ಭಾರತದ ವಿಶ್ವಕಪ್‌ ತಂಡ ಬಹುತೇಕ ಅಂತಿಮ


Team Udayavani, Feb 18, 2019, 12:30 AM IST

india.jpg

ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಅಂತಿಮ 3 ಏಕದಿನ ಪಂದ್ಯಗಳಿಗಾಗಿ ಪ್ರಕಟಿಸಲಾದ ಭಾರತ ತಂಡ ಮುಂಬರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವುದು ಬಹುತೇಕ ಖಚಿತ. ಆದರೆ ಇದರಲ್ಲಿ ಎಡಗೈ ವೇಗಿ ಇಲ್ಲದಿರುವುದೊಂದು ಕೊರತೆ.

ಮಣಿಪಾಲ: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯಲಿರುವ 12ನೇ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ತಂಡದ ಸ್ವರೂಪ ಹೇಗಿದ್ದೀತು, ಈ ಪ್ರತಿಷ್ಠಿತ ಕೂಟದಲ್ಲಿ ಯಾರೆಲ್ಲ ಆಡಬಹುದು ಎಂಬ ಕುತೂಹಲ ಒಂದು ಹಂತಕ್ಕೆ ತಣಿದಿದೆ.
 
ಮುಂಬರುವ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಸರಣಿಗಾಗಿ ಭಾರತದ 2 ತಂಡಗಳನ್ನು ಪ್ರಕಟಿಸಲಾಗಿದೆ. ಮೊದಲೆರಡು ಪಂದ್ಯಗಳಿಗಾಗಿ ಒಂದು ತಂಡವಾದರೆ, ಕೊನೆಯ 3 ಪಂದ್ಯಗಳಿಗಾಗಿ ಮತ್ತೂಂದು ತಂಡ. ಇದರಲ್ಲಿ ಕೊನೆಯ ತಂಡವೇ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ಬಹುತೇಕ ಖಚಿತ ಎಂಬುದು ಬಹುತೇಕ ಮಂದಿಯ ಲೆಕ್ಕಾಚಾರ.

ಈ ತಂಡದಲ್ಲಿ 15 ಆಟಗಾರರಿದ್ದಾರೆ. ಬ್ಯಾಟ್ಸ್‌ಮನ್‌, ಬೌಲರ್, ಕೀಪರ್, ಆಲ್‌ರೌಂಡರ್‌ಗಳಿಂದ ತಂಡ ಸಮತೋಲನ ಗೊಂಡಿದೆಯಾದರೂ ಎಡಗೈ ವೇಗಿಗಳಿಲ್ಲ ದಿರುವುದೊಂದು ಕೊರತೆ. ಇಂಗ್ಲೆಂಡ್‌ ಟ್ರ್ಯಾಕ್‌ಗಳಲ್ಲಿ ಎಡಗೈ ಬೌಲರ್ ಟ್ರಂಪ್‌ಕಾರ್ಡ್‌ ಆಗುವ ಸಾಧ್ಯತೆ ಇದ್ದೇ ಇದೆ. ಹಾಗೆಯೇ ಉಳಿದ ತಂಡಗಳಲ್ಲಿ ಬೌಲ್ಟ್, ಸ್ಟಾರ್ಕ್‌, ಅಮಿರ್‌ ಮೊದಲಾದ ಎಡಗೈ ವೇಗಿಗಳಿರುವುದರಿಂದ ಭಾರತಕ್ಕೆ ಇದೊಂದು ಕೊರತೆ ಎಂದೇ ಹೇಳಬೇಕಾಗುತ್ತದೆ. 

ಮೊನ್ನೆಯ ಆಯ್ಕೆಗೂ ಮುನ್ನ ಸುದ್ದಿಯಲ್ಲಿದ್ದ ಉನಾದ್ಕತ್‌, ಖಲೀಲ್‌ ಅಹ್ಮದ್‌ ಇಬ್ಬರೂ ಆಸ್ಟ್ರೇಲಿಯ ಸರಣಿಗೆ ಆಯ್ಕೆಯಾಗದಿದ್ದುದು ಅಚ್ಚರಿ. ಆದರೆ ವಿಶ್ವಕಪ್‌ ದೃಷ್ಟಿಯಿಂದ ಇನ್ನೂ ಮೂವರು ಮೀಸಲು ಯಾದಿಯಲ್ಲಿದ್ದಾರೆ ಎಂದು ಪ್ರಸಾದ್‌ ಹೇಳಿದ್ದು, ಇದರಲ್ಲಿ ಎಡಗೈ ವೇಗಿಗಳೂ ಇರಬಹುದು ಎಂದು ಭಾವಿಸಬಹುದಾಗಿದೆ.

