![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 12, 2019, 5:35 AM IST
ಮ್ಯಾಂಚೆಸ್ಟರ್: ವಿಶ್ವಕಪ್ ಸೆಮಿಫೈನಲ್ನಲ್ಲಿ ಗೆಲುವಿನ ಅಂಚಿನವರೆಗೆ ಭಾರತ ತಂಡವನ್ನು ಕೊಂಡೊಯ್ದಿದ್ದ ಎಂ.ಎಸ್. ಧೋನಿ ರನೌಟ್ ಆಗಿ ಕ್ರೀಡಾಂಗಣದಿಂದ ಹೊರ ನಡೆದಾಗ ಕಣ್ಣೀರಿನ ಜತೆ ಉಕ್ಕಿ ಬಂದ ಭಾವನೆಗಳನ್ನು ತಡೆಹಿಡಿದಿದ್ದಾರೆ.
ತನ್ನ ಕೊನೆಯ ವಿಶ್ವಕಪ್ನಲ್ಲಿ ಭಾರತವನ್ನು ಗೆಲ್ಲಿಸಲಾಗಲಿಲ್ಲ ಎನ್ನುವ ನೋವು ಧೋನಿಯನ್ನು ಕಾಡಿತ್ತು. ಅಪಾರ ನೋವಿನ ನಡುವೆಯೂ ಕಣ್ಣೀರನ್ನು ತಡೆಹಿಡಿಯುತ್ತ ಧೋನಿ ಪೆವಿಲಿಯನ್ ಕಡೆಗೆ ನಡೆಯುತ್ತಿದ್ದ ಸನ್ನಿವೇಶ ಸಹಸ್ರಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೃದಯ ಹಿಂಡಿದ ಅನುಭವ ನೀಡಿತ್ತು. ಅಗ್ರ ಆಟಗಾರರ ಕಳಪೆ ಬ್ಯಾಟಿಂಗ್ ಬಳಿಕ ಜಡೇಜ-ಧೋನಿ ಶ್ರೇಷ್ಠ ಆಟ ಪ್ರದರ್ಶಿಸಿ ಭಾರತದ ಗೆಲುವಿನ ಆಸೆ ಚಿಗುರಿಸಿದ್ದರು. ಕೊನೆಯ 9 ಎಸೆತದಲ್ಲಿ 24 ರನ್ ಬೇಕಿದ್ದಾಗ ಗಪ್ಟಿಲ್ ನಡೆಸಿದ ರನೌಟ್ಗೆ ಧೋನಿ ಬಲಿಯಾಗಿದ್ದರು. ಬಳಿಕ ಭಾರತ ಸೋಲು ಖಚಿತವಾಗಿತ್ತು. ಔಟಾಗುವ ವೇಳೆ ಧೋನಿ ತನ್ನ ಭಾವ ನೆಗಳನ್ನು ಬಚ್ಚಿಟ್ಟುಕೊಳ್ಳಲು ನಡೆಸಿದ ಪ್ರಯತ್ನ, ಕಣ್ಣೀರನ್ನು ತಡೆಹಿಡಿದದ್ದು ನೇರ ಪ್ರಸಾರದ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸಿತ್ತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.