ಪಂತ್‌ ಆರ್ಭಟಕ್ಕೆ ಬೆಚ್ಚಿದ ಮುಂಬೈ


Team Udayavani, Mar 26, 2019, 6:00 AM IST

Rishabh-Pant

ಮುಂಬಯಿ: ಬದಲಾದ ಹೆಸರಿನೊಂದಿಗೆ ಆಡಲಿಳಿದ ಡೆಲ್ಲಿ ತಂಡ ರವಿವಾರದ ತನ್ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್‌ ವಿರುದ್ಧ 37 ರನ್ನುಗಳ ಜಯ ಸಾಧಿಸಿದೆ.

“ವಾಂಖೇಡೆ ಸ್ಟೇಡಿಯಂ’ನಲ್ಲಿ ಸಾಗಿದ ಈ ಮುಖಾಮುಖೀಯಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ 6 ವಿಕೆಟಿಗೆ 213 ರನ್‌ ಪೇರಿಸಿತು. ಜವಾಬಿತ್ತ ಮುಂಬೈ 19.2 ಓವರ್‌ಗಳಲ್ಲಿ 176 ರನ್ನಿಗೆ ಆಲೌಟಾಗಿದೆ. ಹಿರಿಯ ಆಟಗಾರ ಯುವರಾಜ್‌ ಸಿಂಗ್‌ ಮಾತ್ರ ಎದುರಾಳಿ ದಾಳಿಯನ್ನು ಸಮರ್ಥವಾಗಿ ಎದುರಿಸಿ 53 ರನ್‌ ಹೊಡೆದರು.

ಡೆಲ್ಲಿ ಇನ್ನಿಂಗ್ಸ್‌ ವೇಳೆ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದ ಎಡಗೈ ಆಟಗಾರ ರಿಷಬ್‌ ಪಂತ್‌ ಕೇವಲ 27 ಎಸೆತಗಳಿಂದ 78 ರನ್‌ ಸಿಡಿಸಿ ಅಜೇಯರಾಗಿ ಉಳಿದರು. “360 ಡಿಗ್ರಿ’ ಶೈಲಿಯಲ್ಲಿ ಬ್ಯಾಟ್‌ ಬೀಸುತ್ತ ಮುಂಬೈ ಬೌಲರ್‌ಗಳ ಮೇಲೆರಗಿ ಹೋದ ಪಂತ್‌ ಆಕ್ರಮಣದ ವೇಳೆ 7 ಸಿಕ್ಸರ್‌ ಜತೆಗೆ 7 ಬೌಂಡರಿ ಸಿಡಿಯಿತು. ಅವರ ಅರ್ಧ ಶತಕ ಕೇವಲ 18 ಎಸೆತಗಳಲ್ಲಿ ದಾಖಲಾಯಿತು. ಪಂತ್‌-ತೆವಾಟಿಯಾ ಕೊನೆಯ 2.4 ಓವರ್‌ಗಳಲ್ಲಿ 48 ರನ್‌ ಸೂರೆಗೈದರು.

ಪಂತ್‌ ಹೊರತುಪಡಿಸಿದರೆ ಗಮನ ಸೆಳೆದವರೆಂದರೆ ಮರಳಿ ತವರು ತಂಡಕ್ಕೆ ಬಂದ ಶಿಖರ್‌ ಧವನ್‌ (36 ಎಸೆತ, 43 ರನ್‌, 4 ಬೌಂಡರಿ, 1 ಸಿಕ್ಸರ್‌) ಮತ್ತು ಮಧ್ಯಮ ಕ್ರಮಾಂಕದ ಕಾಲಿನ್‌ ಇನ್‌ಗಾÅಮ್‌ (32 ಎಸೆತ, 47 ರನ್‌, 7 ಬೌಂಡರಿ, 1 ಸಿಕ್ಸರ್‌). ಮುಂಬೈ ಪರ ಮಿಚೆಲ್‌ ಮೆಕ್ಲೆನಗನ್‌ 40 ರನ್ನಿಗೆ 3 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು.

