INDvsNZ: ಪುಣೆಯಲ್ಲಿ ಸ್ಪಿನ್‌ ಬಲೆಗೆ ಬಿದ್ದ ಭಾರತ; 12 ವರ್ಷಗಳ ಬಳಿಕ ತವರಲ್ಲಿ ಸರಣಿ ಸೋಲು


Team Udayavani, Oct 26, 2024, 3:55 PM IST

INDvsNZ: India trapped by spin in Pune; Series defeat at home after 12 years

ಪುಣೆ: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ದ ತಾನೇ ತೋಡಿದ ಸ್ಪಿನ್‌ ಖೆಡ್ಡಾಗೆ ಬಿದ್ದ ಭಾರತ ತಂಡವು  (Team India) 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್‌ ಸರಣಿ ಸೋತಿದೆ. ಪುಣೆ ಟೆಸ್ಟ್‌ (Pune Test) ಪಂದ್ಯವನ್ನು 114 ರನ್‌ ಅಂತರದಿಂದ ಕಳೆದುಕೊಂಡ ರೋಹಿತ್‌ ಪಡೆಯು ಒಂದು ಪಂದ್ಯ ಬಾಕಿ ಉಳಿದಿರುವಂತೆ ಸರಣಿ ಸೋಲು ಕಂಡಿದೆ.

ಮೊದಲ ಇನ್ನಿಂಗ್ಸ್‌ ನಲ್ಲಿ 103 ರನ್‌ ಮುನ್ನಡೆಯೊಂದಿಗೆ ಬ್ಯಾಟಿಂಗ್‌ ಆರಂಭಿಸಿದ್ದ ನ್ಯೂಜಿಲ್ಯಾಂಡ್‌ ಎರಡನೇ ಇನ್ನಿಂಗ್ಸ್‌ ನಲ್ಲಿ 255 ರನ್‌ ಪೇರಿಸಿತು. ಈ ಮೂಲಕ ಭಾರತಕ್ಕೆ 359 ರನ್‌ ಗುರಿ ನೀಡಿತ್ತು. ಆದರೆ ಮತ್ತೊಮ್ಮೆ ಅಗ್ರ ಕ್ರಮಾಂಕದ ಬ್ಯಾಟರ್‌ ಗಳ ವೈಫಲ್ಯದ ಕಾರಣದಿಂದ ಭಾರತವು 245 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಇದರೊಂದಿಗೆ ಕಿವೀಸ್‌ 114 ರನ್‌ ಅಂತರದಿಂದ ಪಂದ್ಯ ಗೆದ್ದು ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್‌ ಸರಣಿ ಜಯಿಸಿತು.

ಮೊದಲ ಇನ್ನಿಂಗ್ಸ್‌ ನಲ್ಲಿ ಏಳು ವಿಕೆಟ್ ಗಳೊಂದಿಗೆ ಭಾರತವನ್ನು ಕಾಡಿದ್ದ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ಮತ್ತೊಮ್ಮೆ ಭಾರತಕ್ಕೆ ದುಸ್ವಪ್ನವಾದರು. ಮತ್ತೆ ಆರು ವಿಕೆಟ್‌ ಕಿತ್ತು ನ್ಯೂಜಿಲ್ಯಾಂಡ್‌ ಗೆಲುವಿನ ರೂವಾರಿಯಾದರು.

ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಮತ್ತು ಆಲ್‌ ರೌಂಡರ್‌ ರವೀಂದ್ರ ಜಡೇಜಾ ತಕ್ಕಮಟ್ಟಿಗೆ ತಂಡವನ್ನು ಆಧರಿಸಿದರು. ವೇಗವಾಗಿ ಬ್ಯಾಟಿಂಗ್‌ ನಡೆಸಿದ ಜೈಸ್ವಾಲ್‌ 65 ಎಸೆತಗಳಲ್ಲಿ 77 ರನ್‌ ಮಾಡಿದರೆ, ಕೊನೆಯಲ್ಲಿ ಜಡೇಜಾ 42 ರನ್‌ ಗಳಿಸಿದರು. ಉಳಿದಂತೆ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌ ನಿರಾಸೆ ಮೂಡಿಸಿದರು.

ಸತತ 18 ಸರಣಿ ಜಯದ ಓಟ ಅಂತ್ಯ

ಭಾರತ ತವರಲ್ಲಿ ಕೊನೆಯ ಸಲ ಸರಣಿ ಕಳೆದುಕೊಂಡದ್ದು 2012-13ರಲ್ಲಿ, ಇಂಗ್ಲೆಂಡ್‌ ವಿರುದ್ಧ ಸೋತಿತ್ತು. ಅನಂತರ ತವರಿನಲ್ಲಿ ಸತತ 18 ಸರಣಿಗಳಲ್ಲಿ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡು ಬಂದಿದೆ. ಈಗ ಆ ಅಜೇಯ ಓಟ ಅಂತ್ಯವಾಗಿದೆ.

ಕಿವೀಸ್‌ ಗೆ ಚೊಚ್ಚಲ ಟೆಸ್ಟ್‌ ಸರಣಿ ಜಯ

ನ್ಯೂಜಿಲ್ಯಾಂಡ್‌ 1955-56ರಲ್ಲಿ ಭಾರತದಲ್ಲಿ ಆಡಲಾರಂಭಿಸಿದ ಬಳಿಕ ಟೆಸ್ಟ್‌ ಸರಣಿ ಜಯಿಸಿದ್ದಿಲ್ಲ. ಇದೇ ಮೊದಲ ಬಾರಿಗೆ ಸರಣಿ ಜಯಿಸಿದೆ. ವಿಶೇಷವೆಂದರೆ ಇದುವರೆಗೆ ಕಿವೀಸ್‌ ಕೇವಲ 3 ಬಾರಿ ಭಾರತದಲ್ಲಿ ಟೆಸ್ಟ್‌ ಪಂದ್ಯಗಳನ್ನು ಗೆದ್ದುಕೊಂಡಿತ್ತು.

