T20 match; 3ನೇ ಪಂದ್ಯದಲ್ಲಿ ವಿಂಡೀಸ್‌ ವಿರುದ್ಧ ಗೆದ್ದ ಹಾರ್ದಿಕ್‌ ಪಡೆ

ಸಿಡಿದ ಸೂರ್ಯ, ಆಕರ್ಷಕ ಅರ್ಧಶತಕ

Team Udayavani, Aug 9, 2023, 12:01 AM IST

T20 match; 3ನೇ ಪಂದ್ಯದಲ್ಲಿ ವಿಂಡೀಸ್‌ ವಿರುದ್ಧ ಗೆದ್ದ ಹಾರ್ದಿಕ್‌ ಪಡೆ

ಪ್ರೊವಿಡೆನ್ಸ್‌ (ಗಯಾನಾ): ಮಂಗಳವಾರದ ಸರಣಿ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ,  ವೆಸ್ಟ್‌ ಇಂಡೀಸ್‌ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದ್ದು, ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಸೂರ್ಯಕುಮಾರ್‌ ಯಾದವ್‌ ಅಮೋಘ 83 ರನ್‌ ಗಳಿಸಿ ಗೆಲುವಿಗೆ ನೆರವಾದರು. ಉಳಿದ ಎರಡು ಪಂದ್ಯಗಳು ಅಮೆರಿಕದಲ್ಲಿ ನಡೆಯಲಿದ್ದು, ಎರಡರಲ್ಲೂ ಗೆದ್ದರೆ ಮಾತ್ರ ಭಾರತಕ್ಕೆ ಸರಣಿ ವಶವಾಗಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 5 ವಿಕೆಟಿಗೆ 159 ರನ್‌ ಗಳಿಸಿತ್ತು. ಒಂದು ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ವಿಂಡೀಸ್‌, ನಂತರದಲ್ಲಿ ದಿಢೀರನೇ ಕುಸಿತ ಕಂಡಿತು. ಸ್ಪಿನ್ನರ್‌ ಕುಲದೀಪ್‌ ಯಾದವ್‌ ವಿಂಡೀಸ್‌ ಬ್ಯಾಟಿಗರನ್ನು ಬಹುವಾಗಿ ಕಾಡಿದರು. ಸದ್ಯ ಭಾರತ 2-1ರ ಹಿನ್ನಡೆಯಲ್ಲಿದೆ.

ವಿಂಡೀಸ್‌ನ 159 ರನ್‌ ಗುರಿ ಪಡೆದ ಭಾರತಕ್ಕೆ ಆಘಾತ ಕಾಡಿತು. ಇದೇ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಯಶಸ್ವಿ ಜೈಸ್ವಾಲ್‌, ಮಿಂಚುವಲ್ಲಿ ವಿಫ‌ಲರಾದರು. ಕೇವಲ 1 ರನ್‌ ಗಳಿಸಿ ಔಟಾದರು. ಶುಭಮನ್‌ ಗಿಲ್‌ ಕೂಡ ಈ ಪಂದ್ಯದಲ್ಲಿ ವಿಫ‌ಲಲಾರದು.

ನಂತರ ಬಂದ ಸೂರ್ಯಕುಮಾರ್‌ ಯಾದವ್‌ 44 ಎಸೆತಗಳಲ್ಲಿ 4 ಸಿಕ್ಸರ್‌, 10 ಬೌಂಡರಿಗಳ ಮೂಲಕ 83 ರನ್‌ ಗಳಿಸಿ, ಜೋಸೆಫ್ ಬೌಲಿಂಗ್‌ನಲ್ಲಿ ಔಟಾದರು. ಇನ್ನೊಂದು ಕಡೆ ತಿಲಕ್‌ ವರ್ಮ ಕೂಡ ಗಟ್ಟಿಯಾಗಿ ನಿಂತು ಅಜೇಯ 49 ರನ್‌ ಗಳಿಸಿ ಭಾರತವನ್ನು ಗೆಲುವಿನ ಮೆಟ್ಟಿಲು ಹತ್ತಿಸಿದರು. ಹಾರ್ದಿಕ್‌ ಪಾಂಡ್ಯ 20 ರನ್‌ ಗಳಿಸಿದರು.

