![SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್](https://www.udayavani.com/wp-content/uploads/2024/07/11-2-415x249.jpg)
INDWvsSAW; ಇಂದು ದ್ವಿತೀಯ ಏಕದಿನ: ಸರಣಿ ಗೆಲುವಿಗೆ ವನಿತೆಯರ ಸ್ಕೆಚ್
Team Udayavani, Jun 19, 2024, 6:30 AM IST
![INDWvsSAW; ಇಂದು ದ್ವಿತೀಯ ಏಕದಿನ: ಸರಣಿ ಗೆಲುವಿಗೆ ವನಿತೆಯರ ಸ್ಕೆಚ್](https://www.udayavani.com/wp-content/uploads/2024/06/nd-w-620x342.jpg)
ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ಎದು ರಿನ ಮೊದಲ ಪಂದ್ಯವನ್ನು ಅಧಿ ಕಾರಯು ತವಾಗಿ ಗೆದ್ದಿರುವ ಭಾರತದ ವನಿತೆಯರೀಗ ಸರಣಿ ವಶಪಡಿಸಿಕೊಳ್ಳಲು ಸ್ಕೆಚ್ ಹಾಕಿ ದ್ದಾರೆ. ಬುಧವಾರ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ದ್ವಿತೀಯ ಮುಖಾಮುಖೀ ಏರ್ಪ ಡಲಿದ್ದು, ಇದನ್ನು ಗೆದ್ದರೆ ಹರ್ಮನ್ಪ್ರೀತ್ ಕೌರ್ ಬಳಗ ಇನ್ನಷ್ಟು ಎತ್ತರ ತಲುಪಲಿದೆ.
ಮೊದಲ ಪಂದ್ಯದಲ್ಲಿ ಭಾರತದ ಗೆಲುವಿನ ಅಂತರ ಬರೋಬ್ಬರಿ 143 ರನ್. ಆದರೂ ಬ್ಯಾಟಿಂಗ್ ಸರದಿಯಲ್ಲಿ ಸಮಸ್ಯೆ ಇದೆ. ಇಲ್ಲಿ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಏಕಾಂಗಿ ಯಾಗಿ ಹೋರಾಡಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಮಂಧನಾ ಗಳಿಕೆ 117 ರನ್. ದಕ್ಷಿಣ ಆಫ್ರಿಕಾ ಮಂಧನಾ ಸ್ಕೋರ್ಗಿಂತ ಕೇವಲ 5 ರನ್ ಹೆಚ್ಚು ಗಳಿಸಿ ಶರಣಾಗಿತ್ತು. ಎರಡೂ ವಿಭಾಗಗಳಲ್ಲಿ ಲಾರಾ ವೋಲ್ವಾರ್ಟ್ ಬಳಗ ವೈಫಲ್ಯ ಅನುಭವಿಸಿದ ಕಾರಣ ಒತ್ತಡ ಹೆಚ್ಚಿದೆ.
ಮಿಂಚಿದ ಮಂಧನಾ
ಸ್ಮತಿ ಮಂಧನಾ 47ನೇ ಓವರ್ ತನಕ ಕ್ರೀಸ್ ಆಕ್ರಮಿಸಿ ಕೊಳ್ಳದೆ ಹೋಗಿದ್ದರೆ ಭಾರತಕ್ಕೆ ದೊಡ್ಡ ಮೊತ್ತ ಸಾಧ್ಯವಿರಲಿಲ್ಲ. ಶಫಾಲಿ ವರ್ಮ, ಡಿ. ಹೇಮಲತಾ, ಹರ್ಮನ್ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್- ಈ ಐವರು ಸ್ಟಾರ್ ಆಟಗಾರ್ತಿಯರಿಂದ 50 ರನ್ ಕೂಡ ಸಂದಾಯವಾಗಲಿಲ್ಲ. ದ್ವಿತೀಯ ಪಂದ್ಯದಲ್ಲಿ ಇವರೆಲ್ಲ ಕ್ರೀಸ್ ಆಕ್ರಮಿಸಿಕೊಳ್ಳುವುದು ಅಗತ್ಯ.
ಶಫಾಲಿ ವರ್ಮ ತೀವ್ರ ರನ್ ಬರಗಾಲದಲ್ಲಿದ್ದಾರೆ. ಇವರ ಕೊನೆಯ ಏಕದಿನ ಅರ್ಧ ಶತಕ ದಾಖಲಾದದ್ದು 2022ರಲ್ಲಿ. ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ ಅಜೇಯ 71 ರನ್ ಹೊಡೆದ ಬಳಿಕ ಎರಡಂಕೆಯ ಗಡಿ ತಲುಪಿಲ್ಲ. ಕೊನೆಯ 6 ಪಂದ್ಯಗಳಲ್ಲಿ ಶಫಲಿ ಗಳಿಕೆ ಹೀಗಿದೆ: 1, 8, 0, 4, 1 ಮತ್ತು 7 ರನ್.
