Paralympics ವೈಭವದ ಚಾಲನೆ : ಬಾಡ್ಮಿಂಟನ್‌, ಆರ್ಚರಿಯಲ್ಲಿ ಗೆಲುವಿನ ಸಿಹಿ


Team Udayavani, Aug 30, 2024, 6:00 AM IST

1-aaaaa

ಪ್ಯಾರಿಸ್‌:  ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ದಿನ ಭಾರತಕ್ಕೆ ಜಯದ ಸಿಹಿ, ಸೋಲಿನ ಕಹಿ ಎರಡೂ ಸಿಕ್ಕಿದೆ. ಪ್ಯಾರಾಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ 8 ಮಂದಿ ಗೆಲುವು ಸಾಧಿಸಿದರೆ, 5 ಮಂದಿ ಸೋಲು ಕಂಡಿದ್ದಾರೆ. 3 ಪಂದ್ಯಗಳಲ್ಲಿ ಭಾರತೀಯರ ವಿರುದ್ಧ ಭಾರತೀಯರೇ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಇನ್ನು ಆರ್ಚರಿ ರ್‍ಯಾಂಕಿಂಗ್‌ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಶೀತಲ್‌ ದೇವಿ ಪ್ರೀಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಟೇಕ್ವಾಂಡೋ, ಟ್ರಾಕ್‌ ಸೈಕ್ಲಿಂಗ್‌ನಲ್ಲಿ ಭಾರತೀಯರಿಗೆ ಸೋಲು ಆಗಿದೆ.

ಬ್ಯಾಡ್ಮಿಂಟನ್‌: ಸುಹಾಸ್‌, ತುಳಸೀಮತಿ ಸುಕಾಂತ್‌, ಪಲಕ್‌ ಗೆಲುವಿನ ಆರಂಭ
ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಈ ಬಾರಿ 13 ಮಂದಿ ಆ್ಯತ್ಲೀಟ್‌ಗಳು ಭಾಗಿಯಾಗಿದ್ದು, ಮೊದಲ ದಿನ 8 ಸ್ಪರ್ಧೆಗಳಲ್ಲಿ ಭಾರತ ಗೆದ್ದರೆ, 5 ಸ್ಪರ್ಧೆಗಳಲ್ಲಿ ಸೋಲು ಕಂಡಿದೆ. ಗುರುವಾರ ನಡೆದ ಪ್ಯಾರಾ ಬ್ಯಾಡ್ಮಿಂಟನ್‌ ಮಿಶ್ರ ಡಬಲ್ಸ್‌ (ಎಸ್‌ಎಲ್‌3-ಎಸ್‌ಯು5) ಗ್ರೂಪ್‌ ಹಂತದ ಸ್ಪರ್ಧೆಯಲ್ಲಿ ನಿತೀಶ್‌ ಕುಮಾರ್‌-ತುಳಸೀಮತಿ ಮುರುಗೇಶನ್‌ ಅವರನ್ನೊಳಗೊಂಡ ಜೋಡಿ, ಕನ್ನಡಿಗ ಸುಹಾಸ್‌ ಲಲಿನಾಕೆರೆ ಮತ್ತು ಪಾಲಕ್‌ ಕೊಹ್ಲಿ ಜೋಡಿಯನ್ನು 21-14, 21-17 ಅಂತರದಿಂದ ಸೋಲಿಸಿತು.

