Womens T20 World Cup; ಭಾರತಕ್ಕೆ ಸೋಲು: ಆಸ್ಟ್ರೇಲಿಯ ಸೆಮಿಫೈನಲಿಗೆ

ನಾಳೆ ಒಂದು ವೇಳೆ ಪಾಕಿಸ್ಥಾನ ಗೆದ್ದರೆ..?

Team Udayavani, Oct 13, 2024, 11:44 PM IST

1-asqwq

ಶಾರ್ಜಾ: ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಪ್ರಯತ್ನದ ಹೊರತಾಗಿಯೂ ಭಾರತೀಯ ವನಿತೆಯರು ರವಿವಾರ ನಡೆದ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದ “ಎ’ ಬಣದ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ 9 ರನ್ನುಗಳಿಂದ ಸೋಲನ್ನು ಕಂಡಿದೆ. ಇದರಿಂದ ಸೆಮಿಫೈನಲಿಗೇರುವ ಆಸೆ ಕಠಿನವಾಗಿದೆ.

ಪಾಕಿಸ್ಥಾನ ಗೆದ್ದರೆ?
ಈ ಗೆಲುವಿನಿಂದ ಆಸ್ಟ್ರೇಲಿಯ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಅಜೇಯ ತಂಡವಾಗಿ ಸೆಮಿಫೈನಲಿಗೇರಿದೆ. ಈ ಸೋಲಿನಿಂಧ ಭಾರತ ತಾನಾಡಿದ ನಾಲ್ಕು ಪಂದ್ಯಗಳಿಂದ ನಾಲ್ಕಂಕ ಸಂಪಾದಿಸಿದೆ. ಲೀಗ್‌ನ ಅಂತಿಮ ಪಂದ್ಯದಲ್ಲಿ ಸೋಮವಾರ ನ್ಯೂಜಿಲ್ಯಾಂಡ್‌ ತಂಡವು ಪಾಕಿಸ್ಥಾನವನ್ನು ಎದುರಿಸಲಿದೆ. ನ್ಯೂಜಿಲ್ಯಾಂಡ್‌ ಸದ್ಯ ನಾಲ್ಕಂಕ ಹೊಂದಿದ್ದು ಪಾಕಿಸ್ಥಾನ ವಿರುದ್ಧ ಗೆದ್ದರೆ ಅದು ಸೆಮಿಫೈನಲಿಗೇರಲಿದೆ. ಒಂದು ವೇಳೆ ಪಾಕಿಸ್ಥಾನ ಗೆದ್ದರೆ ಎಲ್ಲ ಮೂರು ತಂಡಗಳು ತಲಾ ನಾಲ್ಕಂಕ ಪಡೆಯಲಿವೆ. ಆಗ ಉತ್ತಮ ರನ್‌ಧಾರಣೆ ಇರುವ ತಂಡ ಸೆಮಿಫೈನಲಿಗೇರಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯ ವನಿತಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 151 ರನ್‌ ಪೇರಿಸಿತು. ಇದಕ್ಕುತ್ತರವಾಗಿ ಆರಂಭದಲ್ಲಿ ಭಾರತೀಯ ವನಿತೆಯರು ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರೂ ಅಂತಿಮ ಹಂತದಲ್ಲಿ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ 9 ವಿಕೆಟಿಗೆ 142 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಕಂಡಿತು. ಏಕಾಂಗಿಯಾಗಿ ಹೋರಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 54 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರನ್ನು ಹೊರತುಪಡಿಸಿ ಶಫಾಲಿ ಶರ್ಮ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ದೀಪ್ತಿ ಶರ್ಮ, ಜೆಮಿಮಾ ರಾಡ್ರಿಗಸ್‌ ಉತ್ತಮವಾಗಿ ಆಡಿದರು. ಸ್ಮತಿ 6 ರನ್ನಿಗೆ ಔಟಾಗಿ ನಿರಾಶೆ ಅನುಭವಿಸಿದರು. ನಾಯಕಿ ಹರ್ಮನ್‌ಪ್ರೀತ್‌ ಮತ್ತು ದೀಪ್ತಿ ಶರ್ಮ ಬಿರುಸಿನ ಆಟವಾಡಿದರೂ ಕೊನೆ ಹಂತದಲ್ಲಿ ಬ್ಯಾಟಿಂಗ್‌ ಕುಸಿತ ಕಂಡ ಕಾರಣ ಸೋಲು ಕಾಣಬೇಕಾಯಿತು.

