ಮೆಲ್ಬರ್ನ್ ಗೆ ಆಗಮಿಸಿದ ಟೀಮ್‌ ಇಂಡಿಯಾ


Team Udayavani, Oct 21, 2022, 6:44 AM IST

ಮೆಲ್ಬರ್ನ್ ಗೆ ಆಗಮಿಸಿದ ಟೀಮ್‌ ಇಂಡಿಯಾ

ಮೆಲ್ಬರ್ನ್: ರೋಹಿತ್‌ ಶರ್ಮ ನಾಯಕತ್ವದ ಭಾರತ ತಂಡ ಗುರುವಾರ ಬ್ರಿಸ್ಬೇನ್‌ನಿಂದ ಮೆಲ್ಬರ್ನ್ಗೆ ಆಗಮಿಸಿತು. ಇಲ್ಲಿನ ಐತಿಹಾಸಿಕ “ಎಂಸಿಜಿ’ಯಲ್ಲಿ ರವಿವಾರ ಭಾರತ-ಪಾಕಿಸ್ಥಾನ ನಡುವೆ ಟಿ20 ವಿಶ್ವಕಪ್‌ ಸೂಪರ್‌-12 ಹಂತದ ಹೈ ವೋಲ್ಟೇಜ್‌ ಮುಖಾಮುಖಿ ಸಾಗಲಿದೆ.

ಕ್ರಿಕೆಟಿಗರು ಬ್ರಿಸ್ಬೇನ್‌ ಹೊಟೇಲ್‌ ರೂಮ್‌ ಬಿಡುವ, ಮೆಲ್ಬರ್ನ್ಗೆ ಬಂದಿಳಿಯುವ ದೃಶ್ಯಾವಳಿಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ. ಇದಕ್ಕೆ “ವೀ ಆರ್‌ ಇನ್‌ ಮೆಲ್ಬರ್ನ್, ಫಾರ್‌ ಅವರ್‌ ಫ‌ಸ್ಟ್‌ ಗೇಮ್‌’ ಎಂಬ ಶೀರ್ಷಿಕೆ ನೀಡಿದೆ.

ಉಳಿದ ತಂಡಗಳಂತೆ ಭಾರತ ಟಿ20 ವಿಶ್ವಕಪ್‌ ಸಮೀಪಿಸುವ ವೇಳೆ ದ್ವಿಪಕ್ಷೀಯ ಟಿ20 ಸರಣಿಯನ್ನು ಆಡಲಿಲ್ಲ. ಇದರ ಬದಲು ಪರ್ತ್‌ನಲ್ಲಿ 8 ದಿನಗಳ ಸಿದ್ಧತಾ ಶಿಬಿರಲ್ಲಿ ಪಾಲ್ಗೊಂಡಿತು. ಜತೆಗೆ ಪಶ್ಚಿಮ ಆಸ್ಟ್ರೇಲಿಯ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಿತು. ಒಂದನ್ನು ಗೆದ್ದು, ಇನ್ನೊಂದರಲ್ಲಿ ಸೋಲನುಭವಿಸಿತು. ಇದೇ ವೇಳೆ ಕ್ರಿಕೆಟಿಗರೆಲ್ಲ ರೋಟ್‌ನೆಸ್ಟ್‌ ಐಲ್ಯಾಂಡ್‌ಗೆ ತೆರಳಿ ಒಂದಿಷ್ಟು ರಿಲ್ಯಾಕ್ಸ್‌ ಮಾಡಿಕೊಂಡರು.

ಒಂದೇ ಅಭ್ಯಾಸ ಪಂದ್ಯ:

ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯ ವನ್ನು ಗೆದ್ದ ಭಾರತ ಬಹಳಷ್ಟು ಆತ್ಮವಿಶ್ವಾಸ ಗಳಿಸಿಕೊಂಡಿತು. ಆದರೆ ನ್ಯೂಜಿಲ್ಯಾಂಡ್‌ ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಇದರಿಂದ ಟೀಮ್‌ ಇಂಡಿಯಾದ ವಿಶ್ವಕಪ್‌ ತಯಾರಿಗೆ ಹಿನ್ನಡೆಯಾದದ್ದು ಸುಳ್ಳಲ್ಲ. ಆದರೆ ಭಾರತದ ಆಟಗಾರರು ಒಳಾಂಗಣದಲ್ಲಿ ಅಭ್ಯಾಸ ನಡೆಸುವ ಮೂಲಕ ಈ ಅವಧಿಯನ್ನು ಸದುಪಯೋಗಪಡಿಸಿಕೊಂಡರು.

ಭಾರತ-ಪಾಕಿಸ್ಥಾನ ಮುಖಾಮುಖೀಗೆ ಉಳಿದಿರುವುದು ಎರಡೇ ದಿವಸ. ಶುಕ್ರವಾರ ಎರಡೂ ತಂಡಗಳು ಮೆಲ್ಬರ್ನ್ ನಲ್ಲಿ ಮೊದಲ ಸುತ್ತಿನ ಅಭ್ಯಾಸಕ್ಕೆ ಇಳಿಯಲಿವೆ. ಆದರೆ ಇದೇ ವೇಳೆ ಮಳೆಯ ಮುನ್ಸೂಚನೆಯೂ ಇದೆ. ಇತ್ತಂಡ ಗಳ ಅಭ್ಯಾಸಕ್ಕೆ, ರವಿವಾರದ ಪಂದ್ಯಕ್ಕೆ ಹವಾಮಾನ ಎಷ್ಟರ ಮಟ್ಟಿಗೆ ಸಹಕರಿಸೀತು ಎಂಬುದೇ ಮುಖ್ಯ ಪ್ರಶ್ನೆ.

ರವಿವಾರ ಸಂಜೆ 7 ಗಂಟೆಗೆ (ಭಾರತದ ಕಾಲಮಾನದಂತೆ ಅಪರಾಹ್ನ 1.30) ಭಾರತ-ಪಾಕಿಸ್ಥಾನ ಪಂದ್ಯ ಆರಂಭವಾಗಲಿದೆ.

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

042174

WFI: ಕುಸ್ತಿಪಟುಗಳಿಗೆ ಡಬ್ಲ್ಯುಎಫ್ಐ ತಡೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.