ಸರಣಿ ಗೆಲುವು ಅನಿವಾರ್ಯ
ನಿಯಮಾವಳಿಯಂತೆ ಪಂದ್ಯಾವಳಿಗೆ ಕನಿಷ್ಠ ಒಂದು ತಿಂಗಳಿರುವಾಗ ತಂಡದ ಅಂತಿಮ ಯಾದಿಯನ್ನು ಐಸಿಸಿಗೆ ಕಳುಹಿಸಬೇಕಾಗುತ್ತದೆ. ಅನಂತರ ಇದರಲ್ಲಿ ಬದಲಾವಣೆ ಸಂಭವಿಸುವುದೇನಿದ್ದರೂ ತುರ್ತು ಸಂದರ್ಭಗಳಲ್ಲಿ ಮಾತ್ರ. ಇದಕ್ಕೆ ಐಸಿಸಿ ತಾಂತ್ರಿಕ ಸಮಿತಿಯ ಒಪ್ಪಿಗೆ ಅಗತ್ಯ. ಸದ್ಯ ಭಾರತದ ಮುಂದಿರುವುದು ಆಸ್ಟ್ರೇಲಿಯ ವಿರುದ್ಧದ ಸರಣಿ ಮಾತ್ರ. ಟೀಮ್‌ ಇಂಡಿಯಾದ ಎಲ್ಲ ಆಟಗಾರರಿಗೂ ಈ ಸರಣಿ ಅಗ್ನಿಪರೀಕ್ಷೆ. ವಿಶ್ವಕಪ್‌ನಲ್ಲಿ ಮಿಂಚಬಹುದೆಂಬ ನಂಬಿಕೆಯಿಂದ ಈ ಕ್ರಿಕೆಟಿಗರನ್ನು ಆರಿಸಲಾಗಿದೆ. ಎಲ್ಲರೂ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡುವುದು ಅನಿವಾರ್ಯ. ಸರಣಿ ಗೆಲುವು ಕೂಡ ಅತ್ಯಗತ್ಯ. ತವರಲ್ಲೇ ಸೋತ ಕಾಂಗರೂ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಕಾರಣ, ಅದು ಹಾಲಿ ವಿಶ್ವ ಚಾಂಪಿಯನ್‌. ಅಕಸ್ಮಾತ್‌ ಸರಣಿ ಸೋತರೆ ಭಾರತದ ವಿಶ್ವಕಪ್‌ ತಯಾರಿಗೆ ದೊಡ್ಡ ಹಿನ್ನಡೆಯಾಗಲಿದೆ. ಇದಕ್ಕೆ ಐಪಿಎಲ್‌ನಲ್ಲಿ ಪರಿಹಾರ ಹುಡುಕುವುದು ಸೂಕ್ತವಲ್ಲ. ಆಗ ವಿಶ್ವಕಪ್‌ ತಂಡದ ಸ್ವರೂಪ ಮತ್ತೆ ಬದಲಾಗಬೇಕಾಗುತ್ತದೆ!

ವಿಶ್ವಕಪ್‌ ಸಂಭಾವ್ಯ ತಂಡ
– ಬ್ಯಾಟ್ಸ್‌ಮನ್‌: ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ, ಅಂಬಾಟಿ ರಾಯುಡು, ಕೇದಾರ್‌ ಜಾಧವ್‌.
– ವಿಕೆಟ್‌ ಕೀಪರ್: ಮಹೇಂದ್ರ ಸಿಂಗ್‌ ಧೋನಿ, ರಿಷಬ್‌ ಪಂತ್‌.
– ಆಲ್‌ರೌಂಡರ್: ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್‌.
– ಫಾಸ್ಟ್‌ ಬೌಲರ್: ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ.
– ಸ್ಪಿನ್ನರ್‌: ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌.

ಟಾಪ್ ನ್ಯೂಸ್

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

1-eee

International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

B–G Trophy: ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

1-trrr

Asian Champions Trophy ಸೆಮಿಫೈನಲ್‌ : ಕೊರಿಯಾ ವಿರುದ್ಧ ಭಾರತ ಫೇವರಿಟ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.