ಭಾರತವನ್ನು ತವರಲ್ಲಿ ಸೋಲಿಸಲೊಂದು ವಿಶ್ವ ಟೆಸ್ಟ್‌ ತಂಡ!


Team Udayavani, Jan 27, 2021, 7:10 AM IST

ಭಾರತವನ್ನು ತವರಲ್ಲಿ ಸೋಲಿಸಲೊಂದು ವಿಶ್ವ ಟೆಸ್ಟ್‌ ತಂಡ!

ಭಾರತ 2012-13ರ ಬಳಿಕ ತವರಿನಲ್ಲಿ ಟೆಸ್ಟ್‌ ಸರಣಿಯನ್ನು ಸೋತದ್ದೇ ಇಲ್ಲ. ಅಂದು ಜಯಿಸಿದ ತಂಡ ಇಂಗ್ಲೆಂಡ್‌. ಅನಂತರ ಸತತ 12 ಸರಣಿಗಳಲ್ಲಿ ಭಾರತ ಪಾರಮ್ಯ ಸಾಧಿಸಿದೆ. ಇದೀಗ ಮತ್ತೆ ಇಂಗ್ಲೆಂಡ್‌ ಆಗಮಿಸಿದೆ. ರೂಟ್‌ ಬಳಗ ಇತಿಹಾಸವನ್ನು ಪುನರಾವರ್ತಿಸೀತೇ? ಇಲ್ಲವಾದರೆ ಭಾರತವನ್ನು ತವರಲ್ಲೇ ಸೋಲಿಸಲು ಯಾರಿಂದ ಸಾಧ್ಯ?

ನಿಮಗೇ ಗೊತ್ತು, ಟೆಸ್ಟ್‌ ಸರಣಿಯಲ್ಲಿ ಭಾರತವನ್ನು ಭಾರತದಲ್ಲೇ ಸೋಲಿಸುವುದು ಪ್ರತಿಯೊಂದು ಪ್ರವಾಸಿ ತಂಡಕ್ಕೂ ಒಂದು ಸವಾಲು. ಕಳೆದ 9 ವರ್ಷಗಳಿಂದಲೂ ಭಾರತ ತನ್ನ ನೆಲದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡು ಬಂದಿರುವುದೊಂದು ಹೆಗ್ಗಳಿಕೆ.

ಕೇವಲ ಸಾಮಾನ್ಯ ತಂಡಗಳ ಎದುರಷ್ಟೇ ಟೀಮ್‌ ಇಂಡಿಯಾ ತನ್ನ ಪರಾಕ್ರಮ ತೋರಿಲ್ಲ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನ‌ಂಥ ಬಲಿಷ್ಠ ತಂಡಗಳಿಗೂ ನೀರು ಕುಡಿಸಿದೆ.

ಭಾರತ ತಂಡ ಕೊನೆಯ ಸಲ ತವರಿನ ಟೆಸ್ಟ್‌ ಸರಣಿಯನ್ನು ಕಳೆದುಕೊಂಡದ್ದು 2012-13ರಲ್ಲಿ, ಇಂಗ್ಲೆಂಡ್‌ ವಿರುದ್ಧ. ಅನಂತರ ಸತತ 12 ಸರಣಿಗಳಲ್ಲಿ ಪಾರಮ್ಯ ಸಾಧಿಸಿದೆ. ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌, ದ.ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ತಲಾ 2; ಕಿವೀಸ್‌, ಇಂಗ್ಲೆಂಡ್‌, ಶ್ರೀಲಂಕಾ ಮತ್ತು ಅಫ್ಘಾನಿ ಸ್ಥಾನ ವಿರುದ್ಧ ತಲಾ ಒಂದು ಸರಣಿ ಗೆದ್ದು ತವರಿನ ಅಜೇಯ ಅಭಿಯಾನ ಮುಂದುವರಿಸಿದೆ. ಈ 12 ಸರಣಿಗಳಲ್ಲಿ ಭಾರತ ಆರರಲ್ಲಿ ಎದುರಾಳಿಗೆ ವೈಟ್‌ವಾಶ್‌ ಮಾಡಿದೆ!