ಹರ್ಮನ್ಪ್ರೀತ್ ಕೌರ್ ಕೂಡ ನಾಯಕಿಯ ಆಟ ಆಡುತ್ತಿಲ್ಲ. ಕಳೆ 5 ಪಂದ್ಯಗಳಲ್ಲಿ ಇವರು ಹತ್ತರ ಗಡಿ ದಾಟಿದ್ದು 2 ಸಲ ಮಾತ್ರ.
ಪೂಜಾ ವಸ್ತ್ರಾಕರ್ ಅನುಮಾನ
ಬೆನ್ನುನೋವಿನಿಂದಾಗಿ ಬಾಂಗ್ಲಾದೇಶ ಎದುರಿನ ಟಿ20 ಸರಣಿಯಿಂದ ಹೊರಗುಳಿದಿದ್ದ ಜೆಮಿಮಾ ರೋಡ್ರಿಗಸ್ ಮೊದಲ ಪಂದ್ಯದಲ್ಲಿ ಪರಿಣಾಮ ಬೀರಿಲ್ಲ. ಕೀಪರ್ ರಿಚಾ ಘೋಷ್ 3 ರನ್ನಿಗೆ ಆಟ ಮುಗಿಸಿದ್ದರು. ಕೊನೆಯಲ್ಲಿ ಮಂಧನಾಗೆ ಬೆಂಬಲ ನೀಡಿದ್ದು ಆಲ್ರೌಂಡರ್ಗಳಾದ ದೀಪ್ತಿ ಶರ್ಮ ಮತ್ತು ಪೂಜಾ ವಸ್ತ್ರಾಕರ್ ಎಂಬುದನ್ನು ಮರೆಯುವಂತಿಲ್ಲ. ಸದ್ಯ ಪೂಜಾ ಫಿಟ್ನೆಸ್ ಸಮಸ್ಯೆಯಲ್ಲಿದ್ದಾರೆ. ಬುಧವಾರ ಆಡದೇ ಹೋದರೆ ಅರುಂಧತಿ ರೆಡ್ಡಿ ಅವಕಾಶ ಪಡೆಯಲಿದ್ದಾರೆ.
ಸ್ಪಿನ್ ತ್ರಿವಳಿಗಳ ದಾಳಿ
ಭಾರತದ ಬೌಲಿಂಗ್ ಘಾತಕವಾಗಿತ್ತು. ಆಶಾ ಶೋಭನಾ (21ಕ್ಕೆ 4) ಭರ್ಜರಿ ಪದಾರ್ಪಣೆ ಮಾಡಿದ್ದರು. ಮತ್ತಿಬ್ಬರು ಸ್ಪಿನ್ನರ್ಗಳಾದ ದೀಪ್ತಿ, ರಾಧಾ ಯಾದವ್ ಪಾತ್ರವೂ ದೊಡ್ಡದಿತ್ತು.
ಟಾಪ್ ನ್ಯೂಸ್
![SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್](https://www.udayavani.com/wp-content/uploads/2024/07/11-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-asddasdsa](https://www.udayavani.com/wp-content/uploads/2024/07/1-asddasdsa-1-150x100.jpg)
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
![Barbados](https://www.udayavani.com/wp-content/uploads/2024/07/huricanbe-150x83.jpg)
Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?
![India will play 34 matches till 2026 T20 World Cup](https://www.udayavani.com/wp-content/uploads/2024/07/t20-150x83.jpg)
T20 Cricket; 2026ರ ಟಿ20 ವಿಶ್ವಕಪ್ ತನಕ ಭಾರತ ಆಡಲಿದೆ 34 ಪಂದ್ಯ
![david miller gave clarification on his retirement news](https://www.udayavani.com/wp-content/uploads/2024/07/miller-150x83.jpg)
South Africa; ಟಿ20ಯಿಂದ ನಿವೃತ್ತಿ? ಸ್ಪಷ್ಟನೆ ನೀಡಿದ ಡೇವಿಡ್ ಮಿಲ್ಲರ್
![T20 WC; The emotion of the moment is the reason for eating the pitch sand: Rohit](https://www.udayavani.com/wp-content/uploads/2024/07/roi-150x83.jpg)
T20 WC; ಪಿಚ್ ಮಣ್ಣು ತಿನ್ನಲು ಆ ಕ್ಷಣದ ಭಾವನೆಗಳೇ ಕಾರಣ: ರೋಹಿತ್
MUST WATCH
ಹೊಸ ಸೇರ್ಪಡೆ
![SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್](https://www.udayavani.com/wp-content/uploads/2024/07/11-2-150x90.jpg)
SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್
![1-mangaluru](https://www.udayavani.com/wp-content/uploads/2024/07/1-mangaluru-150x97.jpg)
Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು
![10](https://www.udayavani.com/wp-content/uploads/2024/07/10-2-150x90.jpg)
ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು
![Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ](https://www.udayavani.com/wp-content/uploads/2024/07/Modi-4-150x92.jpg)
Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ
![1-honnavara](https://www.udayavani.com/wp-content/uploads/2024/07/1-honnavara-150x90.jpg)
Honnavara: ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.