![Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ](https://www.udayavani.com/wp-content/uploads/2024/07/udupi-415x253.jpg)
9 ವರ್ಷ ಬಳಿಕ ಬಿಬಿಎಲ್ ಆಡಲಿದ್ದಾರೆ ಡೇವಿಡ್ ವಾರ್ನರ್
Team Udayavani, Aug 21, 2022, 11:30 PM IST
![9 ವರ್ಷ ಬಳಿಕ ಬಿಬಿಎಲ್ ಆಡಲಿದ್ದಾರೆ ಡೇವಿಡ್ ವಾರ್ನರ್](https://www.udayavani.com/wp-content/uploads/2022/08/Aus-1-620x403.jpg)
ಸಿಡ್ನಿ: ಆಸ್ಟ್ರೇಲಿಯದ ಎಡಗೈ ಓಪನರ್ ಡೇವಿಡ್ ವಾರ್ನರ್ 9 ವರ್ಷಗಳ ಬಳಿಕ “ಬಿಗ್ ಬಾಶ್ ಲೀಗ್’ನಲ್ಲಿ ಆಡಲಿದ್ದಾರೆ.
“ಬಿಗ್ ಬಾಶ್ಗೆ ಮರಳಲು ಬಹಳ ಖುಷಿಯಾಗುತ್ತಿದೆ. ನಾನು ಕ್ರಿಕೆಟ್ ಆರಂಭಿಸಿದ ಕ್ಲಬ್ ಪರವಾಗಿ ಮತ್ತೆ ಆಡಲಿರುವುದು ಹೆಮ್ಮೆಯ ಸಂಗತಿ’ ಎನ್ನುವ ಮೂಲಕ ಡೇವಿಡ್ ವಾರ್ನರ್ ತಮ್ಮ ಪುನರಾಗಮನವನ್ನು ಸಾರಿದರು.
ಡೇವಿಡ್ ವಾರ್ನರ್ ಪ್ರತಿನಿಧಿಸಲಿರುವ ತಂಡ “ಸಿಡ್ನಿ ಥಂಡರ್’. ಇದಕ್ಕೂ ಮೊದಲು, ಆರಂಭದ ಹಾಗೂ ಮೂರನೇ ಬಿಬಿಎಲ್ನಲ್ಲಿ ಅವರು ಈ ತಂಡದ ಪರವಾಗಿ ಆಡಿದ್ದರು.
ಸಿಡ್ನಿ ಥಂಡರ್ ಈ ಬಾರಿ ನೂತನ ನಾಯಕನನ್ನು ಕಾಣಬೇಕಿದೆ. ಈ ತಂಡದ ಕ್ಯಾಪ್ಟನ್ ಆಗಿದ್ದ ಉಸ್ಮಾನ್ ಖ್ವಾಜಾ ಈ ಬಾರಿ ಬ್ರಿಸ್ಬೇನ್ ಹೀಟ್ ಪಾಲಾಗಿದ್ದಾರೆ.
12ನೇ ಆವೃತ್ತಿಯ ಬಿಬಿಎಲ್ ಡಿ. 13ರಿಂದ ಫೆ. 4ರ ತನಕ ನಡೆಯಲಿದೆ. ಆಟಗಾರರ ಯಾದಿ ಆ. 28ರಂದು ಬಿಡುಗಡೆಯಾಗಲಿದೆ. ರಶೀದ್ ಖಾನ್, ಕೈರನ್ ಪೊಲಾರ್ಡ್, ಡ್ವೇನ್ ಬ್ರಾವೊ ಮೊದಲಾದ ವಿದೇಶಿ ಸ್ಟಾರ್ ಆಟಗಾರರು ಈ ಯಾದಿಯಲ್ಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
![Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ](https://www.udayavani.com/wp-content/uploads/2024/07/udupi-415x253.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ](https://www.udayavani.com/wp-content/uploads/2024/07/udupi-150x91.jpg)
Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ
![NANGI-KADALKORETA](https://www.udayavani.com/wp-content/uploads/2024/07/NANGI-KADALKORETA-150x100.jpg)
Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್ ವ್ಯೂ ರೆಸಾರ್ಟ್ ಸಮುದ್ರ ಪಾಲಾಗುವ ಸಾಧ್ಯತೆ
![Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು](https://www.udayavani.com/wp-content/uploads/2024/07/MARAVANTE-150x94.jpg)
Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು
![Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ](https://www.udayavani.com/wp-content/uploads/2024/07/raga-2-150x89.jpg)
Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ
![Police-Head](https://www.udayavani.com/wp-content/uploads/2024/07/Police-Head-150x86.jpg)
Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.