India; ಒಂದು ದೇಶ, ಎರಡು ಚಿನ್ನ: ಚೆಸ್‌ ವೀರರಿಗೆ ಅಭಿನಂದನೆ

ಭಾರತೀಯರ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ, ವಿಶ್ವನಾಥನ್‌ ಆನಂದ್‌, ಸಚಿನ್‌ ತೆಂಡುಲ್ಕರ್‌

Team Udayavani, Sep 23, 2024, 11:58 PM IST

1-chesss

ಹೊಸದಿಲ್ಲಿ: ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಐತಿಹಾಸಿಕ ಬಂಗಾರ ಗೆದ್ದ ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಚೆಸ್‌ ದಂತಕತೆ ವಿಶ್ವನಾಥನ್‌ ಆನಂದ್‌, ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸೇರಿ ಅನೇಕರು ಶುಭ ಹಾರೈಸಿದ್ದಾರೆ. “ಒಂದು ದೇಶ, ಎರಡು ಚಿನ್ನ’ ಎಂಬುದು ತೆಂಡುಲ್ಕರ್‌ ಶ್ಲಾಘನೆ.

ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಮುಕ್ತಾಯಗೊಂಡ 45ನೇ ಚೆಸ್‌ ಒಲಿಂಪಿಯಾಡ್‌ನ‌ 11ನೇ ಮತ್ತು ಅಂತಿಮ ಸುತ್ತಿನಲ್ಲಿ ಭಾರತ ಪುರುಷರ ತಂಡ ಸ್ಲೊವೇನಿಯಾ ವಿರುದ್ಧ, ಮಹಿಳಾ ತಂಡ ಅಜರ್‌ಬೈಜಾನ್‌ ವಿರುದ್ಧ ಗೆದ್ದು ಎರಡೂ ವಿಭಾಗಳಲ್ಲೂ ಬಂಗಾರದ ಮೆರಗು ಮೂಡಿಸಿತ್ತು. ಈ ಕೂಟದಲ್ಲಿ ಭಾರತದ ಎರಡೂ ತಂಡಗಳಿಗೆ ಒಲಿದ ಚೊಚ್ಚಲ ಬಂಗಾರವಿದು. ಹೀಗಾಗಿ ಇಡೀ ಕ್ರೀಡಾಲೋಕವೇ ಈಗ ಭಾರತೀಯ ಚೆಸ್‌ನತ್ತ ತಿರುಗಿ ನೋಡುತ್ತಿದೆ.

ವಿಶ್ವನಾಥನ್‌ ಆನಂದ್‌ ಮೆಚ್ಚುಗೆ
ಬಂಗಾರ ಗೆದ್ದ ಭಾರತೀಯ ಚೆಸ್‌ ತಂಡದ ಸಾಧನೆಗೆ 5 ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನೊಂದು ವೇಳೆ ಆಡಲು ಬಯಸಿದ್ದರೆ, ಇಂಥ ತಂಡದೊಂದಿಗೆ ಆಡುತ್ತಿದ್ದೆ ಎಂದು ವಿಶಿ ಹೇಳಿದ್ದಾರೆ. ವಿಜೇತರಿಗೆ ಆನಂದ್‌ ಅವರೇ ಟ್ರೋಫಿ ನೀಡಿದ್ದು ವಿಶೇಷವಾಗಿತ್ತು.

ಡಿ. ಗುಕೇಶ್‌, ಆರ್‌.ಪ್ರಜ್ಞಾನಂದ, ಅರ್ಜುನ್‌ ಎರಿಗೇಸಿ ಮತ್ತು ಆರ್‌. ವೈಶಾಲಿ ಅವರೆಲ್ಲ “ವೆಸ್ಟ್‌ ಬ್ರಿಡ್ಜ್ ಆನಂದ್‌ ಚೆಸ್‌ ಅಕಾಡೆಮಿ’ಯಲ್ಲಿ ಪಳಗಿದವರು ಎನ್ನುವುದು ವಿಶೇಷ.

ಸಚಿನ್‌ ಅಭಿನಂದನೆ
ಚೆಸ್‌ ಬಂಗಾರ ಗೆದ್ದ ಭಾರತೀಯ ತಂಡಗಳಿಗೆ ಅಭಿನಂದಿಸಿರುವ ಸಚಿನ್‌ ತೆಂಡುಲ್ಕರ್‌, “ಒಂದು ದೇಶ, ಎರಡು ಚಿನ್ನ’ ಎಂದು ಶ್ಲಾಘಿಸಿದ್ದಾರೆ.

