![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 15, 2023, 6:20 AM IST
ಬೆಂಗಳೂರು: ದುಲೀಪ್ ಟ್ರೋಫಿ ಫೈನಲ್ನಲ್ಲಿ ಬೌಲರ್ ಗಳ ಕೈ ಮೇಲಾಗುತ್ತಲೇ ಹೋಗುತ್ತಿದೆ. ಹಾಲಿ ಚಾಂಪಿಯನ್ ಪಶ್ಚಿಮ ವಲಯ ವಿರುದ್ಧ 67 ರನ್ನುಗಳ ಮಹತ್ವದ ಮುನ್ನಡೆ ಸಾಧಿಸಿರುವ ದಕ್ಷಿಣ ವಲಯ, 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿದೆ. ಒಟ್ಟು ಲೀಡ್ 248ಕ್ಕೆ ಏರಿದೆ.
ದಕ್ಷಿಣ ವಲಯದ 213 ರನ್ನುಗಳ ಮೊದಲ ಇನ್ನಿಂಗ್ಸ್ಗೆ ಉತ್ತರವಾಗಿ ಪಶ್ಚಿಮ ವಲಯ 7 ವಿಕೆಟಿಗೆ 129 ರನ್ ಮಾಡಿತ್ತು. ಶುಕ್ರವಾರದ ಆಟ ಮುಂದುವರಿಸಿ 146ಕ್ಕೆ ಆಲೌಟ್ ಆಯಿತು. ಉಳಿದ ಮೂರೂ ವಿಕೆಟ್ಗಳನ್ನು ಕರ್ನಾಟಕದ ಮಧ್ಯಮ ವೇಗಿ ವಿದ್ವತ್ ಕಾವೇರಪ್ಪ ಉರುಳಿಸಿದರು. ಅವರ ಸಾಧನೆ 53ಕ್ಕೆ 7 ವಿಕೆಟ್. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವಿದ್ವತ್ ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಹಾಗೆಯೇ ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯ ಪರ ದಾಖಲಾದ 2ನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ವಾಗಿದೆ. 1993ರಲ್ಲಿ ಉತ್ತರ ವಲಯದ ವಿರುದ್ಧ ವೆಂಕಟೇಶ ಪ್ರಸಾದ್ 38ಕ್ಕೆ 7 ವಿಕೆಟ್ ಕೆಡವಿದ್ದು ದಾಖಲೆ. ವಿಜಯ್ ಕುಮಾರ್ ವೈಶಾಖ್ 2 ಹಾಗೂ ವಿ. ಕೌಶಿಕ್ ಒಂದು ವಿಕೆಟ್ ಕಿತ್ತರು. ಇದರೊಂದಿಗೆ ಪಶ್ಚಿಮ ವಲಯವನ್ನು ಕರ್ನಾಟಕದ ತ್ರಿಮೂರ್ತಿಗಳೇ ಸೇರಿಕೊಂಡು ಆಲೌಟ್ ಮಾಡಿ ದಂತಾಯಿತು. 65 ರನ್ ಮಾಡಿದ ಆರಂಭಕಾರ ಪೃಥ್ವಿ ಶಾ ಅವರೇ ಪಶ್ಚಿಮ ವಲಯದ ಟಾಪ್ ಸ್ಕೋರರ್.
ದಕ್ಷಿಣ ವಲಯದ ದ್ವಿತೀಯ ಸರದಿ ಆತಂಕದಿಂದಲೇ ಆರಮಭ ಗೊಂಡಿತು. ಆರ್. ಸಮರ್ಥ್ ಅವರ ರನ್ ಬರಗಾಲ ಮತ್ತೆ ಮುಂದು ವರಿಯಿತು (5). ತಿಲಕ್ ವರ್ಮ (3) ಕೂಡ ಬೇಗನೇ ನಿರ್ಗಮಿಸಿದರು. 8 ರನ್ನಿಗೆ 2 ವಿಕೆಟ್ ಬಿತ್ತು.
ಅನಂತರ ದಕ್ಷಿಣ ವಲಯದ ಬ್ಯಾಟಿಂಗ್ ಚೇತರಿಕೆ ಕಾಣತೊಡಗಿತು. ಮಾಯಾಂಕ್ ಅಗರ್ವಾಲ್ (35), ನಾಯಕ ಹನುಮ ವಿಹಾರಿ (42) ಸೇರಿಕೊಂಡು 64 ರನ್ ಜತೆಯಾಟ ನಡೆಸಿದರು. ರಿಕ್ಕಿ ಭುಯಿ 37, ಸಚಿನ್ ಬೇಬಿ 28 ರನ್ ಕೊಡುಗೆ ಸಲ್ಲಿಸಿದರು. 10 ರನ್ ಮಾಡಿರುವ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಶ್ಚಿಮ ವಲಯ ಪರ ಅರ್ಜಾನ್ ನಗÌಸ್ವಾಲ, ಅತೀತ್ ಶೇಠ್ ಮತ್ತು ದರ್ಮೇಂದ್ರಸಿನ್ಹ ಜಡೇಜ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ವಲಯ 213 ಮತ್ತು 7 ವಿಕೆಟಿಗೆ 181 (ಹನುಮ ವಿಹಾರಿ 42, ರಿಕ್ಕಿ ಭುಯಿ 37, ಮಾಯಾಂಕ್ ಅಗರ್ವಾಲ್ 35, ಸಚಿನ್ ಬೇಬಿ 28, ಸಾಯಿ ಕಿಶೋರ್ 16, ಡಿ. ಜಡೇಜ 27ಕ್ಕೆ 2, ಅತೀತ್ ಶೇಠ್ 38ಕ್ಕೆ 2, ನಗÌಸ್ವಾಲ 52ಕ್ಕೆ 2). ಪಶ್ಚಿಮ ವಲಯ 146 (ಪೃಥ್ವಿ ಶಾ 65, ಹಾರ್ವಿಕ್ ದೇಸಾಯಿ 21, ವಿದ್ವತ್ ಕಾವೇರಪ್ಪ 53ಕ್ಕೆ 7, ವಿಜಯ್ಕುಮಾರ್ ವೈಶಾಖ್ 33ಕ್ಕೆ 2)
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.