ಪುರುಷರ ಸಿಂಗಲ್ಸ್‌ ಗ್ರೂಪ್‌ ಎಸ್‌ಎಲ್‌4 ವಿಭಾಗದಲ್ಲಿ ಮಲೇ ಷ್ಯಾದ ಮೊಹಮ್ಮದ್‌ ಅಮಿನ್‌ ಬರ್ಹನುದ್ದೀನ್‌ ವಿರುದ್ಧ ಸುಕಾಂತ್‌ ಕದಮ್‌ ಜಯ ಗಳಿಸಿದ್ದಾರೆ. ಇದೇ ಗುಂಪಿನ ಮತ್ತೂಂದು ಸ್ಪರ್ಧೆಯಲ್ಲಿ, ಇಂಡೋನೇಷ್ಯಾದ ಹಿಕ್‌ಮತ್‌ ರಾಮ್‌ದನಿ ವಿರುದ್ಧ ಕನ್ನಡಿಗ ಸುಹಾಸ್‌ ಲಲಿನಾಕೆರೆ ಗೆದ್ದರು. ಇನ್ನೊಂದು ಸ್ಪರ್ಧೆಯಲ್ಲಿ ಬ್ರೆಜಿಲ್‌ನ ರೊಜಾರಿಯೋ ಜೂನಿಯರ್‌ ವಿರುದ್ಧ ತರುಣ್‌ ದಿಲ್ಲಾನ್‌ ಗೆಲುವು ಸಾಧಿಸಿದರು. ಉಳಿದಂತೆ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ತುಳಸೀಮತಿ ಮುರುಗೇಶನ್‌, ಸುಮತಿ ಶಿವನ್‌ ನಿತ್ಯಶ್ರೀ ಜಯ ಸಾಧಿಸಿದರು.

ಆರ್ಚರಿ: ಶೀತಲ್‌ ಪ್ರೀ ಕ್ವಾರ್ಟರ್‌ಗೆ
ಭಾರತದ ಪ್ಯಾರಾ ಆರ್ಚರ್‌ ಶೀತಲ್‌ ದೇವಿ ಅವರು ಗುರುವಾರ ನಡೆದ ಆರ್ಚರಿ ರ್‍ಯಾಂಕಿಂಗ್‌ ಸುತ್ತಿನಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇ ಶಿಸಿದ್ದಾರೆ. ರ್‍ಯಾಂಕಿಂಗ್‌ ಸುತ್ತಿನಲ್ಲಿ 703 ಅಂಕ ಪಡೆದುಕೊಂಡ ಶೀತಲ್‌ ಕೇವಲ 1 ಅಂಕದಿಂದ ವಿಶ್ವದಾಖಲೆ ನಿರ್ಮಾಣ ಮಾಡುವ ಅವಕಾಶ ತಪ್ಪಿಸಿ ಕೊಂಡರು. ಕಾಂಪೌಂಡ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯ ಶನಿವಾರ ನಡೆಯಲಿದೆ.

ಟರ್ಕಿಯ ಓನೊjàರ್‌ ಕ್ಯೂರ್‌ ಗರ್ಡಿ ಅವರು 704 ಅಂಕ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಲ್ಲದೇ ಆರ್ಚರಿ ರ್‍ಯಾಂಕಿಂಗ್‌ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡರು. ಬ್ರಿಟನ್‌ನ ಪೋಬ್‌ ಪ್ಯಾಟರ್‌ಸನ್‌ ಪೈನ್‌ ಅವರು ಗಳಿಸಿದ್ದ 698 ಅಂಕ ಈ ಹಿಂದಿನ ದಾಖಲೆಯಾಗಿತ್ತು.

ಉಳಿದಂತೆ ಮಹಿಳಾ ವಿಭಾಗದಲ್ಲಿ 682 ಅಂಕ ಸಂಪಾದಿಸಿದ ಸರಿತಾ 9ನೇ ಸ್ಥಾನಿಯಾದರು. ಸರಿತಾ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಮಲೇಷ್ಯಾದ ನೂರ್‌ ಜನಾತನ್‌ ಅಬ್ದುಲ್‌ ಅವರನ್ನು ಎದುರಿಸಲಿದ್ದು ಈ ಪಂದ್ಯ ಶುಕ್ರವಾರ ನಡೆಯಲಿದೆ.