ಜೋ ರೂಟ್‌ ನಾಯಕ : ಭಾರತದ ಎದುರಾಳಿಯಾಗಿ ರಚಿಸಲಾದ ಈ ಕಾಲ್ಪನಿಕ ತಂಡದ ಆರಂಭಿಕರಾಗಿ ಶ್ರೀಲಂಕಾದ ದಿಮುತ್‌ ಕರುಣರತ್ನೆ ಮತ್ತು ನ್ಯೂಜಿಲ್ಯಾಂಡಿನ ಟಾಮ್‌ ಲ್ಯಾಥಂ ಸ್ಥಾನ ಪಡೆದಿದ್ದಾರೆ. ವನ್‌ಡೌನ್‌ನಲ್ಲಿ ಕೇನ್‌ ವಿಲಿಯಮ್ಸನ್‌ ಕ್ರೀಸ್‌ ಇಳಿಯಲಿದ್ದಾರೆ. ಕಾಂಗರೂ ನಾಡಿನ ರನ್‌ ಯಂತ್ರ ಸ್ಟೀವನ್‌ ಸ್ಮಿತ್‌ ಅವರಿಗೆ 4ನೇ ಕ್ರಮಾಂಕ. ಅನಂತರ ಬರುವ ಇಂಗ್ಲೆಂಡಿನ ಜೋ ರೂಟ್‌ಗೆ ನಾಯಕತ್ವ ನೀಡಲಾಗಿದೆ.

ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ಅವರಿಗೆ ಕೀಪಿಂಗ್‌ ಹೊಣೆಗಾರಿಕೆ ಲಭಿಸಿದೆ. ಫಾಸ್ಟ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿ ಬೆನ್‌ ಸ್ಟೋಕ್ಸ್‌ ಇದ್ದಾರೆ. ಪ್ರಧಾನ ವೇಗಿಗಳ ಸ್ಥಾನದಲ್ಲಿ ಆಸೀಸ್‌ನ ಪ್ಯಾಟ್‌ ಕಮಿನ್ಸ್‌, ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ ಕಾಣಿಸಿಕೊಂಡಿದ್ದಾರೆ. ನಥನ್‌ ಲಿಯಾನ್‌ ಮತ್ತು ಪಾಕಿಸ್ಥಾನದ ಯಾಸಿರ್‌ ಶಾ ಸ್ಪಿನ್‌ ವಿಭಾಗದ ಪ್ರಮುಖರು.

ಇವರೆಲ್ಲ ಸೇರಿ ಭಾರತಕ್ಕೆ ಭಾರತದ ನೆಲದಲ್ಲೇ ಟೆಸ್ಟ್‌ ಸರಣಿ ಸೋಲುಣಿಸುವುದಾದರೆ ಒಂದು ಕೈ ನೋಡಿಯೇ ಬಿಡಬಹುದು!

ಇಂಗ್ಲೆಂಡಿಗೊಂದು ಸವಾಲು! :

ಇದೀಗ ಮತ್ತೆ ಇಂಗ್ಲೆಂಡ್‌ ತಂಡ ಭಾರತದಲ್ಲಿ ಟೆಸ್ಟ್‌ ಸರಣಿ ಆಡಲಿದೆ. ಅದು ಶ್ರೀಲಂಕಾಕ್ಕೆ ವೈಟ್‌ವಾಶ್‌ ಮಾಡಿದ ಹುರುಪಿನಲ್ಲಿದೆ. ಇನ್ನೊಂದೆಡೆ ಟೀಮ್‌ ಇಂಡಿಯಾ ಆಸ್ಟ್ರೇಲಿಯಕ್ಕೆ ಸರಣಿ ಸೋಲಿನ ಏಟು ಬಿಗಿದು ಬಂದಿದೆ. ಆಸೀಸ್‌ಗೆ

