ICC World Cup ಟಿಕೆಟ್‌ ಗಾಗಿ ಪೈಪೋಟಿ; ಇಂದಿನಿಂದ ಸೂಪರ್‌-6 ‌ ಕದನ


Team Udayavani, Jun 29, 2023, 12:12 PM IST

ICC World Cup ಟಿಕೆಟ್‌ ಗಾಗಿ ಪೈಪೋಟಿ; ಇಂದಿನಿಂದ ಸೂಪರ್‌-6 ‌ ಕದನ

ಬುಲವಾಯೊ: ವರ್ಷಾಂತ್ಯ ನಡೆಯುವ ಐಸಿಸಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಉಳಿದೆರಡು ತಂಡಗಳು ಯಾವುವು? ಯಾರಿಗೆಲ್ಲ ಭಾರತಕ್ಕೆ ಪ್ರಯಾಣಿಸುವ ಲಕ್ಕಿ ಟಿಕೆಟ್‌ ಲಭಿಸಲಿದೆ ಎಂಬ ಕೌತುಕ ತೀವ್ರಗೊಂಡಿದೆ. ಗುರುವಾರ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯ ಸೂಪರ್‌-6 ಹಣಾಹಣಿ ಆರಂಭವಾಗಲಿದ್ದು, ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಲೀಗ್‌ ಹಂತದ ಪಂದ್ಯಗಳ ಸಾಧನೆ ಯಂತೆ “ಎ’ ವಿಭಾಗದಿಂದ ಜಿಂಬಾಬ್ವೆ, ನೆದರ್ಲೆಂಡ್ಸ್‌ ಮತ್ತು ವೆಸ್ಟ್‌ ಇಂಡೀಸ್‌; “ಬಿ’ ವಿಭಾಗದಿಂದ ಶ್ರೀಲಂಕಾ, ಸ್ಕಾಟ್ಲೆಂಡ್‌ ಮತ್ತು ಒಮಾನ್‌ ಸೂಪರ್‌-6 ಹಂತ ಏರುವಲ್ಲಿ ಯಶಸ್ವಿಯಾಗಿವೆ. ನೇಪಾಳ, ಅಮೆರಿಕ, ಐರ್ಲೆಂಡ್‌ ಮತ್ತು ಯುಎಇ ರೇಸ್‌ನಿಂದ ಹೊರಬಿದ್ದಿವೆ. ಇವುಗಳಲ್ಲಿ ಬಲಿಷ್ಠ ಐರ್ಲೆಂಡ್‌ ತಂಡದ ನಿರ್ಗಮನ, ಒಮಾನ್‌ನಂಥ ಸಾಮಾನ್ಯ ತಂಡದ ಮುನ್ನಡೆ ಅಚ್ಚರಿ ಎನಿಸಿದೆ.

ಈ ಬಾರಿಯ ವಿಶ್ವಕಪ್‌ ಕೇವಲ 10 ತಂಡಗಳಿಗೆ ಸೀಮಿತಗೊಂಡಿರುವುದರಿಂದ ಅರ್ಹತಾ ಸುತ್ತಿನಲ್ಲಿ ಪೈಪೋಟಿ ತೀವ್ರಗೊಂಡಿದೆ. ಪ್ರಧಾನ ಸುತ್ತಿನ 8 ತಂಡಗಳನ್ನು ಕೂಡಿಕೊಳ್ಳಲು ಕೇವಲ 2 ತಂಡಗಳ ಆಯ್ಕೆಯಾಗಬೇಕಿದೆ. ಸೂಪರ್‌-6 ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದು ಫೈನಲ್‌ ಪ್ರವೇಶಿಸಿದ ತಂಡಗಳಿಗೆ ಅದೃಷ್ಟ ಖುಲಾಯಿಸಲಿದೆ.

ಲಂಕಾ, ಜಿಂಬಾಬ್ವೆ ಫೇವರಿಟ್‌: ಈಗಿನ ಲೆಕ್ಕಾಚಾರದಂತೆ ಜಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳಿಗೆ ಮುನ್ನಡೆಯ ಅವಕಾಶ ಹೆಚ್ಚು. ಕಾರಣ, ಇವೆರಡೂ ತಂಡಗಳು ಲೀಗ್‌ ಹಂತದಲ್ಲಿ ಅಜೇಯ ಸಾಧನೆಗೈದಿವೆ. ಜತೆಗೆ 4 ಅಂಕಗಳನ್ನೂ ಸೂಪರ್‌-6 ಹಂತಕ್ಕೆ ಕೊಂಡೊಯ್ದಿವೆ. ಲೀಗ್‌ ವಿಭಾಗದಲ್ಲಿ ಜಿಂಬಾಬ್ವೆ, ಶ್ರೀಲಂಕಾ ವಿರುದ್ಧ ಪರಾಭವಗೊಂಡ ತಂಡಗಳೆರಡೂ ಸೂಪರ್‌-6 ತಲುಪಿರುವ ಕಾರಣ ಈ ಅಂಕ ಲಭಿಸುತ್ತದೆ. ಉಳಿದಂತೆ ಸ್ಕಾಟ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ 2 ಅಂಕಗಳನ್ನು ಹೊಂದಿವೆ. ಯಾವುದೇ ಅಂಕಗಳನ್ನು ಹೊಂದಿಲ್ಲದ ತಂಡಗಳೆಂದರೆ ವೆಸ್ಟ್‌ ಇಂಡೀಸ್‌ ಮತ್ತು ಒಮಾನ್‌. ಈ ತಂಡಗಳಿಗೆ ಮುನ್ನಡೆಯ ಅವಕಾಶ ಕಡಿಮೆ.

