Duleep Trophy: ಫೈನಲ್ ಕಾವೇರಪ್ಪ ದಾಳಿಗೆ ಕುಸಿದ ಪಶ್ಚಿಮ
Team Udayavani, Jul 14, 2023, 6:10 AM IST
ಬೆಂಗಳೂರು: ದುಲೀಪ್ ಟ್ರೋಫಿ ಕ್ರಿಕೆಟ್ ಕೂಟದ ಫೈನಲ್ ತೀವ್ರ ಪೈಪೋಟಿಯಿಂದ ಸಾಗುತ್ತಿದೆ. ಪಂದ್ಯದ ದ್ವಿತೀಯ ದಿನ ದಕ್ಷಿಣ ವಲಯದ ವೇಗಿಗಳ ದಾಳಿಗೆ ಹಠಾತ್ ಕುಸಿದ ಪಶ್ಚಿಮ ವಲಯ ದಿನದಾಟದ ಅಂತ್ಯಕ್ಕೆ 129 ರನ್ನಿಗೆ 7 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಲು ಪಶ್ಚಿಮ ಇನ್ನೂ 84 ರನ್ ಗಳಿಸಬೇಕಾಗಿದೆ. ಈ ಮೊದಲು ದಕ್ಷಿಣ ವಲಯ ಮೊದಲ ಇನ್ನಿಂಗ್ಸ್ನಲ್ಲಿ 213 ರನ್ ಗಳಿಸಿ ಆಲೌಟಾಗಿತ್ತು.
ಉತ್ತಮ ಆರಂಭ
ಎಚ್ಚರಿಕೆಯ ಆಟವಾಡಿದ ಪಶ್ಚಿ ಮದ ಅಗ್ರ ಕ್ರಮಾಂಕದ ಆಟಗಾ ರರು ಉತ್ತಮ ಮೊತ್ತ ಪೇರಿಸಲು ಪ್ರಯತ್ನಿಸಿದರು. ಪೃಥಿ ಶಾ ಜವಾ ಬ್ದಾರಿಯಿಂದ ಆಡಿ ತಂಡವನ್ನು ರಕ್ಷಿಸುವ ಭಾರ ಹೊತ್ತರು. ಅವರು ಪ್ರಿಯಾಂಕ್ ಪಾಂಚಾಲ್ ಮತ್ತು ಹಾರ್ವಿಕ್ ದೇಸಾಯಿ ಜತೆಗೆ ಉತ್ತಮ ಜತೆ ಯಾಟದ ಆಟ ಆಡಲು ಶ್ರಮ ವಹಿಸಿದರು. ಹಾರ್ವಿಕ್ ದೇಸಾಯಿ ತಂಡದ ಮೊತ್ತ 97 ತಲುಪಿದಾಗ ಔಟಾದರು. ಆಬಳಿಕ ಪಶ್ಚಿಮ ಕುಸಿಯುತ್ತಲೇ ಹೋಯಿತು. ಮೊತ್ತ 124 ತಲುಪಿದಾಗ 7 ವಿಕೆಟ್ ಕಳೆದುಕೊಂಡಿತ್ತು. ಅಂದರೆ 17 ರನ್ ಅಂತರದಲ್ಲಿ ತಂಡದ 5 ವಿಕೆಟ್ ಉರುಳಿತ್ತು. ಏಕಾಂಗಿಯಾಗಿ ಹೋರಾಡಿದ ಪೃಥ್ವಿ ಶಾ 65 ರನ್ ಹೊಡೆದರು. ವಿದ್ವತ್ ಕಾವೇರಪ್ಪ ಮಾರಕ ದಾಳಿ ಸಂಘಟಿಸಿ ನಾಲ್ಕು ವಿಕೆಟ್ ಪಡೆದಿದ್ದರು.
ಸಂಕ್ಷಿಪ್ತ ಸ್ಕೋರು
ದಕ್ಷಿಣ ವಲಯ 213; ಪಶ್ಚಿಮ ವಲಯ 7 ವಿಕೆಟಿಗೆ 129 (ಪೃಥ್ವಿ ಶಾ 65, ಹಾರ್ವಿಕ್ ದೇಸಾಯಿ 21, ಕಾವೇರಪ್ಪ 44ಕ್ಕೆ 4, ವಿಜಯಕುಮಾರ್ ವೈಶಾಖ್ 29ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.