ಮುಂಬೈ ಮುಂದೆ ಉಳಿವಿನ ಚಿಂತೆ


Team Udayavani, May 4, 2018, 6:00 AM IST

s-53.jpg

ಇಂದೋರ್‌: ತೀವ್ರ ಸಂಕಟದಲ್ಲಿರುವ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಶುಕ್ರವಾರ ರಾತ್ರಿ ತನ್ನ ಮುಂದಿನ ಹಾದಿ ಏನು, ಎತ್ತ ಎಂಬುದನ್ನು ಬಹುತೇಕ ಅಂತಿಮಗೊಳಿಸಲಿದೆ. ಗೆದ್ದರೆ ಅದು ಈ ಐಪಿಎಲ್‌ನಲ್ಲಿ ಸ್ವಲ್ಪ ದೂರ ಮುಂದುವರಿಯಬಹುದು; ಸೋತರೆ ಕೂಟದಿಂದ ನಿರ್ಗಮಿಸುವ ಮೊದಲ ತಂಡ ಎಂಬ ಮುನ್ಸೂಚನೆಯೊಂದನ್ನು ರವಾನಿಸಲಿದೆ!

ಅಂದಹಾಗೆ ಶುಕ್ರವಾರ ರೋಹಿತ್‌ ಪಡೆ ತೃತೀಯ ಸ್ಥಾನಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಹೋರಾಡಲಿದೆ. ಇದು ಪಂಜಾಬ್‌ನ 2ನೇ ತವರಾದ ಇಂದೋರ್‌ನಲ್ಲಿ ನಡೆಯುವ ಪ್ರಸಕ್ತ ಋತುವಿನ ಮೊದಲ ಪಂದ್ಯ. ಪಂಜಾಬ್‌-ಮುಂಬೈ ನಡುವಿನ ಮೊದಲ ಲೀಗ್‌ ಪಂದ್ಯವೂ ಹೌದು.

ಪ್ಲೇ-ಆಫ್ ಪ್ರವೇಶಿಸಿದರೆ ಪವಾಡ!
3 ಬಾರಿಯ ಐಪಿಎಲ್‌ ಚಾಂಪಿಯನ್‌ ಎಂಬ ಖ್ಯಾತಿಯ ಮುಂಬೈ ಇಂಡಿಯನ್ಸ್‌ ಈ ಬಾರಿ ಏಕೋ ಬಹಳ ಮಂಕಾಗಿದೆ. ಆಡಿದ 8 ಪಂದ್ಯಗಳಲ್ಲಿ ಕೇವಲ ಎರಡನ್ನಷ್ಟೇ ಗೆದ್ದು ಅಂತಿಮ ಸ್ಥಾನಕ್ಕೆ ಕುಸಿದಿದೆ. ಪ್ಲೇ-ಆಫ್ ತಲುಪಬೇಕಾದರೆ ಕನಿಷ್ಠ 7 ಗೆಲುವು (14 ಅಂಕ) ಅಗತ್ಯ ಎಂಬುದೊಂದು ಲೆಕ್ಕಾಚಾರ. ಮುಂಬೈ ಇನ್ನೂ 6 ಪಂದ್ಯಗಳನ್ನು ಆಡಬೇಕಿರುವುದರಿಂದ ಈ ಗುರಿ ತಲುಪಲು ಸಾಧ್ಯವಿದೆ. ಆದರೆ ಈಗಿನ ತೀವ್ರ ಒತ್ತಡದ ಸ್ಥಿತಿಯಲ್ಲಿ ಸತತ ಗೆಲುವನ್ನು ಕಾಣುತ್ತ ಹೋಗುವುದು ಸುಲಭವಲ್ಲ. ಅಕಸ್ಮಾತ್‌ ಇದನ್ನು ಸಾಧಿಸಿದರೆ ಇದೊಂದು ಪವಾಡವಾಗಲಿದೆ. ಇದಕ್ಕೆ ಶುಕ್ರವಾರದಿಂದಲೇ ಗೆಲುವಿನ ಆಭಿಯಾನ ಆರಂಭಿಸುವುದು ಅಗತ್ಯ.

