಿಕ್ಕುವಲ್ಲಿ ಪಂಜಾಬ್ ಯಶಸ್ವಿಯಾಗಿದೆ ಎಂಬುದೊಂದು ಹೆಚ್ಚುಗಾರಿಕೆ.
ರಾಹುಲ್ ರಾಕೆಟ್ ವೇಗ…: ನಾಯಕ ಕೆ.ಎಲ್. ರಾಹುಲ್ ರಾಕೆಟ್ ವೇಗದ ಬೀಸುಗೆಯಲ್ಲಿ ಬಾರಿಸಿದ ಅಜೇಯ 98 ರನ್ ಸಾಹಸ ಎನ್ನುವುದು ಪಂಜಾಬ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಒಂದು ತುದಿಯಲ್ಲಿ ಕ್ರೀಸ್ ಆಕ್ರಮಿಸಿಕೊಂಡು ಚೆನ್ನೈ ಬೌಲರ್ಗಳ ಮೇಲೆರಗಿ ಹೋದ ರಾಹುಲ್ ಕೇವಲ 42 ಎಸೆತಗಳಿಂದ ಈ ಪಂದ್ಯಶ್ರೇಷ್ಠ ಇನಿಂಗ್ಸ್ ಕಟ್ಟಿದರು.
8 ಸಿಕ್ಸರ್, 7 ಫೋರ್ ಸಿಡಿಸಿದ್ದು ರಾಹುಲ್ ಅವರ ಕಪ್ತಾನನ ಆಟಕ್ಕೆ ಹಾಗೂ ಏಕಾಂಗಿ ಹೋರಾಟಕ್ಕೆ ಸಾಕ್ಷಿ. ರಾಹುಲ್ ಅವರ ಬ್ಯಾಟಿಂಗ್ ಸಾಹಸವನ್ನು ಇನ್ನೊಂದು ಮಾನದಂಡದಿಂದಲೂ ಅಳೆಯ ಬಹುದು. ಅವರನ್ನು ಹೊರತುಪಡಿಸಿ ದರೆ ಉಳಿದವರ್ಯಾರಿಂದಲೂ ಗಮನಾರ್ಹ ಕೊಡುಗೆ ಸಂದಾಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್ : ಚೆನ್ನೈ 20 ಓವರ್, 134/6 (ಡು ಪ್ಲೆಸಿಸ್ 76, ಕ್ರಿಸ್ ಜೋರ್ಡಾನ್ 20ಕ್ಕೆ 2). ಪಂಜಾಬ್ 13 ಓವರ್, 139/4 (ರಾಹುಲ್ 98, ಶಾದ್ರೂಲ್ ಠಾಕೂರ್ 28ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.