ತಂದೆಯ ತ್ಯಾಗದ ಫ‌ಲ; ಟ್ರೀಸಾ ಈಗ ಜಾಲಿ: ಮಗಳ ಸಾಧನೆಗಾಗಿ ಶಿಕ್ಷಣ ವೃತ್ತಿ ತೊರೆದ ತಂದೆ


Team Udayavani, Aug 12, 2022, 7:30 AM IST

ತಂದೆಯ ತ್ಯಾಗದ ಫ‌ಲ; ಟ್ರೀಸಾ ಈಗ ಜಾಲಿ: ಮಗಳ ಸಾಧನೆಗಾಗಿ ಶಿಕ್ಷಣ ವೃತ್ತಿ ತೊರೆದ ತಂದೆ

ಕಣ್ಣೂರು: ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತೀಯರು ಅಮೋಘ ನಿರ್ವಹಣೆ ನೀಡಿರುವುದು ಈಗ ಇತಿಹಾಸ. ಪಿ.ವಿ. ಸಿಂಧು, ಲಕ್ಷ್ಯ ಸೇನ್‌ ಚಿನ್ನ ಗೆದ್ದು ಸಂಭ್ರಮಿಸಿದರೆ ಇನ್ನೂ ಖ್ಯಾತಿಗೆ ಬರದ ಕೇರಳದ ತಾರೆ ಟ್ರೀಸಾ ಜಾಲಿ ಡಬಲ್ಸ್‌ ಮತ್ತು ಮಿಕ್ಸೆಡ್‌ ತಂಡ ವಿಭಾಗದಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಆದರೆ ಜಾಲಿ ಅವರ ಹಾದಿ “ಜಾಲಿ’ಯಿಂದೇನೂ ಕೂಡಿರಲಿಲ್ಲ.

ತಂದೆಯೇ ಮೊದಲ ಗುರು :

ಟ್ರೀಸಾ ಅವರ ಬ್ಯಾಡ್ಮಿಂಟನ್‌ ಪ್ರಯಾಣ ಕಣ್ಣೂರಿನ ಪುಲಿಂಗೋಮ್‌ ಎಂಬ ಹಳ್ಳಿಯೊಂದರ ಮನೆಯ ಅಂಗಳದಿಂದ ಪ್ರಾರಂಭಗೊಳ್ಳುತ್ತದೆ. ಅಲ್ಲಿ ಅವರಿಗೆ ತಂದೆ ಜಾಲಿ ಮ್ಯಾಥ್ಯೂ ಅವರೇ ಮೊದಲ ತರಬೇತುದಾರ ಹಾಗೂ ಗುರು ಆಗಿದ್ದರು. ಟ್ರೀಸಾ ಅವರಿಗೆ ತರಬೇತಿ ನೀಡಲು ಮತ್ತು ಮಗಳ ಜತೆ ವಿವಿಧ ಕೂಟಗಳಿಗೆ ಪ್ರಯಾಣಿಸುವ ಉದ್ದೇಶದಿಂದ ಅವರು ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿಯನ್ನೂ ತೊರೆದರು.

11 ವರ್ಷದೊಳಗಿನ ಜಿಲ್ಲಾ ವಿಭಾಗದಲ್ಲಿ ಟ್ರೀಸಾ ಭಾಗವಹಿಸಲು ಆರಂಭಿಸಿದಾಗ ಅವರ ಗ್ರಾಮದಲ್ಲಿ ಬ್ಯಾಡ್ಮಿಂಟನ್‌ ಕೋರ್ಟ್‌ ಸೇರಿದಂತೆ ಯಾವುದೇ ಸೌಲಭ್ಯ ಇರಲಿಲ್ಲ. ಮುಂದಿನ ಕೆಲವು ವರ್ಷಗಳಲ್ಲಿ ಅವರು ರಾಜ್ಯ ಮತ್ತು ರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆದ್ದರು. ಆದರೆ ಪ್ರಮುಖ ಕೂಟಗಳಲ್ಲಿ ಗೆಲ್ಲಲು, ಅಭ್ಯಾಸ ಮಾಡಲು ಆಕೆಗೆ ಅಧುನಿಕ ಸೌಲಭ್ಯ ಬೇಕಾಗಿತ್ತು.