ಟಾಪ್ ನ್ಯೂಸ್

1-aa-teee

Telugu; ಪಾತ್ರದ ಕುರಿತು ಆಕ್ರೋಶ: ನಟನಿಗೆ ಮಹಿಳೆಯಿಂದ ಚಿತ್ರ ಮಂದಿರದಲ್ಲೇ ಹಲ್ಲೆ!!

Anwar M*rder Case: ADGP B.K.Singh started investigation of case 6 years ago

Anwar M*rder Case: 6 ವರ್ಷ ಹಿಂದಿನ ಪ್ರಕರಣದ ತನಿಖೆಗೆ ಇಳಿದ ಎಡಿಜಿಪಿ ಬಿ.ಕೆ.ಸಿಂಗ್

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Polluted Yamuna: ಭಿನ್ನವಾಗಿ ಪ್ರತಿಭಟಿಸಿ ಆಸ್ಪತ್ರೆಗೆ ದಾಖಲಾದ ಬಿಜೆಪಿ ರಾಜ್ಯಾಧ್ಯಕ್ಷ

ಯಮುನಾ ನದಿಯಲ್ಲಿ ಮುಳುಗಿ ಪ್ರತಿಭಟಿಸಲು ಹೋಗಿ ಆಸ್ಪತ್ರೆಗೆ ದಾಖಲಾದ ಬಿಜೆಪಿ ರಾಜ್ಯಾಧ್ಯಕ್ಷ

Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್‌ ಬಿಡುಗಡೆ

Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್‌ ಬಿಡುಗಡೆ

Belekeri port scam:

Belekeri scam: ಶಾಸಕ ಸತೀಶ್‌ ಸೈಲ್‌ ಗೆ ಭಾರಿ ಜೈಲು ಶಿಕ್ಷೆ ಪ್ರಕಟ; ಶಾಸಕ ಸ್ಥಾನ ರದ್ದು?

INDvsNZ: India trapped by spin in Pune; Series defeat at home after 12 years

INDvsNZ: ಪುಣೆಯಲ್ಲಿ ಸ್ಪಿನ್‌ ಬಲೆಗೆ ಬಿದ್ದ ಭಾರತ; 12 ವರ್ಷಗಳ ಬಳಿಕ ತವರಲ್ಲಿ ಸರಣಿ ಸೋಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

Hardik Pandya

Hardik Pandya: ಶೀಘ್ರ ದೊಡ್ಡ ವಿಷಯ ಪ್ರಕಟ: ಹಾರ್ದಿಕ್‌ ಪೋಸ್ಟ್‌ ಕುತೂಹಲ

ಮುಂದಿನ ಸೀಸನ್ ಐಪಿಎಲ್‌ ಆಡುತ್ತಾರಾ..? ದೊಡ್ಡ ಸುಳಿವು ನೀಡಿದ ಧೋನಿ

IPL 2025: ಮುಂದಿನ ಐಪಿಎಲ್‌ ಸೀಸನ್ ಆಡುತ್ತಾರಾ..? ದೊಡ್ಡ ಸುಳಿವು ನೀಡಿದ ಧೋನಿ

INDvsNZ: ಭಾರತಕ್ಕೆ ಬೃಹತ್‌ ಗುರಿ ನೀಡಿದ ಕಿವೀಸ್; ಸ್ಪಿನ್‌ ಜಾಲದಲ್ಲಿ ಗೆಲ್ಲುತ್ತಾ ಭಾರತ

INDvsNZ: ಭಾರತಕ್ಕೆ ಬೃಹತ್‌ ಗುರಿ ನೀಡಿದ ಕಿವೀಸ್; ಸ್ಪಿನ್‌ ಜಾಲದಲ್ಲಿ ಗೆಲ್ಲುತ್ತಾ ಭಾರತ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

1-aa-teee

Telugu; ಪಾತ್ರದ ಕುರಿತು ಆಕ್ರೋಶ: ನಟನಿಗೆ ಮಹಿಳೆಯಿಂದ ಚಿತ್ರ ಮಂದಿರದಲ್ಲೇ ಹಲ್ಲೆ!!

Anwar M*rder Case: ADGP B.K.Singh started investigation of case 6 years ago

Anwar M*rder Case: 6 ವರ್ಷ ಹಿಂದಿನ ಪ್ರಕರಣದ ತನಿಖೆಗೆ ಇಳಿದ ಎಡಿಜಿಪಿ ಬಿ.ಕೆ.ಸಿಂಗ್

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Shiggaon Bypoll; ಯಾಸೀರ್‌ ಖಾನ್‌-ಖಾದ್ರಿ ನಡುವೆ ವೈಮನಸ್ಸು ಶುರುವಾಗಿದ್ದು ಏಕೆ?

Shiggaon Bypoll; ಯಾಸೀರ್‌ ಖಾನ್‌-ಖಾದ್ರಿ ನಡುವೆ ವೈಮನಸ್ಸು ಶುರುವಾಗಿದ್ದು ಏಕೆ?

ಯುದ್ಧ ಪರಿಕರ ಬಳಸಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ: ಖ್ಯಾತ ವಿದ್ವಾಂಸ ಬಾಳಣ್ಣ

ಯುದ್ಧ ಪರಿಕರ ಬಳಸಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ: ಖ್ಯಾತ ವಿದ್ವಾಂಸ ಬಾಳಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.