Emerging Asia Cup: ಭಾರತ-ಪಾಕ್‌ ಫೈನಲ್‌- ಯಶಸ್ಸಿನ ನಿರೀಕ್ಷೆಯಲ್ಲಿ ಯಶ್‌ ತಂಡ 


Team Udayavani, Jul 23, 2023, 7:32 AM IST

EMERGING

ಕೊಲಂಬೊ: ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌ ಟ್ರೋಫಿಗಾಗಿ ಭಾನುವಾರ ಕೊಲಂಬೊದ ಆರ್‌. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ “ಎ’ ತಂಡಗಳು ಸೆಣಸಲಿವೆ. ಇದೊಂದು ಹೈ ವೋಲ್ಟೆಜ್‌ ಪಂದ್ಯವಾಗುವ ಎಲ್ಲ ಸಾಧ್ಯತೆ ಇದ್ದು, ಫೇವರಿಟ್‌ ತಂಡವನ್ನು ಆರಿಸುವುದು ತುಸು ಕಠಿಣವೆಂದೇ ಹೇಳಬಹುದು. ಆದರೆ ಕೂಟದಲ್ಲಿ ಈವರೆಗೆ ಆಡಿದ ರೀತಿ ನೋಡಿದರೆ ಯಶ್‌ ಧುಲ್‌ ಸಾರಥ್ಯದ ಭಾರತಕ್ಕೆ ಯಶಸ್ಸು ಒಲಿದೀತೆಂಬ ನಿರೀಕ್ಷೆಗೇನೂ ಅಡ್ಡಿ ಇಲ್ಲ.

ಭಾರತ “ಎ’ ಈ ಕೂಟದ ಅಜೇಯ ತಂಡ. ಲೀಗ್‌ ಹಂತದಲ್ಲಿ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಕೆಡವಿದ ಜೋಶ್‌ನಲ್ಲಿದೆ. ಅಲ್ಲದೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಬರೀ 211 ರನ್‌ ಗಳಿಸಿಯೂ ಇದನ್ನು ಉಳಿಸಿಕೊಂಡ ತಾಕತ್ತು ಕೂಡ ಭಾರತದ್ದಾಗಿದೆ. ಪಾಕಿಸ್ತಾನ ಈ ಕೂಟದಲ್ಲಿ ಶರಣಾದದ್ದು ಭಾರತಕ್ಕೆ ಮಾತ್ರ. ಹೀಗಾಗಿ ಸೇಡು ತೀರಿಕೊಳ್ಳಲು ಹವಣಿಸುವುದರಲ್ಲಿ ಅನುಮಾನವಿಲ್ಲ.

ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಆತಿಥೇಯ ಶ್ರೀಲಂಕಾವನ್ನು 60 ರನ್ನುಗಳಿಂದ ಮಣಿಸಿದ ಕಾರಣ ಸಹಜವಾಗಿಯೇ ಉತ್ಸಾಹದಲ್ಲಿದೆ.

ಲೀಗ್‌ ಹಂತದ ಪಂದ್ಯದಲ್ಲಿ ರಾಜವರ್ಧನ್‌ ಹಂಗರ್ಗೇಕರ್‌ ಮತ್ತು ಮಾನವ್‌ ಸುಥಾರ್‌ ಸೇರಿಕೊಂಡು ಪಾಕಿಸ್ತಾನವನ್ನು 205ಕ್ಕೆ ಹಿಡಿದು ನಿಲ್ಲಿಸಿದ್ದರು. ಆರಂಭಕಾರ ಸಾಯಿ ಸುದರ್ಶನ್‌ ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿ ಅಜೇಯ ಶತಕ ಬಾರಿಸಿ ಮೆರೆದಿದ್ದರು. ಒಟ್ಟಾರೆ ಅದು ಏಕಪಕ್ಷೀಯ ಪಂದ್ಯವಾಗಿತ್ತು. ಭಾರತ ಫೈನಲ್‌ನಲ್ಲೂ ಇದೇ ಲಯದಲ್ಲಿ ಸಾಗಬೇಕಿದೆ.

