ಟಿ20: ಲಂಕೆಯನ್ನು ಕೆಡವಿದ ಭಾರತ 


Team Udayavani, Jun 23, 2022, 10:18 PM IST

ಟಿ20: ಲಂಕೆಯನ್ನು ಕೆಡವಿದ ಭಾರತ 

ಡಂಬುಲ: ಸಾಮಾನ್ಯ ಬ್ಯಾಟಿಂಗ್‌ ಹಾಗೂ ಅಸಾಮಾನ್ಯ ಬೌಲಿಂಗ್‌ ಸಾಹಸದಿಂದ ಆತಿಥೇಯ ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯವನ್ನು ಭಾರತ 34 ರನ್ನುಗಳಿಂದ ಜಯಿಸಿದೆ.

ಗುರುವಾರದ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಗಳಿಸಿದ್ದು 6 ವಿಕೆಟಿಗೆ 138 ರನ್‌ ಮಾತ್ರ. ಶ್ರೀಲಂಕಾ ಆರಂಭದಿಂದಲೇ ಪ್ರವಾಸಿಗರ ಬೌಲಿಂಗ್‌ ದಾಳಿಗೆ ಚಡಪಡಿಸಿ 5 ವಿಕೆಟ್‌ ನಷ್ಟಕ್ಕೆ 104 ರನ್‌ ಗಳಿಸಿ ಶರಣಾಯಿತು.

ಸಿಡಿದು ನಿಂತ ಜೆಮಿಮಾ :

ಡೆತ್‌ ಓವರ್‌ ತನಕ ಭಾರತದ ಬ್ಯಾಟಿಂಗ್‌ ಕೂಡ ಆಮೆಗತಿಯಲ್ಲಿ ಸಾಗಿತ್ತು. ಆದರೆ ಜೆಮಿಮಾ ರೋಡ್ರಿಗಸ್‌ ಕೊನೆಯ ಹಂತದಲ್ಲಿ ಸಿಡಿದು ನಿಂತ ಪರಿಣಾಮ ಅಲ್ಪ ಮೊತ್ತದ ಸಂಕಟದಿಂದ ಪಾರಾಯಿತು. 134 ರನ್ನಿನಲ್ಲಿ 53 ರನ್‌ ಬಂದದ್ದು ಅಂತಿಮ 5 ಓವರ್‌ಗಳಲ್ಲಿ. ಇದರಲ್ಲಿ 20 ರನ್‌ ಕೊನೆಯ ಓವರ್‌ ಒಂದರಲ್ಲೇ ಸಿಡಿಯಲ್ಪಟ್ಟಿತು.

ಜೆಮಿಮಾ 27 ಎಸೆತಗಳಿಂದ 36 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ 3 ಬೌಂಡರಿ ಹಾಗೂ ಪಂದ್ಯದ ಏಕೈಕ ಸಿಕ್ಸರ್‌ ಒಳಗೊಂಡಿತ್ತು. ದೀಪ್ತಿ ಶರ್ಮ 8 ಎಸೆತಗಳಿಂದ ಅಜೇಯ 17 ರನ್‌ ಮಾಡಿದರು (3 ಬೌಂಡರಿ). ಈ ಜೋಡಿಯಿಂದ 18 ಎಸೆತಗಳಲ್ಲಿ 32 ರನ್‌ ಒಟ್ಟುಗೂಡಿತು.

ಓಪನರ್‌ ಶಫಾಲಿ ವರ್ಮ ಎಸೆತಕ್ಕೊಂದರಂತೆ 31 ರನ್‌ ಮಾಡಿದರು (4). ಮಿಥಾಲಿ ರಾಜ್‌ ನಿವೃತ್ತಿ ಬಳಿಕ ತಂಡದ ಚುಕ್ಕಾಣಿ ಹಿಡಿದ ಹರ್ಮನ್‌ಪ್ರೀತ್‌ ಕೌರ್‌ ಗಳಿಕೆ 20 ಎಸೆತಗಳಿಂದ 22 ರನ್‌ (3 ಬೌಂಡರಿ). ಆದರೆ ಸ್ಮತಿ ಮಂಧನಾ (1), ಎಸ್‌. ಮೇಘನಾ (0) ಕ್ಲಿಕ್‌ ಆಗಲಿಲ್ಲ. ಇವರಿಬ್ಬರನ್ನು ರಣಸಿಂಘೆ ಸತತ ಎಸೆತಗಳಲ್ಲಿ ಕೆಡವಿ ಭಾರತದ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು.

ಬಿಗಿ ಬೌಲಿಂಗ್‌ ದಾಳಿ :

ಭಾರತದ ಬೌಲಿಂಗ್‌ ಬೊಂಬಾಟ್‌ ಆಗಿತ್ತು. ದೀಪ್ತಿ ಶರ್ಮ ಮತ್ತು ಪೂಜಾ ವಸ್ತ್ರಾಕರ್‌ ಒಂದೊಂದು ಮೇಡನ್‌ ಓವರ್‌ ಎಸೆದು ಲಂಕೆಗೆ ಕಡಿವಾಣ ಹಾಕಿದರು. ಮಧ್ಯಮ ವೇಗಿ ಪೂಜಾ ಅವರ ಬೌಲಿಂಗ್‌ ಫಿಗರ್‌ ಇಷ್ಟೊಂದು ಆಕರ್ಷಕವಾಗಿತ್ತು: 4-1-13-1. ರಾಧಾ ಯಾದವ್‌ 22ಕ್ಕೆ 2 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಕಂಡರು.

ಮಧ್ಯಮ ಸರದಿಯ ಆಟಗಾರ್ತಿ ಕವಿಶಾ ದಿಲ್ಹಾರಿ ಹೊರತುಪಡಿಸಿದರೆ ಲಂಕೆಯ ಉಳಿದ ಬ್ಯಾಟರ್‌ಗಳಿಗೆ ಭಾರತದ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ. ಕವಿಶಾ ಪಂದ್ಯದಲ್ಲೇ ಸರ್ವಾಧಿಕ 47 ರನ್‌ ಮಾಡಿ ಅಜೇಯರಾಗಿ ಉಳಿದರು (49 ಎಸೆತ, 5 ಬೌಂಡರಿ). ದ್ವಿತೀಯ ಪಂದ್ಯ ಶನಿವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌ :

ಭಾರತ-6 ವಿಕೆಟಿಗೆ 138 (ಜೆಮಿಮಾ ಔಟಾಗದೆ 36, ಶಫಾಲಿ 31, ಕೌರ್‌ 22, ದೀಪ್ತಿ ಔಟಾಗದೆ 17, ಪೂಜಾ 14, ರಿಚಾ 11). ಶ್ರೀಲಂಕಾ-5 ವಿಕೆಟಿಗೆ 104 (ಕವಿಶಾ ಔಟಾಗದೆ 47, ಅತಪಟ್ಟು 16, ಕಾಂಚನಾ 11, ರಾಧಾ 22ಕ್ಕೆ 2, ದೀಪ್ತಿ 9ಕ್ಕೆ 1, ಶಫಾಲಿ 10ಕ್ಕೆ 1, ಪೂಜಾ 13ಕ್ಕೆ 1). ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗಸ್‌.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.