“ಬ್ಯಾಡ್ಮಿಂಟನ್‌ ದುಬಾರಿ ಕ್ರೀಡೆಯಾಗಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಟ್ರೀಸಾ ಕ್ರೀಡಾಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಅವರ ಶಿಕ್ಷಕರು ಬಹಳಷ್ಟು ನೆರವು ನೀಡಿದರು. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಜಾಲಿ ಮ್ಯಾಥ್ಯೂ.

ಅಂಗಳದಲ್ಲಿಯೇ ಕೋರ್ಟ್‌ :

“ಮಗಳ ಅಭ್ಯಾಸಕ್ಕಾಗಿ ನಮ್ಮ ಮನೆಯ ಅಂಗಳದಲ್ಲಿ ಒಳಾಂಗಣ ಕೋರ್ಟ್‌ ನಿರ್ಮಿಸಲು ನಿರ್ಧರಿಸಿದೆವು. ಆರ್ಥಿಕ ಸಮಸ್ಯೆ ಎದುರಾದಾಗ ಮನೆಯಲ್ಲಿದ್ದ ಚಿನ್ನ ಮಾರಿದೆ. ಸ್ನೇಹಿತರ ಬಳಿ ಸಾಲ ಮಾಡಿ ಕೋರ್ಟ್‌ ನಿರ್ಮಿಸಿದೆ. ಇದು ಅವರ ಅಭ್ಯಾಸಕ್ಕೆ ಹೆಚ್ಚಿನ ಬಲ ನೀಡಿತು. ಈ ವೇಳೆ ಆಕೆಗೆ ಯಾವುದೇ ಪ್ರಾಯೋಜಕರು ಕೂಡ ಇರಲಿಲ್ಲ’ ಎಂದು ಮ್ಯಾಥ್ಯೂ ಹೇಳಿದರು.

“ಅವಳ ಆಟದ ಪ್ರಗತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದೇನೆ. ಇದರ ಜತೆ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಅನಿಲ್‌ ರಾಮಚಂದ್ರನ್‌ ಅವರ ಪ್ರೋತ್ಸಾಹದಿಂದ ಆಕೆಯ ಆಟದಲ್ಲಿ ಬಹಳಷ್ಟು ಪ್ರಗತಿ ಕಾಣುವಂತಾಯಿತು. ಅವರು ಉಚಿತವಾಗಿಯೇ ತರಬೇತಿ ಮತ್ತು ಸೌಲಭ್ಯಗಳನ್ನು ನೀಡಿದರು’ ಎಂದರು.

ಟ್ರೀಸಾ ಅವರ ತಾಯಿ ಡೈಸಿ ಜೋಸೆಫ್ ಅಧ್ಯಾಪಕಿಯಾಗಿದ್ದಾರೆ. ಓರ್ವ ಸಹೋದರಿಯೂ ಇದ್ದಾರೆ.

ಎರಡು ವರ್ಷಗಳ ಹಿಂದೆ ಟ್ರೀಸಾ ಜಾಲಿ ಹೈದರಾಬಾದ್‌ನ “ಪುಲ್ಲೇಲ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿ’ ಸೇರಿಕೊಂಡರು.ಅಲ್ಲಿ ತಮ್ಮ ಆಟವನ್ನು ಸಿಂಗಲ್ಸ್‌ ಮತ್ತು ಡಬಲ್ಸ್‌ಗೆ ಬದಲಾಯಿಸಿಕೊಂಡರು. ಇದೀಗ ಗೇಮ್ಸ್‌ ಸಾಧನೆಯಿಂದಾಗಿ ಟ್ರೀಸಾ ಮೇಲೆ ಹೆಚ್ಚಿನ ಭರವಸೆ ಮೂಡಿದೆ.

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.