ಸೆರೆನಾ ಪಂದ್ಯಗಳನ್ನು ಬಹಿಷ್ಕರಿಸಲು ನಿರ್ಧಾರ
Team Udayavani, Sep 13, 2018, 6:50 AM IST
ನ್ಯೂಯಾರ್ಕ್: ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ಸೆರೆನಾ ವಿಲಿಯಮ್ಸ್ನ ವರ್ತನೆಯನ್ನು ಖಂಡಿಸಿರುವ ಟೆನಿಸ್ ಅಂಪಾಯರ್ಗಳು ಸೆರೆನಾ ಅವರ ಭವಿಷ್ಯದ ಪಂದ್ಯಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ನವೋಕಾ ಒಸಾಕಾ ವಿರುದ್ಧದ ಪೈನಲ್ ಪಂದ್ಯದ ವೇಳೆ ಸೆರೆನಾ ವಿಲಿಯಮ್ಸ್ ಪಂದ್ಯದ ಅಂಪಾಯರ್ ರಾಮೋಸ್ ಅವರನ್ನು “ಸುಳ್ಳುಗಾರ, ಕಳ್ಳ’ಎಂದು ಅನುಮೋದಿಸಿದ್ದರು. ಇದನ್ನು ಖಂಡಿಸಿರುವ ಅಂಪಾಯರ್ಗಳು ಸೆರೆನಾ ಕ್ಷಮೆ ಕೇಳುವವರೆಗೂ ಸೆರೆನಾ ಇರುವ ಪಂದ್ಯಗಳನ್ನು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದ್ದಾರೆ.
ಆರು ಬಾರಿ ಯುಎಸ್ ಓಪನ್ ವಿಜೇತ ಸೆರೆನಾ ವಿಲಿಯಮ್ಸ್ ಫೈನಲ್ನಲ್ಲಿ ಕೋಚ್ನಿಂದ ಮಾರ್ಗದರ್ಶನ ಪಡೆಯುತ್ತಿ ದ್ದುದ್ದನ್ನು ಗಮನಿಸಿದ ಅಂಪಾಯರ್ ಪ್ರತಿ ಸ್ಪರ್ಧಿಗೆ ಹೆಚ್ಚುವರಿ ಅಂಕವನ್ನು ನೀಡಿದ್ದರು. ಇದರಿಂದ ಕೋಪಗೊಂಡ ಸೆರೆನಾ ಅಂಪಾಯರ್ ಅನ್ನು “ಸುಳ್ಳುಗಾರ, ಕಳ್ಳ, ಜನಾಂಗಿಯ ನಿಂದನೆ ಮಾಡಿದ್ದಾರೆ ಎಂದೆಲ್ಲ ಕೂಗಾಡಿದ್ದರು. ಈ ವರ್ತನೆಗೆ ಯುನೈಟೆಡ್ ಸ್ಟೇಟ್ಸ್ ಟೆನಿಸ್ ಅಸೋಸಿಯೇಶನ್ (ಯುಎಸ್ಟಿಎ)17 ಸಾವಿರ ಡಾಲರ್ ದಂಡ ವಿಧಿಸಿತ್ತು.
ಅಂಪಾಯರ್ಗಳ ತಂಡವೊಂದು ಇಂತಹ ಅನೇಕ ಸಂದರ್ಭಗಳಲ್ಲಿ ಯುಎಸ್ಟಿಎ ಅಂಪಾಯರ್ಗಳ ಬೆಂಬಲಕ್ಕೆ ಬಂದಿಲ್ಲ ಎಂದು ದೂರಿವೆ. ವಿಲಿಯಮ್ಸ್ ಪಂದ್ಯಗಳನ್ನು ಬಹಿಷ್ಕರಿ ಸುವ ಬಗ್ಗೆ ಅಂಪಾಯರ್ಗಳ ಗುಂಪು ಮಾತುಕತೆ ನಡೆಸುತ್ತಿದ್ದು, ಇಂತಹ ಸನ್ನಿವೇಶಗಳ ಮರುಕಳಿಸಬಾರದು ಎಂಬ ಕಾರಣಕ್ಕೆ ಅಂಪಾಯರ್ಗಳ ಯೂನಿಯನ್ ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.