ಮೊದಲ ಫೈನಲ್‌ ಕನಸಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌

ಇಂದು ಮುಂಬೈ-ಡೆಲ್ಲಿ ಮೊದಲ ಕ್ವಾಲಿಫೈಯರ್‌ ಸೆಣಸಾಟ ಗೆದ್ದವರಿಗೆ ನೇರ ಫೈನಲ್‌; ಸೋತವರಿಗೆ ಇನ್ನೊಂದು ಚಾನ್ಸ್‌

Team Udayavani, Nov 5, 2020, 5:55 AM IST

IPL-2ಮೊದಲ ಫೈನಲ್‌ ಕನಸಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌

ದುಬಾೖ: ಒಂದು ದಿನದ ವಿರಾಮದ ಬಳಿಕ 2020ರ ಐಪಿಎಲ್‌ ಪಂದ್ಯಾವಳಿ ಮತ್ತೂಂದು ಸುತ್ತಿನ ಕುತೂಹಲಕ್ಕೆ ಸಜ್ಜಾಗಲಿದೆ. ಲೀಗ್‌ ಹಂತದ ಮೊದಲೆರಡು ಸ್ಥಾನ ಪಡೆದ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಗುರುವಾರ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಗೆದ್ದವರರು ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದ್ದಾರೆ. ಸೋತವರಿಗೇನೂ ನಷ್ಟವಿಲ್ಲ, ಅವರ ಮುಂದೆ ಇನ್ನೊಂದು ಅವಕಾಶ ತೆರೆದುಕೊಳ್ಳಲಿದೆ.

ಡೆಲ್ಲಿ ಅಷ್ಟೇನೂ ಜನಪ್ರಿಯ ಹಾಗೂ ಸ್ಟಾರ್‌ ತಂಡವಲ್ಲ. ಭಾರೀ ಸಂಖ್ಯೆಯ ಅಭಿಮಾನಿಗಳನ್ನೂ ಹೊಂದಿಲ್ಲ. ಆದರೆ ಸತತ 4 ಸೋಲುಗಳ ಆಘಾತದ ನಡುವೆಯೂ ಅಂತಿಮ ಲೀಗ್‌ ಪಂದ್ಯದಲ್ಲಿ ಬಲಿಷ್ಠ ಆರ್‌ಸಿಬಿಯನ್ನು 6 ವಿಕೆಟ್‌ಗಳಿಂದ ಉರುಳಿಸಿದ ಖುಷಿಯಲ್ಲಿದೆ. ಇದರಿಂದ ಅದಕ್ಕೆ ದ್ವಿತೀಯ ಸ್ಥಾನದ ಅದೃಷ್ಟ ಒಲಿಯಿತು. ಇಲ್ಲಿಂದಾಚೆಯೂ ತಂಡಕ್ಕೆ ಲಕ್‌ ಇದೆಯೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ!

ಡೆಲ್ಲಿ ಐಪಿಎಲ್‌ ಇತಿಹಾಸದಲ್ಲಿ ಒಮ್ಮೆಯೂ ಚಾಂಪಿಯನ್‌ ಆದ ತಂಡವಲ್ಲ. ಅಷ್ಟೇಕೆ, ಫೈನಲ್‌ ಮುಖವನ್ನೂ ಕಂಡ ತಂಡ ಅದಲ್ಲ. ಈ ಬಾರಿ ಅದು ನೂತನ ಇತಿಹಾಸ ಬರೆದೀತೇ ಎಂಬ ಕುತೂಹಲ ಎಲ್ಲರದು.

ಲೀಗ್‌ನಲ್ಲಿ ಎರಡು ಸೋಲು
ಶ್ರೇಯಸ್‌ ಅಯ್ಯರ್‌ ನೇತೃತ್ವದ ಡೆಲ್ಲಿ ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ ಮುಂಬೈಗೆ ಶರಣಾಗಿತ್ತು. ಎರಡೂ ಸಂದರ್ಭಗಳಲ್ಲಿ ಅದು ಮೊದಲು ಬ್ಯಾಟಿಂಗ್‌ ನಡೆಸಿತ್ತು, ಮುಂಬೈ ಯಶಸ್ವಿಯಾಗಿ ರನ್‌ ಚೇಸ್‌ ಮಾಡಿತ್ತು. ಈ ಎರಡು ಸೋಲಿಗೆ ಕ್ವಾಲಿಫೈಯರ್‌ನಲ್ಲಿ ಸೇಡು ತೀರಿಸುವುದು ಡೆಲ್ಲಿಯ ಯೋಜನೆ. ಆದರೆ ಅಸ್ಥಿರ ಬ್ಯಾಟಿಂಗ್‌ ಮತ್ತು ಸೀಮಿತ ಸಾಮರ್ಥ್ಯದ ಬೌಲಿಂಗ್‌ ಡೆಲ್ಲಿ ಪಾಲಿನ ಚಿಂತೆಯ ಸಂಗತಿಯಾಗಿದೆ.

