![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 6, 2020, 10:54 PM IST
ಭುವನೇಶ್ವರ: ತವರಿನಂಗಳದಲ್ಲಿ ಭಾರತ ಹೆಚ್ಚು ಅಪಾಯಕಾರಿ ತಂಡವಾಗಿ ಗೋಚರಿಸಲಿದೆ ಎಂಬುದಾಗಿ ವಿಶ್ವ ಚಾಂಪಿಯನ್ ಬೆಲ್ಜಿಯಂ ಹಾಕಿ ತಂಡದ ನಾಯಕ ಥಾಮಸ್ ಬ್ರಿಲ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಎಫ್ಐಎಚ್ ಹಾಕಿ ಪ್ರೊ ಲೀಗ್ ಪಂದ್ಯಾವಳಿಗಾಗಿ ಭಾರತಕ್ಕೆ ಬಂದಿಳಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.
“ನೆದರ್ಲೆಂಡ್ಸ್ ಎದುರಿನ ಆರಂಭಿಕ ಲೀಗ್ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತ್ತು. ಇದು ಭಾರತದ ಮನೋಬಲವನ್ನು ಹೆಚ್ಚಿಸಿದೆ. ನಮ್ಮ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ಬ್ರಿಲ್ಸ್ ಹೇಳಿದರು.
“ಭಾರತ ಅತ್ಯಂತ ಚುರುಕಿನ ಆಟವಾಡು ತ್ತಿದೆ. ಅವರ ಡಚ್ಚರೆದುರಿನ ಕಾದಾಟವನ್ನು ಕಂಡಿದ್ದೇವೆ. ಹೀಗಾಗಿ ಅವರು ನಮಗೂ ದೊಡ್ಡ ಸವಾಲಾಗುವುದರಲ್ಲಿ ಅನುಮಾನ ವಿಲ್ಲ. ಭಾರತವೊಂದು ಕಠಿನ ಎದುರಾಳಿ. ಆದರೆ ಇಂಥ ಕಠಿನ ಸ್ಪರ್ಧಿಗಳೆದುರು ಆಡಲು ನಾವು ಕಾದು ಕುಳಿತಿದ್ದೇವೆ. ಇದರಿಂದ ಮುಂಬರುವ ಒಲಿಂಪಿಕ್ಸ್ ವೇಳೆ ನಮ್ಮ ಆಟದಲ್ಲಿ ಸುಧಾರಣೆ ಆಗಲಿದೆ. ಪ್ರೊ ಲೀಗ್ ಟೂರ್ನಿ ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಗೆ ಅತ್ಯುತ್ತಮ ವೇದಿಕೆ’ ಎಂಬುದು ಬೆಲ್ಜಿಯಂ ಕಪ್ತಾನನ ಅನಿಸಿಕೆ.
ಬೆಲ್ಜಿಯಂ ಇದಕ್ಕೂ ಮೊದಲು ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ವಿರುದ್ಧ ಅವರದೇ ಅಂಗಳದಲ್ಲಿ ಜಯ ಸಾಧಿ ಸಿದ ವಿಶ್ವಾಸದಲ್ಲಿದ್ದರೂ ಭಾರತ ದೆದುರಿನ ಸವಾಲು ಭಿನ್ನ ಎಂಬುದಾಗಿ ಬ್ರಿಲ್ಸ್ ಅಭಿಪ್ರಾಯಪಟ್ಟಿದ್ದಾರೆ. ಕೋಚ್ ಶೇನ್ ಮೆಕ್ಲಿಯೋಡ್ ಕೂಡ ಬ್ರಿಲ್ಸ್ ಅಭಿ ಪ್ರಾಯವನ್ನು ಸಮರ್ಥಿಸಿದರು.
ಸ್ಮರಣೀಯ ತಾಣ
ಭಾರತ-ಬೆಲ್ಜಿಯಂ ನಡುವಿನ ಪಂದ್ಯ ಫೆ. 8 ಮತ್ತು 9ರಂದು “ಕಳಿಂಗ ಸ್ಟೇಡಿಯಂ’ ನಲ್ಲಿ ನಡೆಯಲಿದೆ. ಭುವನೇಶ್ವರದ ಈ ಸ್ಟೇಡಿಯಂನಲ್ಲೇ ಬೆಲ್ಜಿಯಂ 2018ರಲ್ಲಿ ತನ್ನ ಮೊದಲ ವಿಶ್ವಕಪ್ ಕಿರೀಟವನ್ನು ಏರಿಸಿಕೊಂಡಿತ್ತು!
“ಮತ್ತೆ ಭುವನೇಶ್ವರಕ್ಕೆ ಮರಳಿದ್ದೇವೆ. ನಮ್ಮ ಸ್ಮರಣೀಯ ನೆನಪುಗಳ ಗಣಿ ಇದಾಗಿದೆ. ಇಲ್ಲಿನ ಟಫ್ì ಮೇಲೆ ಕಾಲಿಡುತ್ತಿದ್ದಂತೆಯೇ ನೆನಪುಗಳೆಲ್ಲ ಉಕ್ಕಿ ಬರಲಿದೆ. ಇದು ವಿಶ್ವದ ಅತ್ಯುತ್ತಮ ಹಾಕಿ ಸ್ಟೇಡಿಯಂಗಳಲ್ಲಿ ಒಂದು’ ಎಂದೂ ಬ್ರಿಲ್ಸ್ ಪ್ರಶಂಸಿಸಿದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.