ಹೋಲಿಸಿದರೆ ಇಂಗ್ಲೆಂಡ್‌ ಹೆಚ್ಚು ಬಲಿಷ್ಠ ತಂಡ. ಶಿಸ್ತು, ಬದ್ಧತೆಯನ್ನು ಆಂಗ್ಲರ ಆಟದಲ್ಲಿ ಕಾಣಬಹುದು. ಅದು 9 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಸರಣಿ ಗೆದ್ದು ಇತಿಹಾಸವನ್ನು ಪುನರಾವರ್ತಿಸೀತೇ? ಇಲ್ಲವಾದರೆ ಭಾರತವನ್ನು ಸೋಲಿಸಲು ಯಾರಿಂದ ಸಾಧ್ಯ? ಇಂಥ ಪ್ರಶ್ನೆಗಳು ವಿಶ್ವದ ಟೆಸ್ಟ್‌ ತಂಡಗಳನ್ನು ಕಾಡುತ್ತಲೇ ಇದೆ.

ಈ ಸಂದರ್ಭದಲ್ಲಿ ಹೊಳೆದ ಒಂದು ಸ್ವಾರಸ್ಯಕರ ಸಂಗತಿ ಇಲ್ಲಿದೆ. ವಿಶ್ವದ ಸಮಕಾಲೀನ ಶ್ರೇಷ್ಠ ಆಟಗಾರರನ್ನು ಒಳಗೊಂಡ ತಂಡವೊಂದರಿಂದ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ ಎಂಬ ಲೆಕ್ಕಾಚಾರ! ಆಗ ಈ ತಂಡದ ಸ್ವರೂಪ ಹೇಗಿದ್ದೀತು, ಈ ತಂಡದಲ್ಲಿ ಯಾರೆಲ್ಲ ಸ್ಥಾನ ಸಂಪಾದಿಸಬಹುದು ಎಂಬ ಕುತೂಹಲ ಮೂಡುವುದು ಖಂಡಿತ. ಹಿಂದೊಮ್ಮೆ ಇಂಥದೇ ತಂಡವನ್ನು ರಚಿಸಲಾಗಿತ್ತು. ಆದರೆ ಇದು ಅದಕ್ಕಿಂತ ಭಿನ್ನವಾದ ವಿಶ್ವ ಟೆಸ್ಟ್‌ ಇಲೆವೆನ್‌.

ವಿಶ್ವ ಟೆಸ್ಟ್‌ ಇಲೆವೆನ್‌ :

ದಿಮುತ್‌ ಕರುಣರತ್ನೆ, ಟಾಮ್‌ ಲ್ಯಾಥಂ, ಕೇನ್‌ ವಿಲಿಯಮ್ಸನ್‌, ಸ್ಟೀವನ್‌ ಸ್ಮಿತ್‌, ಜೋ ರೂಟ್‌ (ನಾಯಕ), ಕ್ವಿಂಟನ್‌ ಡಿ ಕಾಕ್‌, ಬೆನ್‌ ಸ್ಟೋಕ್ಸ್‌, ಪ್ಯಾಟ್‌ ಕಮಿನ್ಸ್‌, ಕಾಗಿಸೊ ರಬಾಡ, ಯಾಸಿರ್‌ ಶಾ ಮತ್ತು ನಥನ್‌ ಲಿಯಾನ್‌.

ಭಾರತ ಕಠಿನ ತಂಡವಾಗಲು ವಿರಾಟ್‌ ಕೊಹ್ಲಿ ಪಾತ್ರ ಮಹತ್ವದ್ದಾಗಿದೆ. ತವರು ನೆಲದಲ್ಲಿ ಅವರು ಯಾವುದೇ ತಪ್ಪು ಮಾಡುವುದಿಲ್ಲ. ಹಾಗಾಗಿ ಭಾರತ ಅವರದೇ ನೆಲದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ನಾಸಿರ್‌ ಹುಸೆನ್‌.  ಮಾಜಿ ಆಟಗಾರ

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.