ಭಾರೀ ಮೊತ್ತದ ಚೇಸಿಂಗ್‌ ವೇಳೆ ಮುಂಬೈ 3 ವಿಕೆಟ್‌ಗಳನ್ನು ಬೇಗ ಕಳೆದುಕೊಂಡಿತು. ಯುವರಾಜ್‌-ಪೊಲಾರ್ಡ್‌ ಮುನ್ನುಗ್ಗಿ ಬೀಸಲಾರಂಭಿಸಿದರು. ಆದರೆ ಪೊಲಾರ್ಡ್‌, ಹಾರ್ದಿಕ್‌ ಪಾಂಡ್ಯ ಒಟ್ಟೊಟ್ಟಿಗೆ ನಿರ್ಗಮಿಸಿದ್ದು ಮುಂಬೈಗೆ ದುಬಾರಿಯಾಗಿ ಪರಿಣಮಿಸಿತು. ಯುವರಾಜ್‌ ಅರ್ಧಶತಕ ಸಿಡಿಸಿದರೆ ಮುಂಬೈ 19.2 ಓವರ್‌ಗಳಲ್ಲಿ 176 ರನ್ನಿಗೆ ಆಲೌಟಾಯಿತು.

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ತೆವಾಟಿಯ ಬಿ ಇಶಾಂತ್‌ 14
ಕ್ವಿಂಟನ್‌ ಡಿ ಕಾಕ್‌ ಸಿ ಬೌಲ್ಟ್ ಬಿ ಇಶಾಂತ್‌ 27
ಸೂರ್ಯಕುಮಾರ್‌ ಯಾದವ್‌ ರನೌಟ್‌ 2
ಯುವರಾಜ್‌ ಸಿಂಗ್‌ ಸಿ ತೆವಾಟಿಯ ಬಿ ರಬಾಡ 53
ಕೈರನ್‌ ಪೊಲಾರ್ಡ್‌ ಸಿ ತೆವಾಟಿಯ ಬಿ ಪೌಲ್‌ 21
ಹಾರ್ದಿಕ್‌ ಪಾಂಡ್ಯ ಸಿ ಮತ್ತು ಬಿ ಅಕ್ಷರ್‌ 0
ಕೃಣಾಲ್‌ ಪಾಂಡ್ಯ ಸಿ ತೆವಾಟಿಯ ಬಿ ಬೌಲ್ಟ್ 32
ಬೆನ್‌ ಕಟ್ಟಿಂಗ್‌ ಸಿ ಪಂತ್‌ ಬಿ ರಬಾಡ 3
ಮಿಚೆಲ್‌ ಮೆಕ್ಲೆನಗನ್‌ ಸ್ಟಂಪ್ಡ್ ಪಂತ್‌ ಬಿ ತೆವಾಟಿಯ 10
ರಸಿಕ್‌ ಸಲಂ ಔಟಾಗದೆ 5
ಜಸ್‌ಪ್ರೀತ್‌ ಬುಮ್ರಾ ಗಾಯಾಳಾಗಿ ನಿವೃತ್ತಿ 0
ಇತರ: 9
ಒಟ್ಟು (19.2 ಓವರ್‌ಗಳಲ್ಲಿ ಆಲೌಟ್‌) 176
ವಿಕೆಟ್‌ ಪತನ: 1-33, 2-37, 3-45, 4-95, 5-95, 6-134, 7-153, 8-170, 9-176
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-42-1
ಇಶಾಂತ್‌ ಶರ್ಮ 4-0-34-2
ಕಾಗಿಸೊ ರಬಾಡ 4-0-23-2
ರಾಹುಲ್‌ ತೆವಾಟಿಯ 1.2-0-12-1
ಕೀಮೊ ಪೌಲ್‌ 3-0-21-1
ಅಕ್ಷರ್‌ ಪಟೇಲ್‌ 3-0-42-1
ಪಂದ್ಯಶ್ರೇಷ್ಠ: ರಿಷಬ್‌ ಪಂತ್‌

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.