Paralympics 2024; ಪ್ಯಾರಾ ಸಾಧಕರಿಗೆ ಪ್ರೀತಿಯ ಸ್ವಾಗತ; ಚಿನ್ನ ಗೆದ್ದವರಿಗೆ 75 ಲಕ್ಷ ರೂ.


Team Udayavani, Sep 11, 2024, 5:47 AM IST

Paralympics 2024; ಪ್ಯಾರಾ ಸಾಧಕರಿಗೆ ಪ್ರೀತಿಯ ಸ್ವಾಗತ; ಚಿನ್ನ ಗೆದ್ದವರಿಗೆ 75 ಲಕ್ಷ ರೂ.

ಹೊಸದಿಲ್ಲಿ: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ಸಂಖ್ಯೆಯ 29 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಹೆಮ್ಮೆಯ ಪ್ಯಾರಾತ್ಲೀಟ್‌ಗಳು ಮಂಗಳವಾರ ತವರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಹೊಸದಿಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರೀತಿಪೂರ್ವಕ ಸ್ವಾಗತ ಕೋರಲಾಯಿತು. ಇದೇ ವೇಳೆ ಪ್ಯಾರಾಲಿಂಪಿಕ್ಸ್‌ ಪದಕವೀರರಿಗೆ ಕೇಂದ್ರ ಕ್ರೀಡಾ ಸಚಿವರು ನಗದು ಬಹುಮಾನ ಘೋಷಿಸಿದರು.

ನೂರಾರು ಕ್ರೀಡಾಭಿಮಾನಿಗಳು, ನಿಲ್ದಾಣದ ಅಧಿಕಾರಿಗಳು, ಸಾಧಕರ ಕುಟುಂಬದ ಸದಸ್ಯರೆಲ್ಲ ಸೇರಿಕೊಂಡು ಕ್ರೀಡಾಪಟುಗಳನ್ನು ಹೃತೂ³ರ್ವಕವಾಗಿ ಬರಮಾಡಿಕೊಂಡರು. ಹೂವಿನ ಹಾರ ಹಾಕಿ, ಸಿಹಿ ತಿಂಡಿ ಹಂಚಿ ಸಂಭ್ರಮಿ ಸಿದರು. ಧೋಲ್‌ ಹಾಗೂ ವಾದ್ಯ ಕೂಡ ಈ ಸ್ವಾಗತದ ಸಂಭ್ರಮವನ್ನು ಹೆಚ್ಚಿಸಿತು.

ಮೊದಲು ಚಹಾ ಕುಡಿಯಬೇಕು!

“ಇಂಥದೊಂದು ಭವ್ಯ ಸ್ವಾಗತಕ್ಕೆ ಧನ್ಯವಾದಗಳು’ ಎಂಬುದಾಗಿ ಜಾವೆ ಲಿನ್‌ನಲ್ಲಿ ಸತತ 2 ಚಿನ್ನ ಗೆದ್ದ ಸುಮಿತ್‌ ಅಂತಿಲ್‌ ಹೇಳಿದರು.

“ನೀವು ಉತ್ತಮ ಸಿದ್ಧತೆಯೊಂದಿಗೆ ತೆರಳಿದಾಗ ಸಹಜವಾಗಿಯೇ ಆತ್ಮ ವಿಶ್ವಾಸ ಮೂಡುತ್ತದೆ. ಶೀಘ್ರದಲ್ಲೇ 75 ಮೀ. ಗುರಿ ತಲುಪಲು ಪ್ರಯ ತ್ನಿಸುತ್ತೇನೆ. ಕಳೆದ ಕೆಲವು ದಿನಗ ಳಿಂದ ನಾನು ಚಹಾ ಕುಡಿದಿಲ್ಲ. ಕುಟುಂಬ ದವರೊಂದಿಗೆ ಸೇರಿ ಚಹಾ ಕುಡಿಯುವ ಕಾತರದಲ್ಲಿದ್ದೇನೆ’ ಎಂದರು.

