ಹಾಕಿ: ಕೊರಿಯಾ ವಿರುದ್ಧ ಕೊನೆ ಕ್ಷಣದಲ್ಲಿ ಭಾರತಕ್ಕೆ ಕೈತಪ್ಪಿದ ಜಯ

ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ

Team Udayavani, Mar 25, 2019, 6:21 AM IST

84

ಇಫೋ (ಮಲೇಶ್ಯ): ಕೊನೆಯ ಕ್ಷಣದಲ್ಲಿ ಭಾರತ ರಕ್ಷಣಾ ಆಟಗಾರರು ಮಾಡಿದ ಎಡವಟ್ಟಿನಿಂದ “ಸುಲ್ತಾನ್‌ ಅಜ್ಲಾನ್‌ ಶಾ’ ಕೂಟದ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯ 1-1 ಗೋಲುಗಳಿಂದ ಡ್ರಾ ಆಗಿದೆ.

ಮನ್‌ದೀಪ್‌ ಸಿಂಗ್‌ ಅವರ ಗೋಲಿನ ನೆರವಿನಿಂದ 28ನೇ ನಿಮಿಷ ದಲ್ಲಿ ಮುನ್ನಡೆ ಪಡೆದ ಭಾರತ ಸತತ 2ನೇ ಗೆಲುವಿನ ನಿರೀಕ್ಷೆ ಹುಟ್ಟಿಸಿತ್ತು. ಆದರೆ ರಕ್ಷಣಾ ಪಡೆ ಮಾಡಿದ ಸಣ್ಣ ತಪ್ಪು ಕೊನೆಯ 22 ಸೆಕೆಂಡ್‌ಗಳ ಆಟದ ವೇಳೆ ಕೊರಿಯಾಗೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಜಂಗ್‌ಹ್ಯುನ್‌ ಜಾಂಗ್‌ ಗೋಲು ಬಾರಿಸಿ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಯಶಸ್ವಿಯಾದರು.

ಮಿಡ್‌ಫಿàಲ್ಡರ್‌ ವಿವೇಕ್‌ ಸಾಗರ್‌ ಪ್ರಸಾದ್‌ ಪಂದ್ಯದ ಮೊದಲ ನಿಮಿಷದಲ್ಲೇ ಸ್ಟ್ರೈಕಿಂಗ್‌ ವೃತ್ತದಲ್ಲಿ ಅವ ಕಾಶ ಕಲ್ಪಿಸಿ ಭಾರತಕ್ಕೆ ಆಕ್ರಮಣಕಾರಿ ಆರಂಭ ನೀಡಿದರು. ಆದರೆ ಕೊರಿಯಾ ಡಿಫೆಂಡರ್‌ಗಳು ಭಾರತದ ಆಕ್ರಮಣಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾದರು. ಪ್ರತಿದಾಳಿಗೆ ಇಳಿದ ಕೊರಿಯಾ ಭಾರತದ ವೃತ್ತದೊಳಗೆ ನುಗ್ಗಿ ಬಂದರೂ ಡಿಫೆಂಡರ್‌ ಸುರೇಂದರ್‌ ಕುಮಾರ್‌ ಇದಕ್ಕೆ ತಕ್ಕ ಉತ್ತರ ನೀಡಿದರು. ಇದಾದ ಬಳಿಕ ಮತ್ತೆರಡು ಅವಕಾಶ ಭಾರತಕ್ಕೆ ಲಭ್ಯವಾದರೂ ಗೋಲು ಬಾರಿಸುವಲ್ಲಿ ಭಾರತ ಎಡವಿತು.
ಗೋಲಿನ ಹುಡುಕಾಟದಲ್ಲಿದ್ದ ಭಾರತಕ್ಕೆ 10ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಕೈತಪ್ಪಿತು. ಇನ್ನೊಂದು ಪೆನಾಲ್ಟಿ ಅವಕಾಶ ಪಡೆದುಕೊಂಡ ಭಾರತದ ಆಟಕ್ಕೆ ಕೊರಿಯಾದ ಗೋಲ್‌ಕೀಪರ್‌ ಬ್ರೇಕ್‌ ಹಾಕಿದರು.

ಆರಂಭದಿಂದಲೂ ಎರಡು ತಂಡಗಳೂ ತಂತ್ರಗಾರಿಕೆಯ ಆಟ ವಾಡಿದರೂ ಕೊರಿಯಾದ 3 ಆಟಗಾರರು ಗ್ರೀನ್‌ ಕಾರ್ಡ್‌ ಪಡೆದ ಕಾರಣ ತಂಡ 8 ಆಟಗಾರರೊಂದಿಗೆ ಹೋರಾಟ ನಡೆಸಬೇಕಾಯಿತು. ಇದರಿಂದ ಭಾರತ ಸುಲಭವಾಗಿ ಕೊರಿಯಾದ ವೃತ್ತದೊಳಗೆ ನುಗ್ಗಿತು. ಅನುಭವಿ ಆಟಗಾರ ಮನ್‌ದೀಪ್‌ ಗೋಲಿನ ಖಾತೆ ತೆರೆದರು (28ನೇ ನಿಮಿಷ). ಬಳಿಕ ಭಾರತ ರಕ್ಷಣಾತ್ಮಕ ಆಟವಾಡಿ ಮುನ್ನಡೆ ಕಾಯ್ದುಕೊಳ್ಳತೊಡಗಿತು.