ಭಾರತದ ಬೌಲಿಂಗ್‌ ಪಾರಮ್ಯ
ಬಾಂಗ್ಲಾ ವಿರುದ್ಧದ ಉಪಾಂತ್ಯದಲ್ಲಿ ಭಾರತದ ಬ್ಯಾಟಿಂಗ್‌ ಕ್ಲಿಕ್‌ ಆಗಿರಲಿಲ್ಲ. 211ಕ್ಕೆ ಆಲೌಟಾದಾಗ, ಬಾಂಗ್ಲಾ ಒಂದೇ ವಿಕೆಟಿಗೆ 94 ರನ್‌ ಗಳಿಸಿ ಮುನ್ನುಗ್ಗುತ್ತಿದ್ದಾಗ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಭಾವಿಸಲಾಗಿತ್ತು. ಆದರೆ ಸ್ಪಿನ್ನರ್‌ಗಳಾದ ನಿಶಾಂತ್‌ ಸಿಂಧು ಮತ್ತು ಮಾನವ್‌ ಸುಥಾರ್‌ ನೀಡಿದ ತಿರುಗೇಟಿಗೆ ಬಾಂಗ್ಲಾ ಬ್ಯಾಟಿಂಗ್‌ ನೆಲಕಚ್ಚಿತು. 66 ರನ್‌ ಅಂತರದಲ್ಲಿ ಬಾಂಗ್ಲಾದ 9 ವಿಕೆಟ್‌ ಉಡಾಯಿಸಿದ್ದು ಭಾರತದ ಬೌಲಿಂಗ್‌ ಪಾರಮ್ಯಕ್ಕೆ ಸಾಕ್ಷಿ. ಫೈನಲ್‌ನಲ್ಲಿ ಸ್ಪಿನ್ನರ್‌ಗಳು ಭಾರತದ ಪಾಲಿಗೆ ಶ್ರೀರಕ್ಷೆ ಆಗಬೇಕಿದೆ. ಕೊಲಂಬೊ ಟ್ರ್ಯಾಕ್‌ ನಿಧಾನ ಗತಿಯಿಂದ ಕೂಡಿರುವುದೇ ಇದಕ್ಕೆ ಕಾರಣ.

ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ ಕೂಡ ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಸಾಯಿ ಸುದರ್ಶನ್‌, ಅಭಿಷೇಕ್‌ ಶರ್ಮ, ನಿಕಿನ್‌ ಜೋಸ್‌, ಯಶ್‌ ಧುಲ್‌, ಧ್ರುವ ಜುರೆಲ್‌, ರಿಯಾನ್‌ ಪರಾಗ್‌, ಆಲ್‌ರೌಂಡರ್‌ ನಿಶಾಂತ್‌ ಸಿಂಧು… ಹೀಗೆ ಕೊನೆಯ ತನಕವೂ ಬ್ಯಾಟ್‌ ಬೀಸಬಲ್ಲವರಿದ್ದಾರೆ. ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಸಿಕ್ಕಿದರೆ ಕನಿಷ್ಠ 250 ರನ್‌ ಪೇರಿಸುವುದು ಅಗತ್ಯ.

ಪ್ರತಿಭಾನ್ವಿರ ಪಾಕ್‌ ಪಡೆ
ಪಾಕಿಸ್ತಾನ ಕೂಡ ಪ್ರತಿಭಾನ್ವಿತರ ತಂಡ. ಆಲ್‌ರೌಂಡರ್‌ ಮೊಹಮ್ಮದ್‌ ವಾಸಿಮ್‌, ನಾಯಕ ಮೊಹಮ್ಮದ್‌ ಹ್ಯಾರಿಸ್‌, ಓಪನರ್‌ ಸಾಹಿಬ್‌ಜಾದ್‌ ಫ‌ರ್ಹಾನ್‌, ಪೇಸ್‌ ಬೌಲರ್‌ ಅರ್ಷದ್‌ ಇಕ್ಬಾಲ್‌ ಅವರೆಲ್ಲ ನಾನಾ ಹಂತದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅಮಾದ್‌ ಬಟ್‌, ಒಮೈರ್‌ ಯೂಸುಫ್ ಅವರೆಲ್ಲ ಪಾಕಿಸ್ತಾನ್‌ ಸೂರ್‌ ಲೀಗ್‌ನಲ್ಲಿ ಮಿಂಚಿದ್ದಾರೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.