![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 30, 2022, 10:25 PM IST
ದುಬಾೖ: ಆಸ್ಟ್ರೇಲಿಯದ ಆತಿಥ್ಯದಲ್ಲಿ ಅ. 16ರಂದು ಆರಂಭ ವಾಗಲಿರುವ ಬಹು ನಿರೀಕ್ಷೆಯ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಬಹುಮಾನ ಮೊತ್ತವನ್ನು ಕ್ರಿಕೆಟ್ ಆಡಳಿತ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.
16 ತಂಡಗಳು ಪಾಲ್ಗೊಳ್ಳಲಿರುವ ಈ ಪ್ರತಿಷ್ಠಿತ ಕೂಟಕ್ಕಾಗಿ ಐಸಿಸಿ ಒಟ್ಟು 5.6 ಮಿಲಿಯನ್ ಡಾಲರ್ ಮೊತ್ತವನ್ನು (45.5 ಕೋ.ರೂ.) ಬಹುಮಾನಕ್ಕಾಗಿ ವ್ಯಯಿಸಲಿದೆ.
ಅದರಂತೆ ಇಲ್ಲಿ ಚಾಂಪಿಯನ್ ಆಗಲಿರುವ ತಂಡ 1.6 ಮಿಲಿಯನ್ ಡಾಲರ್, ಅಂದರೆ 13 ಕೋಟಿ ರೂ. ಬಹುಮಾನವನ್ನು ಜೇಬಿಗೆ ಇಳಿಸಲಿದೆ. ರನ್ನರ್ ಅಪ್ ತಂಡಕ್ಕೆ ಇದರ ಅರ್ಧದಷ್ಟು ಮೊತ್ತ ಲಭಿಸಲಿದೆ (6.52 ಕೋ.ರೂ.). ಇದು 2021ರಷ್ಟೇ ಬಹುಮಾನ ಮೊತ್ತವಾಗಿದೆ.
ಸೆಮಿಫೈನಲ್ನಲ್ಲಿ ಪರಾಭವಗೊ ಳ್ಳುವ ತಂಡಗಳಿಗೆ ತಲಾ 4 ಲಕ್ಷ ಡಾಲರ್ (3.26 ಕೋ.ರೂ.), ಸೂಪರ್ 12 ಹಂತದಿಂದ ನಿರ್ಗಮಿಸಲಿರುವ 8 ತಂಡಗಳಿಗೆ ತಲಾ 70 ಸಾವಿರ ಡಾಲರ್ (57 ಲಕ್ಷ ರೂ.) ಮೊತ್ತವನ್ನು ನೀಡಲಾಗುವುದು. 2021ರ ಮಾದರಿ ಯಂತೆ ಸೂಪರ್-12 ಹಂತದಲ್ಲಿ ಸಾಧಿಸುವ ಪ್ರತಿಯೊಂದು ಜಯಕ್ಕೂ ತಂಡ 40 ಸಾವಿರ ಡಾಲರ್ (32.5 ಲಕ್ಷ ರೂ.) ಪಡೆಯಲಿದೆ.
8 ತಂಡಗಳ ನೇರ ಪ್ರವೇಶ
ಟಿ20 ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ 8 ತಂಡಗಳು ನೇರವಾಗಿ ಸೂಪರ್-12 ಹಂತವನ್ನು ಪ್ರವೇಶಿ ಸಿವೆ. ಇವುಗಳೆಂದರೆ ಆಸ್ಟ್ರೇಲಿಯ, ಭಾರತ, ಪಾಕಿಸ್ಥಾನ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ.
ಉಳಿದ 8 ತಂಡಗಳು ಮೊದಲ ಸುತ್ತಿನಲ್ಲಿ ಸೆಣಸಲಿವೆ. “ಎ’ ವಿಭಾಗದಲ್ಲಿ ಶ್ರೀಲಂಕಾ, ನಮೀ ಬಿಯಾ, ನೆದರ್ಲೆಂಡ್ಸ್ ಮತ್ತು ಯುಎಇ; “ಬಿ’ ವಿಭಾಗದಲ್ಲಿ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳಿವೆ. ಈ ಎಲ್ಲ ತಂಡಗಳಿಗೆ ತಲಾ 40 ಸಾವಿರ ಡಾಲರ್ ಲಭಿಸಲಿದೆ.
ಸೂಪರ್-12 ಮುಖಾಮುಖಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಮತ್ತು ರನ್ನರ್ ಅಪ್ ನ್ಯೂಜಿಲ್ಯಾಂಡ್ ಮಧ್ಯೆ ಅ. 22ರಂದು ಸಿಡ್ನಿಯಲ್ಲಿ ನಡೆಯುತ್ತದೆ. ಅದೇ ದಿನ ಪರ್ತ್ನಲ್ಲಿ ಇಂಗ್ಲೆಂಡ್-ಅಫ್ಘಾನಿಸ್ಥಾನ ಪರಸ್ಪರ ಎದುರಾಗಲಿವೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.