ವಿಂಡೀಸ್‌ ಉತ್ತಮ ಆರಂಭ
ಬ್ರ್ಯಾಂಡನ್‌ ಕಿಂಗ್‌ ಮತ್ತು ಕೈಲ್‌ ಮೇಯರ್ ವಿಂಡೀಸಿಗೆ ಉತ್ತಮ ಆರಂಭ ಒದಗಿಸಿದರು. 7.4 ಓವರ್‌ಗಳಿಂದ 55 ರನ್‌ ಒಟ್ಟುಗೂಡಿತು. ಆಗ ಅಕ್ಷರ್‌ ಪಟೇಲ್‌ ಮೊದಲ ಬ್ರೇಕ್‌ ಒದಗಿಸಿದರು. ಮೇಯರ್ 25 ರನ್‌ ಗಳಿಸಿ ವಾಪಸಾದರು. 10 ಓವರ್‌ ಅಂತ್ಯಕ್ಕೆ ವಿಂಡೀಸ್‌ ಸ್ಕೋರ್‌ ಒಂದಕ್ಕೆ 73 ರನ್‌ ಆಗಿತ್ತು. ಮತ್ತೂಬ್ಬ ಸ್ಪಿನ್ನರ್‌ ಕುಲದೀಪ್‌ 12 ರನ್‌ ಮಾಡಿದ ಜಾನ್ಸನ್‌ ಚಾರ್ಲ್ಸ್‌ ಅವರನ್ನು ಪೆವಿಲಿಯನ್‌ಗೆ ರವಾನಿಸಿದರು.

ಕಳೆದ ಪಂದ್ಯದ ಹೀರೋ ನಿಕೋಲಸ್‌ ಪೂರನನ್‌ ಕ್ರೀಸ್‌ ಇಳಿದವರೇ ಮುನ್ನುಗ್ಗಿ ಬೀಸಲಾರಂಭಿಸಿದರು. ಕುಲದೀಪ್‌ ಮೇಲೆರಗಿ ಹೋಗಿ ಬೌಂಡರಿ, ಸಿಕ್ಸರ್‌ ಸಿಡಿಸತೊಡಗಿದರು. ಆದರೆ ಇವರ ಅಬ್ಬರ 20ರ ಗಡಿ ದಾಟಲಿಲ್ಲ. ಕುಲದೀಪ್‌ ಅವರೇ ಕಂಟಕವಾಗಿ ಕಾಡಿದರು. 28ಕ್ಕೆ 3 ವಿಕೆಟ್‌ ಉರುಳಿಸಿದ ಕುಲದೀಪ್‌ ಅವರೇ ಭಾರತದ ಯಶಸ್ವಿ ಬೌಲರ್‌.

15ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಆರಂಭಕಾರ ಬ್ರ್ಯಾಂಡನ್‌ ಕಿಂಗ್‌ ಅವರದು ವಿಂಡೀಸ್‌ ಸರದಿಯ ಸರ್ವಾಧಿಕ ಗಳಿಕೆ. ಅವರು ಎಸೆತಕ್ಕೊಂದರಂತೆ 42 ರನ್‌ ಹೊಡೆದರು(5 ಬೌಂಡರಿ, 1 ಸಿಕ್ಸರ್‌). ನಾಯಕ ರೋವ¾ನ್‌ ಪೊವೆಲ್‌ ಅಜೇಯ 40 ರನ್‌ ಬಾರಿಸಿ ತಂಡದ ಮೊತ್ತವನ್ನು 160ರ ಸಮೀಪ ಕೊಂಡೊಯ್ದರು(19 ಎಸೆತ, 1 ಬೌಂಡರಿ, 3 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌:
ವೆಸ್ಟ್‌ ಇಂಡೀಸ್‌-5 ವಿಕೆಟಿಗೆ 159 (ಕಿಂಗ್‌ 42, ಪೊವೆಲ್‌ ಔಟಾಗದೆ 40, ಮೇಯರ್ 25, ಪೂರಣ್‌ 20, ಕುಲದೀಪ್‌ 28ಕ್ಕೆ 3).ಭಾರತ – 3 ವಿಕೆಟ್‌ಗೆ 164 (ಸೂರ್ಯಕುಮಾರ್‌ ಯಾದವ್‌ 83, ತಿಲಕ್‌ ವರ್ಮ 49. ಜೋಸೆಫ್ 25/2)

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.