ಆಟಕ್ಕೆ ಅಡ್ಡಿಯಾದ ಮಳೆರಾಯ
3ನೇ ಕ್ವಾರ್ಟರ್‌ ಆರಂಭದಲ್ಲೇ ಮಳೆ ಸುರಿಯಲಾರಂಭಿಸಿತು. ಮಳೆಯಲ್ಲೇ ಆಟ ಮುಂದುರಿಸಿದಾಗ ಭಾರತದ ರಕ್ಷಣಾ ಪಡೆಯ ತಪ್ಪಿನಿಂದ ಕೊರಿಯಾಕ್ಕೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ದೊರಕಿತು. ಆದರೆ ಅಮಿತ್‌ ರೋಹಿದಾತ್‌ ಉತ್ತಮ ಆಟವಾಡಿ ಕೊರಿಯಾ ಆಟಗಾರರನ್ನು ತಡೆದರು.

ಪಂದ್ಯ ಕೊನೆಯಾಗಲು ಇನ್ನೇನು 8 ನಿಮಿಷಗಳಿರುವಾಗ ಮಳೆಯ ಆಟ ಜೋರಾದ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು. ಮಳೆ ನಿಂತ ಬಳಿಕ ಆರಂಭದ ಆಟದಲ್ಲಿ ಕೊರಿಯಾ ಆಕ್ರಮಣ ಆಟಕ್ಕಿಳಿದು ಒಂದರ ಹಿಂದೆ ಒಂದರಂತೆ ಪೆನಾಲ್ಟಿ ಅವಕಾಶ ಸೃಷ್ಟಿಸಿಕೊಂಡಿತು. ಆದರೆ ಇದಕ್ಕೆ ಭಾರತೀಯರು ತಡೆಯಾಗಿ ನಿಂತರು.
ಆಟದ ಮುಕ್ತಾಯಕ್ಕೆ 53 ಸೆಕೆಂಡ್‌ ಉಳಿದಿರುವಾಗ ಕೊರಿಯಾ ಪೆನಾಲ್ಟಿ ಪಡೆದರೂ ಗೋಲ್‌ಕೀಪರ್‌ ಶ್ರೀಜೇಶ್‌ ಅದ್ಭುತವಾಗಿ ತಡೆದರು. ಕೊರಿಯಾ ಮಾಡಿದ ರೆಫೆರಲ್‌ ಯಶಸ್ವಿಯಾದ ಕಾರಣ ತಂಡಕ್ಕೆ ಮತ್ತೂಂದು ಪೆನಾಲ್ಟಿ ದೊರಕಿತು. ಈ ಅವಕಾಶವನ್ನು ಕೈಚೆಲ್ಲಲು ಬಿಡದ ಜಂಗ್‌ಹ್ಯುನ್‌ ಜಾಂಗ್‌ ಗೋಲು ಬಾರಿಸಿ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿದರು.  ಮಾ. 26ರಂದು ನಡೆಯುವ 3ನೇ ಪಂದ್ಯದಲ್ಲಿ ಭಾರತ ಆತಿಥೇಯ ಮಲೇಶ್ಯವನ್ನು ಎದುರಿಸಲಿದೆ.

ಕೆನಡಾ, ಮಲೇಶ್ಯ  ತಂಡಗಳಿಗೆ ಗೆಲುವು
ದಿನದ ಉಳಿದ ಪಂದ್ಯಗಳಲ್ಲಿ ಕೆನಡಾ ಹಾಗೂ ಆತಿಥೇಯ ಮಲೇಶ್ಯ ತಂಡಗಳು ಜಯ ಸಾಧಿಸಿವೆ.

ದಿನದ ದ್ವಿತೀಯ ಪಂದ್ಯದಲ್ಲಿ ಪೋಲೆಂಡ್‌ ಮೇಲೆ ಸವಾರಿ ಮಾಡಿದ ಕೆನಡಾ 4-0 ಅಂತರದ ಭರ್ಜರಿ ಗೆಲುವು ಒಲಿಸಿಕೊಂಡಿತು. 3ನೇ ಪಂದ್ಯದಲ್ಲಿ ಮಲೇಶ್ಯ ಭಾರೀ ಹೋರಾಟದ ಬಳಿಕ ಏಶ್ಯಾಡ್‌ ಚಾಂಪಿಯನ್‌ ಜಪಾನ್‌ ತಂಡವನ್ನು 4-3 ಗೋಲುಗಳ ಅಂತರದಿಂದ ಕೆಡವಿತು. ಇದು ಜಪಾನ್‌ಗೆ ಎದುರಾದ ಸತತ ಎರಡನೇ ಸೋಲು. ಶನಿವಾರದ ಪಂದ್ಯದಲ್ಲಿ ಅದು ಭಾರತಕ್ಕೆ ಶರಣಾಗಿತ್ತು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.