ಈ ಮೊದಲು ಗ್ರೇಸ್‌ ಹ್ಯಾರಿಸ್‌ ಮತ್ತು ಕೊನೆ ಹಂತದಲ್ಲಿ ಎಲಿಸ್‌ ಪೆರ್ರಿ ಅವರ ಬಿರುಸಿನ ಆಟದಿಂದಾಗಿ ಆಸ್ಟ್ರೇಲಿಯದ ಮೊತ್ತ 150ರ ಗಡಿ ದಾಟಲು ಸಾಧ್ಯವಾಯಿತು. ತಂಡದ ಪರ ಆರಂಭಿಕ ಆಟಗಾರ್ತಿ ಗ್ರೇಸ್‌ ಹ್ಯಾರಿಸ್‌ 40 ಹೊಡೆದರೆ ಟಹ್ಲಿಯಾ ಮೆಕ್‌ಗ್ರಾಥ್‌ 32, ಎಲಿಸ್‌ ಪೆರ್ರಿ 32 ರನ್‌ ಸೇರಿಸಿ ತಂಡಕ್ಕೆ ಬಲ ತುಂಬಿದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ 8 ವಿಕೆಟಿಗೆ 151 (ಗ್ರೇಸ್‌ ಹ್ಯಾರಿಸ್‌ 40, ಟಹ್ಲಿಯಾ 32, ಎಲಿಸ್‌ ಪೆರ್ರಿ 32, ರೇಣುಕಾ ಸಿಂಗ್‌ 24ಕ್ಕೆ 2, ದೀಪ್ತಿ ಶರ್ಮ 28ಕ್ಕೆ 2); ಭಾರತ 9 ವಿಕೆಟಿಗೆ 142 (ಶಫಾಲಿ ಶರ್ಮ 20, ರಾಡ್ರಿಗಸ್‌ 16, ಹರ್ಮನ್‌ಪ್ರೀತ್‌ 54 ಔಟಾಗದೆ, ದೀಪ್ತಿ ಶರ್ಮ 29, ಅನ್ನಾಬೆಲ್‌ ಸೂಥರ್‌ಲ್ಯಾಂಡ್‌ 22ಕ್ಕೆ 2, ಸೋಫಿ ಮೊಲಿನೆಕ್ಸ್‌ 32ಕ್ಕೆ 2).

ಟಾಪ್ ನ್ಯೂಸ್

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

Mangaluru: ಮಂಗಳಾದೇವಿ ಮಹಾ ರಥೋತ್ಸವ

Mangaluru: ಮಂಗಳಾದೇವಿ ಮಹಾ ರಥೋತ್ಸವ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Manjeshwar: ದೇಶ ಸೇವೆಗೆ ಸಮಯ ಮೀಸಲಿಡಿ: ಡಾ| ಪ್ರಭಾಕರ ಭಟ್‌ ಕಲ್ಲಡ್ಕ

Manjeshwar: ದೇಶ ಸೇವೆಗೆ ಸಮಯ ಮೀಸಲಿಡಿ: ಡಾ| ಪ್ರಭಾಕರ ಭಟ್‌ ಕಲ್ಲಡ್ಕ

DK-Shivakumar

Hubballi: ಬಿಜೆಪಿ ವಾಪಸ್‌ ಪಡೆದ ಕೇಸ್‌ ಪಟ್ಟಿ ಕೊಡುತ್ತೇವೆ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-M-J

IPL; ಮುಂಬೈಗೆ ಮತ್ತೆ ಜಯವರ್ಧನ ಕೋಚ್‌

TT

Asian Table Tennis: ಭಾರತಕ್ಕೆ ಮೂರು ಕಂಚು

1-aee-ddd

Ranji Trophy; ಮುಂಬಯಿ ಗೆಲುವಿಗೆ 262 ರನ್‌ ಗುರಿ

1-aee

Ranji Trophy;ಮಧ್ಯಪ್ರದೇಶ ಬೃಹತ್‌ ಮೊತ್ತ:ನಾಯಕ ಶುಭಂ ಶರ್ಮ 143, ಹರ್‌ಪ್ರೀತ್‌ 91 ರನ್‌

1-tennis-bg

Shanghai Masters Tennis; ಜೊಕೋವಿಕ್‌ಗೆ ಸೋಲು : ಜಾನ್ನಿಕ್‌ ಸಿನ್ನರ್‌ಗೆ ಪ್ರಶಸ್ತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police crime

Durga ಪೆಂಡಾಲ್‌ ಮೇಲೆ ಗುಂಡಿನ ದಾಳಿ: ನಾಲ್ವರಿಗೆ ಗಾಯ

train-track

Train; ಮತ್ತೊಂದು ಅವಘಡ: ಗೀತಾ ಜಯಂತಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ

Pak 2

Pakistan; ದೌರ್ಜನ್ಯ ನಿಲ್ಲಿಸದಿದ್ದರೆ ಪಾಕಿಸ್ಥಾನಕ್ಕೆ ಮುತ್ತಿಗೆ: ಪಶ್ತೂನ್‌ ತಾಕೀತು

isrel netanyahu

Ratan Tata ನಿಧನಕ್ಕೆ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಸಂತಾಪ

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.