ಪಂಜಾಬ್‌ ಫೇವರಿಟ್‌, ಆದರೆ…
ಅನುಮಾನವೇ ಇಲ್ಲ, ಈ ಮುಖಾಮುಖೀಯಲ್ಲಿ ಪಂಜಾಬ್‌ ತಂಡವೇ ಫೇವರಿಟ್‌. ಅಲ್ಲದೇ ಒಂದು ವಾರದ ಸುದೀರ್ಘ‌ ವಿಶ್ರಾಂತಿಯ ಬಳಿಕ ಪಂಜಾಬ್‌ ಕಣಕ್ಕಿಳಿಯಲಿದೆ. ಕ್ರಿಸ್‌ ಗೇಲ್‌, ಕೆ.ಎಲ್‌. ರಾಹುಲ್‌ ಅವರಿಗೆಲ್ಲ ತಮ್ಮ ಬ್ಯಾಟಿಂಗ್‌ ಬ್ಯಾಟರಿಯನ್ನು ಚಾರ್ಜ್‌ ಮಾಡಿಕೊಳ್ಳಲು ಈ ಅವಧಿ ಧಾರಾಳ. “ಯುನಿವರ್ಸ್‌ ಬಾಸ್‌’ ಗೇಲ್‌ ಪಂಜಾಬ್‌ ತಂಡ ಸೇರಿಕೊಂಡ ಬಳಿಕ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವುದೊಂದು ಬೋನಸ್‌. ಜಮೈಕನ್‌ ದೈತ್ಯ ಈಗಾಗಲೇ 252 ರನ್‌ ಪೇರಿಸಿದ್ದಾರೆ. ಐಪಿಎಲ್‌ನಲ್ಲಿ ಶರವೇಗದ ಅರ್ಧ ಶತಕ ದಾಖಲಿಸಿರುವ ರಾಹುಲ್‌ 268 ರನ್‌ ಪೇರಿಸಿ ಅಗ್ರಸ್ಥಾನದಲ್ಲಿದ್ದಾರೆ.

ಪಂಜಾಬ್‌ ಬೌಲಿಂಗ್‌ ವಿಭಾಗದಲ್ಲಿ ಆ್ಯಂಡ್ರೂé ಟೈ (9 ವಿಕೆಟ್‌), ಅಫ್ಘಾನಿಸ್ಥಾನದ ಮಿಸ್ಟರಿ ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ (7 ವಿಕೆಟ್‌), ಅಂಕಿತ್‌ ರಜಪೂತ್‌ (7 ವಿಕೆಟ್‌) ಉತ್ತಮ ಲಯದಲ್ಲಿದ್ದಾರೆ. ಆದರೆ ಇಂಥ ಬಲಿಷ್ಠ ತಂಡವನ್ನೂ ಸುಲಭದಲ್ಲಿ ಮಗುಚಲು ಸಾಧ್ಯ ಎಂಬುದನ್ನು ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತೋರಿಸಿ ಕೊಟ್ಟಿದೆ. ಹೈದರಾಬಾದ್‌ನಲ್ಲಿ 133 ರನ್ನುಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ಪಂಜಾಬ್‌ 19.2 ಓವರ್‌ಗಳಲ್ಲಿ 119 ರನ್ನಿಗೆ ಗಂಟುಮೂಟೆ ಕಟ್ಟಿತ್ತು; ಗೇಲ್‌-ರಾಹುಲ್‌ ಮೊದಲ ವಿಕೆಟಿಗೆ 55 ರನ್‌ ಒಟ್ಟುಗೂಡಿಸಿದ ಬಳಿಕವೂ ಪಂಜಾಬ್‌ ಪಂಕ್ಚರ್‌ ಆಗಿತ್ತು! ಈ ಫ‌ಲಿತಾಂಶ ಮುಂಬೈಗೆ ಸ್ಫೂರ್ತಿ ಆದೀತೇ?!