ಟೇಕ್ವಾಂಡೋ, ಸೈಕ್ಲಿಂಗ್‌
ಪ್ಯಾರಾ ಟೇಕ್ವಾಂಡೋದ 44ರಿಂದ 47 ಕೆಜಿ ವಿಭಾಗದಲ್ಲಿ ಭಾರತದ ಅರುಣಾ ತನ್ವರ್‌ ಸೋಲನುಭವಿಸಿದರೆ, 3000 ಮೀ. ಪ್ಯಾರಾ ಸೈಕ್ಲಿಂಗ್‌ನಲ್ಲಿ ಜ್ಯೋತಿ ಗಡೇರಿಯಾ 10ನೇ ಸ್ಥಾನಿಯಾಗಿ ಹೊರಬಿದ್ದರು.

ಭಾರತದ ಇಂದಿನ ಸ್ಪರ್ಧೆಗಳು
ಆ್ಯತ್ಲೆಟಿಕ್ಸ್‌
ಮಹಿಳೆಯರ ಡಿಸ್ಕಸ್‌ (ಫೈನಲ್‌): ಕರೀಮ್‌ ಜ್ಯೋತಿ ದಲಾಲ್‌, ಸಾಕ್ಷಿ ಕಸಾನ
ಸಮಯ: ಮ. 1.30
ಮಹಿಳೆಯರ 100 ಮೀ. (ಫೈನಲ್‌): ಪ್ರೀತಿ ಪಾಲ್‌
ಸಮಯ: ಸ. 4.45
ಬ್ಯಾಡ್ಮಿಂಟನ್‌
ಮಹಿಳೆಯರ ಸಿಂಗಲ್ಸ್‌ (ಗ್ರೂಪ್‌ ಹಂತ): ಮಾನಸಿ ಜೋಶಿ
ಸಮಯ: ಮ. 12.00
ಪುರುಷರ ಸಿಂಗಲ್ಸ್‌ (ಗ್ರೂಪ್‌ ಹಂತ): ಮನೋಜ್‌ ಸರ್ಕಾರ್‌
ಸಮಯ: ಮ. 1.20, ನಿತೀಶ್‌ ಕುಮಾರ್‌, ಸಮಯ: ಮ. 2.00
ಸುಹಾಸ್‌ ಯತಿರಾಜ್‌, ಸಮಯ: ಮ. 2.40
ಶೂಟಿಂಗ್‌
ಮಹಿಳೆಯರ 10 ಮೀ. ಏರ್‌ ರೈಫ‌ಲ್‌ (ಅರ್ಹತಾ ಸುತ್ತು): ಅವನಿ ಲೇಖರ
ಸಮಯ: ಮ. 12.30
ಪುರುಷರ 10 ಮೀ. ಏರ್‌ ಪಿಸ್ತೂಲ್‌: ರುದ್ರಾಂಶ್‌ ಖಂಡೇಲ್ವಾಲ್‌, ಮನೀಶ್‌ ನರ್ವಾಲ್‌
ಸಮಯ: ಮ. 2.45
ಮಿಶ್ರ 10 ಮೀ. ಏರ್‌ ರೈಫ‌ಲ್‌ (ಅರ್ಹತಾ ಸುತ್ತು): ಶ್ರೀಹರ್ಷ ದೇವರೆಡ್ಡಿ
ಸಮಯ: ಸ. 5.00
ರೋವಿಂಗ್‌
ಮಿಶ್ರ ಡಬಲ್ಸ್‌ ಸ್ಕಲ್ಸ್‌ (ಹೀಟ್‌): ಅನಿತಾ-ನಾರಾಯಣ ಕೊಂಗನಪಲ್ಲೆ
ಸಮಯ: ಮ. 3.00
ಟ್ರ್ಯಾಕ್‌ ಸೈಕ್ಲಿಂಗ್‌
ಪುರುಷರ ಅರ್ಹತಾ ಸ್ಪರ್ಧೆ: ಅರ್ಷದ್‌ ಶೈಕ್‌
ಸಮಯ: ಸ. 4.24

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.