![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 4, 2022, 10:06 PM IST
ಬರ್ಮಿಂಗ್ಹ್ಯಾಮ್: ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಮತ್ತೂಂದು ಪದಕ ಒಲಿದಿದೆ. ಇದನ್ನು ತಂದಿತ್ತವರು ಗುರುದೀಪ್ ಸಿಂಗ್.
ಇದೇ ಮೊದಲ ಸಲ ಗೇಮ್ಸ್ನಲ್ಲಿ ಪ್ರತಿನಿಧಿಸಿದ, 26 ವರ್ಷದ ಗುರುದೀಪ್ 109 ಪ್ಲಸ್ ಕೆಜಿ ವಿಭಾಗದಲ್ಲಿ ಒಟ್ಟು 390 ಕೆಜಿ (167 ಪ್ಲಸ್ 223 ಕೆಜಿ) ಭಾರವನ್ನೆತ್ತಿ ತೃತೀಯ ಸ್ಥಾನಿಯಾದರು.
ಚಿನ್ನ ಪಾಕಿಸ್ಥಾನದ ಪಾಲಾಯಿತು. ಮುಹ ಮ್ಮದ್ ನೂಹ್ ಬಟ್ 405 ಕೆಜಿ ಭಾರವೆತ್ತಿ ನೂತನ ದಾಖಲೆ ನಿರ್ಮಿಸಿದರು (173 ಪ್ಲಸ್ 232 ಕೆಜಿ). ನ್ಯೂಜಿಲ್ಯಾಂಡಿನ ಡೇವಿಡ್ ಆ್ಯಂಡ್ರೂé ಲಿಟಿ 394 ಕೆಜಿ ತೂಕದೊಂದಿಗೆ ಬೆಳ್ಳಿ ಗೆದ್ದರು (170 ಪ್ಲಸ್ 224 ಕೆಜಿ).
ಗುರುದೀಪ್ ಅವರ ಸ್ನ್ಯಾಚ್ ಆರಂಭ ತೀರಾ ಸಾಮಾನ್ಯ ಮಟ್ಟದಲ್ಲಿತ್ತು. ಮೊದಲ ಪ್ರಯತ್ನದಲ್ಲಿ 167 ಕೆಜಿ ಎತ್ತಲು ವಿಫಲರಾದರು. ದ್ವಿತೀಯ ಸುತ್ತಿನಲ್ಲಿ ಯಶಸ್ಸು ಕಂಡರು. ಆದರೆ 3ನೇ ಸುತ್ತಿನಲ್ಲಿ 173 ಕೆಜಿ ಎತ್ತಲು ಸಾಧ್ಯವಾಗಲಿಲ್ಲ.
ಹ್ಯಾಮರ್ ತ್ರೋ : ಪದಕ ಸುತ್ತಿಗೆ ಮಂಜು ಬಾಲಾ :
ಬರ್ಮಿಂಗ್ಹ್ಯಾಮ್: ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಮಂಜು ಬಾಲಾ ಪದಕ ಸುತ್ತು ಪ್ರವೇಶಿಸಿದ್ದಾರೆ. ಆದರೆ ಸರಿತಾ ಸಿಂಗ್ ಈ ಹಂತ ಮುಟ್ಟಲು ವಿಫಲರಾದರು.
33 ವರ್ಷದ ಮಂಜು ಬಾಲಾ ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನ ಪಡೆದರು. ಇವರ ಗರಿಷ್ಠ ದೂರ 59.68 ಮೀ. ಆಗಿತ್ತು. ಇದು ಮೊದಲ ಎಸೆತದಲ್ಲೇ ದಾಖಲಾಯಿತು. ಕೆನಡಾದ ಕ್ಯಾಮ್ರಿನ್ ರೋಜರ್ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನಿಯಾದರು (74.68 ಮೀ.). ಇದು ಗೇಮ್ಸ್ ದಾಖಲೆಯೂ ಆಗಿದೆ.
ಸರಿತಾ ಸಿಂಗ್ 13ನೇ ಸ್ಥಾನಕ್ಕೆ ಕುಸಿದರು. ಇವರೆಸೆದ ಗರಿಷ್ಠ ದೂರ 57.48 ಮೀ. ಆಗಿತ್ತು. ಕಡೇ ಪಕ್ಷ 12ನೇ ಸ್ಥಾನಕ್ಕೆ ಬಂದರೂ ಸರಿತಾಗೆ ಫೈನಲ್ ಪ್ರವೇಶ ಲಭಿಸುತ್ತಿತ್ತು.
ಹ್ಯಾಮರ್ ತ್ರೋ ಫೈನಲ್ ಸ್ಪರ್ಧೆ ಶನಿವಾರ ಸಾಗಲಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.