![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 29, 2022, 11:06 PM IST
ಜೋಹರ್ ಬಹ್ರು (ಮಲೇಷ್ಯಾ): ಎರಡು ಬಾರಿಯ ಚಾಂಪಿಯನ್ಸ್ ಭಾರತವು ತೀವ್ರ ಪೈಪೋಟಿಯಿಂದ ಸಾಗಿದ ಫೈನಲ್ ಹೋರಾಟದಲ್ಲಿ ಬಲಿಷ್ಠ ಆಸ್ಟ್ರೇಲಿಯವನ್ನು ಪೆನಾಲ್ಟಿ ಶೂಟೌಟ್ನಲ್ಲಿ 5-4 ಅಂತರದಿಂದ ಸೋಲಿಸಿ ಸುಲ್ತಾನ್ ಆಫ್ ಜೋಹರ್ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಭಾರತವು ಐದು ವರ್ಷಗಳ ಬಳಿಕ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ನಿಗದಿತ ಅವಧಿಯ ಆಟದ ವೇಳೆ ಭಾರತ ಮತ್ತು ಆಸ್ಟ್ರೇಲಿಯ 1-1 ಗೋಲಿನಿಂದ ಸಮಬಲ ಸ್ಥಾಪಿಸಿತ್ತು. ಪ್ರಶಸ್ತಿ ನಿರ್ಣಯಿಸಲು ನಡೆದ ಪೆನಾಲ್ಟಿ ಶೂಟೌಟ್ನಲ್ಲಿಯೂ ಉಭಯ ತಂಡಗಳು 3-3 ಸಮಬಲ ಸಾಧಿಸಿದ್ದವು. ಇದರಿಂದ ಪ್ರಶಸ್ತಿ ನಿರ್ಣಯಿಸಲು ಸಡನ್ ಡೆತ್ ಅಳವಡಿಸಲಾಯಿತು. ಇದರಲ್ಲಿ ಭಾರತ ಜಯಭೇರಿ ಬಾರಿಸಿತು.
ಭಾರತದ ಉತ್ತಮ್ ಸಿಂಗ್ ಶೂಟೌ ಟ್ನಲ್ಲಿ ಎರಡು ಗೋಲು ಹೊಡೆದರು. ಇದರಲ್ಲಿ ಸಡನ್ ಡೆತ್ನಲ್ಲಿ ಹೊಡೆದ ಗೋಲು ಸೇರಿದೆ. ಅವರಲ್ಲದೇ ವಿಷ್ಣುಕಾಂತ್ ಸಿಂಗ್, ಅಂಕಿತ್ ಪಾಲ್, ಸುದೀಪ್ ಚಿರ್ಮಾಕೊ ಭಾರತ ಪರ ಗೋಲು ಹೊಡೆದ ಆಟಗಾರರಾಗಿದ್ದಾರೆ.
ಶೂಟೌಟ್ ಬಳಿಕ ಸಡನ್ ಡೆತ್ನಲ್ಲಿ ವಿಷ್ಣುಕಾಂತ್ ಗೋಲು ಹೊಡೆಯಲು ವಿಫಲರಾಗಿದ್ದರು. ಹರ್ಟ್ ಲಿಯಮ್ ಕೂಡ ಗೋಲು ಹೊಡೆಯಲಿಲ್ಲ. ಉತ್ತಮ್ ಗೋಲು ಹೊಡೆದ ಕಾರಣ 4-3 ಮುನ್ನಡೆ ಪಡೆಯಿತು. ಇದನ್ನು ಬರ್ನ್ಸ್ 4-4 ಸಮಬಲ ಮಾಡಿದರು. ಆಬಳಿಕ ಸುದೀಪ್ ಗೋಲು ಹೊಡೆದು 5-4 ಮುನ್ನಡೆ ಸಾಧಿಸಿದರು. ನಿರ್ಣಾಯಕ ಪ್ರಯತ್ನದಲ್ಲಿ ಬ್ರೂಕ್ಸ್ ಜೋಶುವ ಗೋಲು ಹೊಡೆಯಲು ವಿಫಲರಾದ ಕಾರಣ ಭಾರತ ಜಯಭೇರಿ ಬಾರಿಸಿ ಸಂಭ್ರಮಿಸಿತು.
ಭಾರತ ಪರ ಸಂದೀಪ್ 13ನೇ ನಿಮಿಷದಲ್ಲಿ ಫೀಲ್ಡ್ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿದ್ದರು. 28ನೇ ನಿಮಿಷದಲ್ಲಿ ಜಾಕ್ ಹೊಲ್ಲಾಡ್ ಗೋಲು ಹೊಡೆದು ಸಮಬಲ ಸ್ಥಾಪಿಸಿದ್ದರು.
ಭಾರತ ಈ ಪ್ರಶಸ್ತಿಯನ್ನು 2013 ಮತ್ತು 2014ರಲ್ಲಿ ಜಯಿಸಿದ್ದರೆ 4 ಬಾರಿ ಫೈನಲಿಗೇರಿದ ಸಾಧನೆ ಮಾಡಿತ್ತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.