ಪ್ಯಾರಾ ಕ್ರೀಡಾಳುಗಳೇ ಸ್ಫೂರ್ತಿ

ಪ್ಯಾರಾಲಿಂಪಿಕ್ಸ್‌ ಆರ್ಚರಿಯಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕ ತಂದಿತ್ತ ಹರ್ವಿಂದರ್‌ ಸಿಂಗ್‌ ಕೂಡ ಈ ಸ್ವಾಗತ ಕಂಡು ಬೆರಗಾಗಿದ್ದರು. “ನಾನು ಯಾವಾಗಲೂ ಬ್ಯುಸಿ ಆಗಿರಲು ಬಯಸುತ್ತೇನೆ. ಸಂಕಷ್ಟದಲ್ಲಿರುವವರು ಅಥವಾ ಬದುಕಿನಲ್ಲಿ ಸೋಲುಂಡವರು, ಯಾರೇ ಆಗಿರಲಿ, ನಮ್ಮಂಥ ಪ್ಯಾರಾ ಆ್ಯತ್ಲೀಟ್‌ಗಳಿಂದ ಸ್ಫೂರ್ತಿ ಪಡೆಯ ಬಹುದು’ ಎಂದರು. ಆರ್ಮ್ಲೆಸ್‌ ವಂಡರ್‌ ಖ್ಯಾತಿಯ ಶೀತಲ್‌ದೇವಿ ಕೂಡ ಜತೆಯಲ್ಲಿದ್ದರು. ಅಭಿಮಾನಿಗಳು ಇವರ ಮೇಲೆ ಹೂವು ಸುರಿಸಿ ಹರ್ಷ ವ್ಯಕ್ತಪಡಿಸಿದರು.

“ನನ್ನ ಪಾಲಿಗೆ ಇದೊಂದು ಶ್ರೇಷ್ಠ ಅನುಭವ. ಆರ್ಚರಿಯಲ್ಲಿ ಭಾರತಕ್ಕೆ 2 ಪದಕ ಬಂದುದಕ್ಕೆ ಬಹಳ ಖುಷಿಯಾಗಿದೆ. ನಮಗೆ ಅತ್ಯುತ್ತಮ ಬೆಂಬಲ ಲಭಿಸಿದ್ದರಿಂದಲೇ ಇಷ್ಟೊಂದು ಪದಕಗಳು ಒಲಿದವು’ ಎಂದು ಶೀತಲ್‌ದೇವಿ ಅಭಿಪ್ರಾಯಪಟ್ಟರು.

ಜಾವೆಲಿನ್‌ ಎಫ್41 ವಿಭಾಗದಲ್ಲಿ ಚಿನ್ನ ಜಯಿಸಿದ ಕುಬj ಸಾಹಸಿ ನವದೀಪ್‌ ಸಿಂಗ್‌ ಅವರನ್ನು ಅಭಿಮಾನಿಗಳು ಎತ್ತಿ ಹಿಡಿದು ಸಂಭ್ರಮಿಸಿದರು.

ಚಿನ್ನ ಗೆದ್ದವರಿಗೆ 75 ಲಕ್ಷ ರೂ.

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ಅವರು ಮಂಗಳವಾರ ಬಹುಮಾನದ ಚೆಕ್‌ ವಿತರಿಸಿದರು. ಇದರಂತೆ ಚಿನ್ನ ಗೆದ್ದವರಿಗೆ 75 ಲಕ್ಷ ರೂ., ಬೆಳ್ಳಿ ವಿಜೇತರಿಗೆ 50 ಲಕ್ಷ ರೂ. ಹಾಗೂ ಕಂಚು ಜಯಿಸಿದವರಿಗೆ 30 ಲಕ್ಷ ರೂ. ಬಹುಮಾನ ನೀಡಲಾಯಿತು. ಶೀತಲ್‌ದೇವಿ ಅವರಂತೆ ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆದ್ದವರು 22.5 ಲಕ್ಷ ರೂ. ಪಡೆದರು.

ಪ್ಯಾರಾ ಕ್ರೀಡಾಪಟುಗಳನ್ನು ಸಮ್ಮಾನಿಸಿ ಮಾತನಾಡಿದ ಕ್ರೀಡಾ ಸಚಿವರು, “ಭಾರತ ಪ್ಯಾರಾಲಿಂಪಿಕ್ಸ್‌ ಹಾಗೂ ಪ್ಯಾರಾ ಕೂಟಗಳಲ್ಲಿ ಪ್ರಗತಿ ಕಾಣುತ್ತ ಇದೆ. 2016ರಲ್ಲಿ 4 ಪದಕವಿದ್ದದ್ದು, ಟೋಕಿಯೊದಲ್ಲಿ 19ಕ್ಕೆ, ಈಗ 29ಕ್ಕೆ ಏರಿದೆ. 18ನೇ ಸ್ಥಾನ ಪಡೆದಿದ್ದೇವೆ. ಮುಂದಿನ ಲಾಸ್‌ ಏಂಜಲೀಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಇನ್ನೂ ಹೆಚ್ಚಿನ ಪದಕ ಜಯಿಸಬೇಕು. ಇದಕ್ಕಾಗಿ ಸರಕಾರ ಎಲ್ಲ ರೀತಿಯ ಸೌಕರ್ಯ, ಬೆಂಬಲ, ಆರ್ಥಿಕ ನೆರವು ನೀಡಲು ಸಿದ್ಧವಿದೆ’ ಎಂದರು.

ಟಾಪ್ ನ್ಯೂಸ್

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.