![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 7, 2022, 8:00 AM IST
ಢಾಕಾ: ಕ್ಯಾಚ್ ಬಿಟ್ಟರೆ ಮ್ಯಾಚ್ ಕೂಡ ಜಾರುತ್ತದೆ ಎಂಬುದನ್ನು ಟೀಮ್ ಇಂಡಿಯಾ ರವಿವಾರ ಚೆನ್ನಾಗಿ ಅರ್ಥೈಸಿಕೊಂಡಿದೆ. ಬುಧವಾರದ ದ್ವಿತೀಯ ಪಂದ್ಯದಲ್ಲಿ ಈ ತಪ್ಪನ್ನು ಪುನರಾವರ್ತಿಸದಂತೆ ನೋಡಿಕೊಂಡು, ಉಳಿದೆರಡೂ ವಿಭಾಗಗಳಲ್ಲಿ ಸುಧಾರಿತ ಪ್ರದರ್ಶನ ನೀಡಿದರಷ್ಟೇ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಯನ್ನು ರೋಹಿತ್ ಪಡೆ ಸಮ ಬಲಗೊಳಿಸೀತು ಎಂಬುದು ಸದ್ಯದ ಲೆಕ್ಕಾಚಾರ ಹಾಗೂ ನಿರೀಕ್ಷೆ.
ಈ ಪಂದ್ಯ ಕೂಡ “ಶೇರ್ ಎ ಬಾಂಗ್ಲಾ ಸ್ಟೇಡಿಯಂ’ನಲ್ಲೇ ನಡೆಯಲಿದೆ. ಇಲ್ಲಿನ ಟ್ರ್ಯಾಕ್ ಹೇಗೆ ವರ್ತಿಸುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದು ಅಪ್ಪಟ ಬೌಲಿಂಗ್ ಟ್ರ್ಯಾಕ್. ಸ್ಪಿನ್ ಮತ್ತು ಫಾಸ್ಟ್ ಬೌಲರ್ಗಳಿಬ್ಬರೂ ಇದರ ಪ್ರಯೋಜನ ಎತ್ತಬಲ್ಲರು. ಬಾಂಗ್ಲಾ ಪರ ಶಕಿಬ್ ಅಲ್ ಹಸನ್, ಇಬಾದತ್ ಹುಸೇನ್; ಭಾರತದ ಸರದಿಯಲ್ಲಿ ಮೊಹಮ್ಮದ್ ಸಿರಾಜ್, ಕುಲದೀಪ್ ಸೇನ್, ವಾಷಿಂಗ್ಟನ್ ಸುಂದರ್ ಅವರೆಲ್ಲ ಈ ಪಿಚ್ನ ಭರಪೂರ ಲಾಭವೆತ್ತಿದ್ದಾರೆ. ಬ್ಯಾಟಿಂಗ್ ಮಾತ್ರ ಬಹಳ ಕಷ್ಟವಾಗಿತ್ತು.
ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದ ಭಾರತಕ್ಕೆ ಗಳಿಸಲು ಸಾಧ್ಯವಾದದ್ದು 186 ರನ್ ಮಾತ್ರ. 41.2 ಓವರ್ಗಳಲ್ಲಿ ಪ್ರವಾಸಿಗರ ಆಟ ಮುಗಿದಿತ್ತು. ಒಟ್ಟಾರೆಯಾಗಿ ಇದರಲ್ಲಿ 25 ಓವರ್ಗಳಷ್ಟು ಡಾಟ್ ಬಾಲ್ಗಳಿದ್ದವು! ಎಚ್ಚರಿಕೆಯಿಂದ ಅಥವಾ ಮೈಚಳಿ ಬಿಟ್ಟು ಆಡಿದರೆ ಢಾಕಾ ಟ್ರ್ಯಾಕ್ನಲ್ಲಿ ರನ್ ಗಳಿಸಬಹುದು ಎಂಬುದಕ್ಕೆ ಕೆ.ಎಲ್. ರಾಹುಲ್ ಮತ್ತು ಮೆಹಿದಿ ಹಸನ್ ಮಿರಾಜ್ ಅವರೇ ಸಾಕ್ಷಿಯಾದರು. ಹೀಗಾಗಿ ನಮ್ಮ ಬ್ಯಾಟಿಂಗ್ ದಿಗ್ಗಜರಾದ ರೋಹಿತ್, ಧವನ್, ಕೊಹ್ಲಿ, ಅಯ್ಯರ್ ಅವರೆಲ್ಲ ದೊಡ್ಡ ಮೊತ್ತಕ್ಕೆ ಪ್ರಯತ್ನಿಸಬೇಕಿದೆ.
ಆದರೂ ಬೌಲಿಂಗ್ ಮೂಲಕ ನಮ್ಮವರು ತಿರುಗಿ ಬಿದ್ದ ರೀತಿ ಅಮೋಘ. ಕೊನೆಯ ವಿಕೆಟಿಗೆ ಮೆಹಿದಿ ಹಸನ್ ಮಿರಾಜ್ ಮತ್ತು ಮುಸ್ತಫಿಜುರ್ ರೆಹಮಾನ್ ಕ್ರೀಸ್ ಆಕ್ರಮಿಸಿಕೊಳ್ಳುವುದರೊಂದಿಗೆ . ಬಾಂಗ್ಲಾ ಅಚ್ಚರಿಯ ಗೆಲುವು ಸಾಧಿ ಸಿತು. ಭಾರತದ ಈ ಸೋಲಿನಲ್ಲಿ ಬೌಲರ್ಗಳ ಪಾತ್ರವೇನೂ ಇರಲಿಲ್ಲ. ಕ್ಯಾಚ್ ಜಾರಿದ್ದರಿಂದ ಮ್ಯಾಚ್ ಕೂಡ ಜಾರಿತು, ಅಷ್ಟೇ!
ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಭಾರತ ತನ್ನ ಕ್ಷೇತ್ರರಕ್ಷಣೆಯನ್ನು ಬಲಗೊಳಿಸಿಕೊಳ್ಳಬೇಕು. ವೃತ್ತಿಪರ ಕ್ರಿಕೆಟಿಗರೇ ಸುಲಭದ ಕ್ಯಾಚ್ಗಳನ್ನು ಬಿಟ್ಟು ತಂಡ ಸೋಲುವಂತಾದರೆ ಅದು ಖಂಡಿತ ಅಕ್ಷಮ್ಯ. ಇಂಥ ತಪ್ಪು ಮರುಕಳಿಸಬಾರದು; ಹೊಸ ತಪ್ಪು ಕೂಡ ಕಾಣಿಸಿಕೊಳ್ಳಬಾರದು. ಹಾಗೆಯೇ ಬಾಂಗ್ಲಾದೇಶದಲ್ಲಿ ಇತಿಹಾಸ ಪುನರಾವರ್ತನೆ ಆಗಬಾರದು.
ಭಾರತ ಕೊನೆಯ ಸಲ 2015ರಲ್ಲಿ ಧೋನಿ ಸಾರಥ್ಯದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ ಏಕದಿನ ಸರಣಿಯನ್ನು 1-2ರಿಂದ ಕಳೆದುಕೊಂಡಿತ್ತು. ಮೊದಲೆರಡು ಪಂದ್ಯಗಳನ್ನು ಬಾಂಗ್ಲಾ ಗೆದ್ದು ಸರಣಿ ವಶಪಡಿಸಿಕೊಂಡ ಬಳಿಕ ಭಾರತ ಸಮಾಧಾನಕರ ಗೆಲುವು ಸಾಧಿಸಿತ್ತು.
ಬದಲಾವಣೆ ಸಾಧ್ಯತೆ
ದ್ವಿತೀಯ ಪಂದ್ಯಕ್ಕಾಗಿ ಭಾರತದ ಬ್ಯಾಟಿಂಗ್ ಹಾಗೂ ಕೀಪಿಂಗ್ ವಿಭಾಗ ದಲ್ಲಿ ಒಂದಿಷ್ಟು ಬದಲಾವಣೆ ಸಂಭವಿಸ ಬಹುದು. ರಾಹುಲ್ ಅವರನ್ನು ಕೀಪಿಂಗ್ ಆಗಿ ಮುಂದುವರಿಸಬೇಕೇ ಎಂಬುದು ಮುಖ್ಯ ಪ್ರಶ್ನೆ. ಇವರನ್ನು ಮತ್ತೆ ಆರಂಭಿಕನನ್ನಾಗಿ ಇಳಿಸಿ ಇಶಾನ್ ಕಿಶನ್ ಕೈಗೆ ಗ್ಲೌಸ್ ತೊಡಿಸುವ ಸಾಧ್ಯತೆಯೊಂದಿದೆ.
ಮೊದಲ ಪಂದ್ಯಕ್ಕೆ 6 ಮಂದಿ ಬೌಲರ್ ಪ್ಲಸ್ ಆಲ್ರೌಂಡರ್ಗಳನ್ನು ಸೇರಿಸಿಕೊಂಡು ತಂಡವನ್ನು ಕಟ್ಟಲಾಗಿತ್ತು. ಇವರಲ್ಲಿ ಒಬ್ಬರನ್ನು ಕೈಬಿಟ್ಟು ರಜತ್ ಪಾಟೀದಾರ್ ಅಥವಾ ರಾಹುಲ್ ತ್ರಿಪಾಠಿ ಅವರನ್ನು ಆಡಿಸಿದರೆ ಬ್ಯಾಟಿಂಗ್ ವಿಭಾಗ ಇನ್ನಷ್ಟು ಬಲಗೊಳ್ಳುವುದರಲ್ಲಿ ಅನುಮಾನವಿಲ್ಲ.
ಮೊದಲ ಪಂದ್ಯವನ್ನು ರೋಮಾಂಚ ಕಾರಿಯಾಗಿ ಗೆದ್ದ ಬಾಂಗ್ಲಾದೇಶ ಸಹಜ ವಾಗಿಯೇ ಸಂಭ್ರಮದಲ್ಲಿದೆ. ತವರಿನಲ್ಲಿ ತಾನು ಯಾವತ್ತೂ ಅಪಾಯಕಾರಿ ಎಂಬುದನ್ನು ಅದು ಮತ್ತೂಮ್ಮೆ ಸಾಬೀತುಪಡಿಸಿದೆ. ಭಾರತ ಇನ್ನಷ್ಟು ಎಚ್ಚರಿಕೆಯಿಂದ ಆಡಬೇಕಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.