ಬ್ಯಾಟಿಂಗ್‌ ವಿಭಾಗದಲ್ಲಿ ಪೃಥ್ವಿ ಶಾ, ರಿಷಭ್‌ ಪಂತ್‌ ಬದ್ಧತೆಯನ್ನು ತೋರಬೇಕಾದ ಅಗತ್ಯವಿದೆ. ಅವಕಾಶ ಪಡೆದರೆ ಹೆಟ್‌ಮೈರ್‌ ಸಿಡಿದು ನಿಲ್ಲಬೇಕಿದೆ. ಶಿಖರ್‌ ಧವನ್‌ (525 ರನ್‌), ಶ್ರೇಯಸ್‌ ಅಯ್ಯರ್‌ (421 ರನ್‌) ಮಾತ್ರ ಈ ವರೆಗೆ ಡೆಲ್ಲಿಯ ನಂಬುಗೆಯ ಬ್ಯಾಟ್ಸ್‌ಮನ್‌ಗಳಾಗಿ ಗೋಚರಿದ್ದಾರೆ. ಕಳೆದ ಪಂದ್ಯದಲ್ಲಿ ರಹಾನೆ ಅರ್ಧ ಶತಕ ಬಾರಿಸಿ ತಂಡಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.

ಡೆಲ್ಲಿಯ ಬೌಲಿಂಗ್‌ ಆಫ್ರಿಕಾದ ವೇಗಿಗಳಾದ ಕಾಗಿಸೊ ರಬಾಡ, ಅನ್ರಿಚ್‌ ನೋರ್ಜೆ; ಭಾರತದ ಸ್ಪಿನ್‌ದ್ವಯರಾದ ರವಿಚಂದ್ರನ್‌ ಅಶ್ವಿ‌ನ್‌, ಅಕ್ಷರ್‌ ಪಟೇಲ್‌ ಅವರನ್ನು ಅವಲಂಬಿಸಿದೆ.

ಮುಂಬೈ ಹೆಚ್ಚು ಬಲಿಷ್ಠ
4 ಬಾರಿಯ ಚಾಂಪಿಯನ್‌ ಮುಂಬೈ ಈ ಕೂಟದ ಅತ್ಯಂತ ಬಲಾಡ್ಯ ತಂಡ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡ್‌ ಸಾಮರ್ಥ್ಯದಲ್ಲಿ ಮುಂಬೈಯನ್ನು ಮೀರಿಸುವವರಿಲ್ಲ. ನಾಯಕ ರೋಹಿತ್‌ ಶರ್ಮ ಮರಳಿದ್ದರಿಂದ ತಂಡಕ್ಕೆ ಹೆಚ್ಚಿನ ಬಲ ಬಂದಿದೆ ನಿಜ, ಆದರೆ ರೋಹಿತ್‌ ಇಲ್ಲದೆಯೂ ಅದು ಗೆಲುವಿನ ರುಚಿ ಕಂಡಿದೆ. ಮಂಗಳವಾರ ಹೈದರಾಬಾದ್‌ಗೆ 10 ವಿಕೆಟ್‌ಗಳಿಂದ ಸೋತರೂ ಮುಂಬೈಯ ಕ್ವಾಲಿಫೈಯರ್‌ ಸ್ಪರ್ಧೆಯ ಗೇಮ್‌ಪ್ಲ್ರಾನ್‌ ಮಾತ್ರ ಬೇರೆಯೇ ಆಗಿರಲಿದೆ!

ಲೀಗ್‌ ಸುತ್ತಿನಲ್ಲಿ ಮುಂಬೈ-ಡೆಲ್ಲಿ
1. ಮುಂಬೈಗೆ 5 ವಿಕೆಟ್‌ ಜಯ
2. ಮುಂಬೈಗೆ 9 ವಿಕೆಟ್‌ ಜಯ

ಟಾಪ್ ನ್ಯೂಸ್

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.