ವಿಂಡೀಸ್‌ ಇಲ್ಲದ ವಿಶ್ವಕಪ್‌?!: ಆದರೆ ವೆಸ್ಟ್‌ ಇಂಡೀಸ್‌ ಇಲ್ಲದ ವಿಶ್ವಕಪ್‌ ಪಂದ್ಯಾವಳಿಯನ್ನು ಊಹಿಸಲೂ ಸಾಧ್ಯವಿಲ್ಲ. 70ರ ದಶಕದ ಮೊದಲೆರಡು ವಿಶ್ವಕಪ್‌ಗ್ಳಲ್ಲಿ ಅಜೇಯ ಸಾಧನೆಯೊಂದಿಗೆ ಚಾಂಪಿಯನ್‌ ಆಗಿ ಮೂಡಿಬಂದ ದೈತ್ಯ ತಂಡ ಈ ವೆಸ್ಟ್‌ ಇಂಡೀಸ್‌. ಆದರೆ ಯಾವಾಗ 1983ರಲ್ಲಿ ಭಾರತದಿಂದ ಅವಳಿ ಏಟು ತಿಂದು ನೆಲಕಚ್ಚಿತೋ, 40 ವರ್ಷಗಳಾದರೂ ಎದ್ದು ನಿಂತಿಲ್ಲ. ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಆಡುವಂಥ ದುಃಸ್ಥಿತಿ ಕೆರಿಬಿಯನ್ನರಿಗೆ ಎದುರಾಗಿರುವುದು ಅವರದ್ದಲ್ಲ, ಕ್ರಿಕೆಟಿನ ದುರ್ದೈವ. ಈ ಬಾರಿ ವಿಶ್ವಕಪ್‌ ಆಡಬೇಕಾದರೆ ಅದು ಸೂಪರ್‌-6 ಪಂದ್ಯಗಳನ್ನೆಲ್ಲ ಗೆಲ್ಲಬೇಕಿದೆ.

ಇದನ್ನೂ ಓದಿ:ಕುರಾನ್ ಬಗ್ಗೆ ಡಾಕ್ಯುಮೆಂಟರಿ ಮಾಡಿ ಏನಾಗುತ್ತದೆ ನೋಡಿ..: ‘ಆದಿಪುರುಷ್’ ತಂಡಕ್ಕೆ ಕೋರ್ಟ್

ಅದೇ ರೀತಿ 1996ರ ಚಾಂಪಿಯನ್‌ ತಂಡವಾದ ಶ್ರೀಲಂಕಾ ಕೂಡ ಅರ್ಹತಾ ಸುತ್ತಿನಲ್ಲಿ ಆಡಬೇಕಾದ ಸಂಕಟಕ್ಕೆ ಸಿಲುಕಿತು. ಆದರೆ ಅದು ವೆಸ್ಟ್‌ ಇಂಡೀಸ್‌ ನಷ್ಟು ಹೀನಾಯ ಸ್ಥಿತಿ ತಲುಪಿಲ್ಲ. 2007 ಮತ್ತು 2011ರ ವಿಶ್ವಕಪ್‌ ಫೈನಲ್‌ನಲ್ಲಿ ಆಡಿದೆ. ಆದರೆ 2ನೇ ಪ್ರಶಸ್ತಿ ಮಾತ್ರ ಮರೀಚಿಕೆಯೇ ಆಗುಳಿದಿದೆ.

ಜಿಂಬಾಬ್ವೆಯದ್ದು ಇನ್ನೊಂದು ಅವತಾರ. 1983ರಲ್ಲಿ ಚೊಚ್ಚಲ ವಿಶ್ವಕಪ್‌ ಆಡಲಿಳಿಯುವಾಗ ಜಿಂಬಾಬ್ವೆ ದೈತ್ಯ ತಂಡಗಳನ್ನೇ ಬೆಚ್ಚಿಬೀಳಿಸಿತ್ತು. ಮೊದಲ ಪಂದ್ಯದಲ್ಲೇ ನೆಚ್ಚಿನ ಆಸ್ಟ್ರೇಲಿಯನ್ನು ಕೆಡವಿ, ಬಳಿಕ ಭಾರತದ 5 ವಿಕೆಟ್‌ಗಳನ್ನು 17 ರನ್ನಿಗೆ ಕೆಡವಿ ಭಾರೀ ಸುದ್ದಿಯಾಗಿತ್ತು. ಆದರೆ ಮತ್ತೆಂದೂ ಈ ಆಫ್ರಿಕನ್‌ ಕಂಟ್ರಿ ಟಾಪ್‌ ಕ್ಲಾಸ್‌ ಪ್ರದರ್ಶನ ನೀಡಲಿಲ್ಲ. ಇದೀಗ ತವರಿನ ಅರ್ಹತಾ ಪಂದ್ಯಾವಳಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಸ್ಕಾಟ್ಲೆಂಡ್‌, ನೆದರ್ಲೆಂಡ್ಸ್‌ ತಂಡಗಳನ್ನೂ ಕಡೆಗಣಿಸುವಂತಿಲ್ಲ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.