ಕೈಕೊಡುತ್ತಿರುವ ಓಪನಿಂಗ್‌
ಮುಂಬೈ ಸೂರ್ಯಕುಮಾರ್‌ ಯಾದವ್‌ (283 ರನ್‌), ಎವಿನ್‌ ಲೆವಿಸ್‌ (194 ರನ್‌), ರೋಹಿತ್‌ ಶರ್ಮ (196) ಬ್ಯಾಟಿಂಗನ್ನು ಹೆಚ್ಚು ಅವಲಂಬಿಸಿದೆ. ಕೆಳ ಕ್ರಮಾಂಕದಲ್ಲಿ ಪಾಂಡ್ಯ ಸೋದರರನ್ನು ನಂಬಿಕೊಳ್ಳಬಹುದು. ಬುಮ್ರಾ ಜತೆಗೆ ಹಾರ್ದಿಕ್‌ ಪಾಂಡ್ಯ ಕೂಡ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಯುವ ಲೆಗ್‌ ಸ್ಪಿನ್ನರ್‌ ಮಾಯಾಂಕ್‌ ಮಾರ್ಕಂಡೆ ಮ್ಯಾಚ್‌ ವಿನ್ನರ್‌ ಆಗಬಲ್ಲ ಛಾತಿ ಹೊಂದಿದ್ದಾರೆ. 
ಆದರೆ ಆರಂಭಿಕ ವಿಕೆಟಿಗೆ ರನ್‌ ಹರಿದು ಬಾರದಿರುವುದು ಮುಂಬೈಗೆ ಎದುರಾಗಿರುವ ಗಂಭೀರ ಸಮಸ್ಯೆ. ಈವರೆಗಿನ 8 ಇನ್ನಿಂಗ್ಸ್‌ ಗಳಲ್ಲಿ ಮೊದಲ ವಿಕೆಟಿಗೆ ಮುಂಬೈ ಗಳಿಸಿದ ರನ್‌ ಗಮನಿಸಿ: 7, 11, 102, 0, 1, 12, 69, 5. ಡೆಲ್ಲಿ ವಿರುದ್ಧ ಮೊದಲ ವಿಕೆಟಿಗೆ 9 ಓವರ್‌ಗಳಿಂದ 102 ರನ್‌ ಪೇರಿಸಿತಾದರೂ ಈ ಪಂದ್ಯವನ್ನು ಅಂತಿಮ ಎಸೆತದಲ್ಲಿ ಕಳೆದುಕೊಂಡಿತು. ಸಾಧನೆ ಜತೆಗೆ ಅದೃಷ್ಟ ಕೂಡ ಮುಂಬೈ ಕೈಹಿಡಿಯಬೇಕಿದೆ.

ಟಾಪ್ ನ್ಯೂಸ್

Kapil Sibal;

Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

1-jk

J&K; ಮತದಾನ ಪ್ರಕ್ರಿಯೆ ವೀಕ್ಷಿಸುತ್ತಿರುವ ವಿದೇಶಗಳ ಉನ್ನತ ಮಟ್ಟದ ರಾಜತಾಂತ್ರಿಕರು

Sudeep: ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇನೆ.. ಮ್ಯಾಕ್ಸ್‌ ಬಗ್ಗೆ ಕಿಚ್ಚ ಮಾತು

Sudeep: ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇನೆ.. ಮ್ಯಾಕ್ಸ್‌ ಬಗ್ಗೆ ಕಿಚ್ಚ ಮಾತು

1-kammala

Arizona;ಕಮಲಾ ಹ್ಯಾರಿಸ್ ಚುನಾವಣ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ

ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

1-urmila

Divorce; 8 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Irani Cup: Ruturaj Gaikwad is the captain for the rest of India

Irani Cup: ಶೇಷ ಭಾರತಕ್ಕೆ ಋತುರಾಜ್‌ ಗಾಯಕ್ವಾಡ್‌ ನಾಯಕ

india team left to women’s t20 world cup 2024

Women’s T20 World Cup; ಟಿ20 ವಿಶ್ವಕಪ್‌ಗೆ ಹೊರಟು ನಿಂತ ವನಿತೆಯರು

IND vs BAN; Cricket teams that came to Kanpur; Tight security

INDvsBAN; ಕಾನ್ಪುರಕ್ಕೆ ಬಂದ ಕ್ರಿಕೆಟ್‌ ತಂಡಗಳು; ಬಿಗಿ ಭದ್ರತೆ

Gwalior bandh call on Bangla match day

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

Cash prize for para shuttlers

Paralympics; ಪ್ಯಾರಾ ಶಟ್ಲರ್‌ ಗಳಿಗೆ ನಗದು ಬಹುಮಾನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6

Bengaluru: ಬಾಲಕ ಸಾವು; ನಾಲ್ವರು ಎಂಜಿನಿಯರ್‌ ಅಮಾನತು

Kapil Sibal;

Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

3

Crime: ಬುಲೆಟ್‌ ಖರೀದಿಸಲು ಸಾಧ್ಯವಾಗದ್ದಕ್ಕೆ ಹತಾಶೆ; 3 ಬೈಕ್‌ಗಳಿಗೆ ಬೆಂಕಿ ಹಚ್ಚಿದವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.