![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 18, 2022, 11:15 PM IST
ಲಿಲ್ಲೆಹ್ಯಾಮರ್ (ನಾರ್ವೆ): ಭಾರತ ವಿರುದ್ಧದ ಡೇವಿಸ್ ಕಪ್ ವಿಶ್ವಗುಂಪು-1ರ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಆತಿಥೇಯ ನಾರ್ವೆ 3-1 ಅಂತರದ ಗೆಲುವು ಸಾಧಿಸಿ ಕ್ವಾಲಿಫೈಯರ್ ಸುತ್ತಿಗೆ ಅರ್ಹತೆ ಸಂಪಾದಿಸಿದೆ.
ಭಾರತವಿನ್ನು ಸ್ಪರ್ಧೆಯಲ್ಲಿ ಉಳಿಯಬೇಕಾದರೆ ವಿಶ್ವ ಗುಂಪು ಪ್ಲೇಆಫ್ ನಲ್ಲಿ ಸ್ಪರ್ಧಿಸಿ ಜಯ ಸಾಧಿಸಬೇಕಿದೆ. ಇಲ್ಲಿ ವಿಶ್ವ ಗುಂಪು-2 ವಿಜೇತ ತಂಡವೊಂದು ಎದುರಾಗಲಿದೆ.
ಭಾರತ 0-3 ಹಿನ್ನಡೆಗೆ ಸಿಲುಕಿದ ಬಳಿಕ ಔಪಚಾರಿಕವಾಗಿ ಒಂದು ರಿವರ್ಸ್ ಸಿಂಗಲ್ಸ್ ಪಂದ್ಯವನ್ನು ಆಡಲಾಯಿತು. ಆಡದವರಿಗೆ ಇಲ್ಲಿ ಅವಕಾಶ ಸಿಕ್ಕಿತು. ಸುಮಿತ್ ನಾಗಲ್ ಭಾರತದ ಏಕೈಕ ಗೆಲುವಿಗೆ ಸಾಕ್ಷಿಯಾದರು. ಅವರು ಲುಕಾಸ್ ಹೆಲ್ಲಮ್ ಲಿಲ್ಲಿಂಜೆನ್ ವಿರುದ್ಧ 6-2, 6-1 ಅಂತರದಿಂದ ಗೆದ್ದು ಬಂದರು.
ಮೊದಲ ಸಿಂಗಲ್ಸ್ನಲ್ಲಿ ಪ್ರಜ್ಞೇಶ್ ಗುಣೇಶ್ವರನ್ ವಿಶ್ವದ ನಂ.2 ಆಟಗಾರ, ಯುಎಸ್ ಓಪನ್ ಫೈನಲಿಸ್ಟ್ ಕ್ಯಾಸ್ಪರ್ ರೂಡ್ ಅವರಿಗೆ ಶರಣಾದರು. ಅಂತರ 1-6, 4-6. ದ್ವಿತೀಯ ಸಿಂಗಲ್ಸ್ನಲ್ಲಿ ರಾಮ್ಕುಮಾರ್ ರಾಮನಾಥನ್ ತಮಗಿಂತ ಕೆಳ ರ್ಯಾಂಕಿಂಗ್ನ ವಿಕ್ಟರ್ ಡುರಸೋವಿಕ್ ವಿರುದ್ಧ 1-6, 4-6ರಿಂದ ಎಡವಿದರು. ಡಬಲ್ಸ್ನಲ್ಲಿ ಯೂಕಿ ಭಾಂಬ್ರಿ-ಸಾಕೇತ್ ಮೈನೇನಿ ಕೂಡ ಪರಾಭವಗೊಂಡರು. ಕ್ಯಾಸ್ಪರ್ ರೂಡ್-ವಿಕ್ಟರ್ ಡುರಸೋವಿಕ್ ವಿರುದ್ಧ 3-6, 6-3, 3-6 ಅಂತರದ ಸೋಲಿಗೆ ಸಿಲುಕಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.