ರೋಹಿತ್ ಶೈಲಿ ಅನುಕರಣೆ

ಚೆಸ್‌ ಒಲಿಂಪಿಯಾಡ್‌ ಟ್ರೋಫಿ ವಿತರಿಸುವಾಗ ಗುಕೇಶ್‌ ಮತ್ತು ಡಿ. ಹರಿಕಾ ಇಬ್ಬರೂ, ಟಿ20 ವಿಶ್ವಕಪ್‌ ಪ್ರಶಸ್ತಿ ವಿತರಣೆ ವೇಳೆ ಭಾರತದ ನಾಯಕ ರೋಹಿತ್‌ ಶರ್ಮ ಮೆಲ್ಲನೆ ಹೆಜ್ಜೆಯಿಟ್ಟು ಟ್ರೋಫಿಯೆಡೆಗೆ ಬಂದಂತೆ ಅನುಕರಿಸಿ ಗಮನ ಸೆಳೆದರು. ಅಂದು ರೋಹಿತ್‌, ಫ‌ುಟ್‌ಬಾಲ್‌ ದಂತಕತೆ ಲಿಯೋನೆಲ್‌ ಮೆಸ್ಸಿ ಅವರಂತೆ ಸ್ಲೋ ವಾಕ್‌ ಸಂಭ್ರಮಾಚರಣೆ ಮಾಡಿದ್ದರು.

ಭಾರತ ಕನಸುಗಳಿಂದ ತುಂಬಿದೆ: ಮೋದಿ
ಪ್ರಧಾನಿ ನರೇಂದ್ರ ಮೋದಿ ಯವರು ಅಮೆರಿಕದಿಂದಲೇ ಭಾರತದ ಚೆಸ್‌ ತಂಡಗಳಿಗೆ ಅಭಿನಂದಿಸಿದ್ದಾರೆ. ಭಾರತೀಯರ ಚೆಸ್‌ ಸಾಧನೆಯನ್ನು ಮುಂದಿಟ್ಟು ನ್ಯೂಯಾರ್ಕ್‌ನಲ್ಲಿ ಮಾತನಾಡಿ ರುವ ಮೋದಿ, ಭಾರತ ದೇಶ ಶಕ್ತಿ ಮತ್ತು ಕನಸುಗಳಿಂದ ತುಂಬಿದೆ ಎಂದು ಕೊಂಡಾಡಿದರು.

ಟಾಪ್ ನ್ಯೂಸ್

High-Court

High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್‌

High-Court

High Court: ಕೋರ್ಟ್‌ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ

pratp

Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

Balachandra

Thirupathi: ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಶಾಸಕ ಬಾಲಚಂದ್ರ

Eshawar-Khandre

Mysuru Dasara: ಆನೆಗಳೊಂದಿಗೆ ಸೆಲ್ಫಿ ,ರೀಲ್ಸ್‌ , ಫೋಟೋ ನಿಷೇಧ: ಸಚಿವ ಈಶ್ವರ ಖಂಡ್ರೆ

Accident-Logo

Mysuru: ಕಾರು ಢಿಕ್ಕಿ: ಬೈಕಿನಲ್ಲಿದ್ದ ಮಗು ಸ್ಥಳದಲ್ಲೇ ಸಾವು; ಹೆತ್ತವರಿಗೆ ಗಂಭೀರ ಗಾಯ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rfff

Under-19 ಕ್ರಿಕೆಟ್‌ ಸರಣಿ ಗೆದ್ದ ಭಾರತ

1-kkl

Tennis ಲೇವರ್‌ ಕಪ್‌: ಟೀಮ್‌ ಯೂರೋಪ್‌ ಚಾಂಪಿಯನ್‌

1-pantt

Declare; ರೋಹಿತ್‌ ಶರ್ಮ ನಿರ್ಧಾರ ಸರಿಯಾಗಿಯೇ ಇತ್ತು: ಪಂತ್‌

1-aa

ODI series; ಕ್ಲೀನ್‌ಸ್ವೀಪ್‌ ತಪ್ಪಿಸಿಕೊಂಡ ದಕ್ಷಿಣ ಆಫ್ರಿಕಾ

tennis

Chengdu Open ಟೆನಿಸ್‌: ಪ್ರಶಸ್ತಿ ಸುತ್ತಿನಲ್ಲಿ ಭಾರತದ ಜೋಡಿಗಳು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kudali

Shivamogga: ತಿರುಪತಿ ಲಡ್ಡಿಗೆ ಅಪಚಾರ: ಕೂಡಲಿ ಶ್ರೀಗಳಿಂದ 3 ದಿನ ಉಪವಾಸ ವ್ರತ

High-Court

High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್‌

High-Court

High Court: ಕೋರ್ಟ್‌ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ

1-eqweewe

Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ

pratp

Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.