Maharaja Trophy: 4ನೇ ಜಯ ಸಾಧಿಸಿದ ಗುಲ್ಬರ್ಗ; ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿಕೆ
Team Udayavani, Aug 24, 2024, 8:49 PM IST
ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಶನಿವಾರದ ಪಂದ್ಯದಲ್ಲಿ ಮೈಸೂರು ವಾರಿಯರ್ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ ತಂಡ 5 ವಿಕೆಟ್ಗಳ ಜಯ ಗಳಿಸಿದೆ. ಇದು ಗುಲ್ಬರ್ಗ ಸಾಧಿಸಿದ 4ನೇ ಜಯವಾಗಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಮೈಸೂರು 9 ವಿಕೆಟಿಗೆ 154 ರನ್ ಗಳಿಸಿದರೆ, ಗುಲ್ಬರ್ಗ 18.5 ಓವರ್ಗಳಲ್ಲಿ 5 ವಿಕೆಟಿಗೆ 157 ರನ್ ಬಾರಿಸಿತು.
ಮೈಸೂರು ವಾರಿಯರ್ನ ಅಗ್ರ ಕ್ರಮಾಂಕದ ಬ್ಯಾಟರ್ಗಳೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು. ಇ.ಜೆ. ಜಾಸ್ಪರ್ (2), ಎಸ್.ಯು. ಕಾರ್ತಿಕ್ (24), ನಾಯಕ ಕರುಣ್ ನಾಯರ್ (0), ಸಮಿತ್ ದ್ರಾವಿಡ್ (12), ಹರ್ಷಿಲ್ ಧರ್ಮಾಣಿ (16), ಸುಮಿತ್ ಕುಮಾರ್ (9) ವಿಫಲರಾದರು. ಕೆಳ ಕ್ರಮಾಂಕದ ಜೆ. ಸುಚಿತ್ 25, ಮನೋಜ್ ಭಾಂಡಗೆ 14 ಎಸೆತಗಳಲ್ಲಿ 38 ರನ್ ಸಿಡಿಸಿದ ಪರಿಣಾಮ ಸ್ಕೋರ್ 150ರ ಗಡಿ ದಾಟಿತು. ಗುಲ್ಬರ್ಗ ಬೌಲರ್ ಅಭಿಷೇಕ್ ಪ್ರಭಾಕರ್ 21 ರನ್ಗೆ 5 ವಿಕೆಟ್ ಪಡೆದು ಪಂದ್ಯಶ್ರೇಷ್ಠರೆನಿಸಿದರು.
ಗುಲ್ಬರ್ಗಕ್ಕೆ ಆರಂಭಿಕರಾದ ಲವನೀತ್ ಸಿಸೋಡಿಯಾ (23)-ನಾಯಕ ದೇವದತ್ ಪಡಿಕ್ಕಲ್ (24) 41 ರನ್ ಜತೆಯಾಟ ನೀಡಿದರು. ಸ್ಮರಣ್ 52, ರಿತೇಶ್ ಭಟ್ಕಳ್ 22, ಪ್ರವೀಣ್ ದುಬೆ ಅಜೇಯ 17 ರನ್ ಗಳಿಸಿ ತಂಡದ ಗೆಲುವನ್ನು ಸಾರಿದರು.
ಮಂಗಳೂರು ವಿರುದ್ಧವೂ ಜಯ:
ಗುಲ್ಬರ್ಗ ತಂಡ ಶುಕ್ರವಾರ ರಾತ್ರಿಯ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ವಿರುದ್ಧವೂ ಜಯ ಸಾಧಿಸಿತ್ತು. ಈ ಅಂತರ ಕೂಡ 5 ವಿಕೆಟ್ ಆಗಿತ್ತು. ಮಂಗಳೂರು 7 ವಿಕೆಟಿಗೆ 150 ರನ್ ಮಾಡಿದರೆ, ಗುಲ್ಬರ್ಗ 19.3 ಓವರ್ಗಳಲ್ಲಿ 5 ವಿಕೆಟಿಗೆ 152 ರನ್ ಗಳಿಸಿತು. ಅಜೇಯ 47 ರನ್ ಮಾಡಿದ ಪ್ರವೀಣ್ ದುಬೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
China Open 2024: ಒಲಿಂಪಿಕ್ ವಿಜೇತೆಗೆ ಮಾಳವಿಕಾ ಆಘಾತ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್ ಆಫ್ ಯುಕೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.