IPL 2024; ಮೈದಾನದ ಸಿಬಂದಿಗೆ ಬಹುಮಾನ


Team Udayavani, May 28, 2024, 6:30 AM IST

1-qewqwewq

ಚೆನ್ನೈ: ಈ ಬಾರಿಯ ಐಪಿಎಲ್‌ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಲು ಪ್ರಮುಖ ಪಾತ್ರ ವಹಿಸಿದ 10 ಪ್ರಮುಖ ಮೈದಾನಗಳ ಸಿಬಂದಿಗೆ ಬಿಸಿಸಿಐ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದೆ. ಗ್ರೌಂಡ್ಸ್‌ಮನ್‌ ಮತ್ತು ಕ್ಯುರೇಟರ್‌ಗಳಿಗೆ ಈ ಬಹುಮಾನ ಸಂದಾಯವಾಗಲಿದೆ. ಹಾಗೆಯೇ ಉಳಿದ 3 ಮೈದಾನದ ಸಿಬಂದಿಗೆ ತಲಾ 10 ಲಕ್ಷ ರೂ. ನೀಡಲಿದೆ.

10 ಮಾಮೂಲು ಮೈದಾನಗಳೆಂದರೆ ಮುಂಬಯಿ, ಹೊಸದಿಲ್ಲಿ, ಚೆನ್ನೈ, ಕೋಲ್ಕತಾ, ಚಂಡೀಗಢ, ಹೈದರಾಬಾದ್‌, ಬೆಂಗಳೂರು, ಲಕ್ನೋ, ಅಹ್ಮದಾಬಾದ್‌ ಮತ್ತು ಜೈಪುರ. ಹೆಚ್ಚುವರಿ ಮೈದಾನಗಳೆಂದರೆ ಗುವಾಹಟಿ, ವಿಶಾಖಪಟ್ಟಣ ಮತ್ತು ಧರ್ಮಶಾಲಾ.

“ಈ ಬಾರಿಯ ಐಪಿಎಲ್‌ ಯಶಸ್ವಿಗೊಳ್ಳಲು ಮೈದಾನದ ತೆರೆಮರೆಯ ಸಿಬಂದಿಯ ಪಾಲು ದೊಡ್ಡದು. ಕಠಿನ ಹಾಗೂ ವ್ಯತಿರಿಕ್ತ ಸನ್ನಿವೇಶದಲ್ಲೂ ಉತ್ತಮ ದರ್ಜೆಯ ಪಿಚ್‌ ನಿರ್ಮಾಣಕ್ಕೆ ದಣಿವರಿಯದೆ ಶ್ರಮಿಸಿದವರಿಗೆ ಧನ್ಯವಾದಗಳು’ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಕೆಕೆಆರ್‌-ಹೈದರಾಬಾದ್‌: ಎಕ್ಸ್‌ಟ್ರಾ ಇನ್ನಿಂಗ್ಸ್‌

ಕೆಕೆಆರ್‌ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಕಪ್‌ ಎತ್ತಿದ 4ನೇ ತಂಡವೆನಿಸಿತು. ಉಳಿದ 3 ತಂಡಗಳೆಂದರೆ ರಾಜಸ್ಥಾನ್‌ (2008), ಮುಂಬೈ (2017, 2019, 2020) ಮತ್ತು ಗುಜರಾತ್‌ (2022).

ಟ್ರ್ಯಾವಿಸ್‌ ಹೆಡ್‌ ಐಪಿಎಲ್‌ ಸೀಸನ್‌ ಒಂದರ ಪ್ಲೇ ಆಫ್ನಲ್ಲಿ 2 ಸೊನ್ನೆ ಸುತ್ತಿದ 4ನೇ ಆಟಗಾರ. ಲಸಿತ ಮಾಲಿಂಗ (2013), ಶ್ರೀವತ್ಸ ಗೋಸ್ವಾಮಿ (2020) ಮತ್ತು ಶಕಿಬ್‌ ಅಲ್‌ ಹಸನ್‌ (2021) ಉಳಿದ ಮೂವರು.

ಹೆಡ್‌ 567 ರನ್‌ ಹೊಡೆದರು. ಸ್ಟ್ರೈಕ್‌ರೇಟ್‌ 191.55. ಇದು ಐಪಿಎಲ್‌ ಸೀಸನ್‌ ಒಂದರಲ್ಲಿ 500 ಪ್ಲಸ್‌ ರನ್‌ ಬಾರಿಸಿದ ಆಟಗಾರನ 2ನೇ ಅತ್ಯಧಿಕ ಸ್ಟ್ರೈಕ್‌ರೇಟ್‌ ಆಗಿದೆ. ದಾಖಲೆ ಆ್ಯಂಡ್ರೆ ರಸೆಲ್‌ ಹೆಸರಲ್ಲಿದೆ. 2019ರಲ್ಲಿ ಅವರು 204.81ರ ಸ್ಟ್ರೈಕ್‌ರೇಟ್‌ನಲ್ಲಿ 510 ರನ್‌ ಹೊಡೆದಿದ್ದರು.

ಸುನೀಲ್‌ ನಾರಾಯಣ್‌ ಐಪಿಎಲ್‌ ಋತುವೊಂದರಲ್ಲಿ 400 ಪ್ಲಸ್‌ ರನ್‌ (488) ಹಾಗೂ 17 ವಿಕೆಟ್‌ ಸಂಪಾದಿಸಿದ 2ನೇ ಆಲ್‌ರೌಂಡರ್‌ ಆಗಿ ಮೂಡಿಬಂದರು. 2008ರಲ್ಲಿ ಶೇನ್‌ ವಾಟ್ಸನ್‌ 472 ರನ್‌ ಹಾಗೂ 17 ವಿಕೆಟ್‌ಗಳ ಸಾಧನೆಗೈದಿದ್ದರು.

ಸುನೀಲ್‌ ನಾರಾಯಣ್‌ ಐಪಿಎಲ್‌ ಸೀಸನ್‌ನಲ್ಲಿ 2 ಸಲ 300 ರನ್‌ ಹಾಗೂ 15 ವಿಕೆಟ್‌ ಸಾಧನೆಗೈದ 2ನೇ ಕ್ರಿಕೆಟಿಗನೆನಿಸಿದರು. ಅವರು 2018ರಲ್ಲೂ ಅತ್ಯುತ್ತಮ ಆಲ್‌ರೌಂಡ್‌ ಪ್ರದರ್ಶನ ನೀಡಿದ್ದರು (375 ರನ್‌, 17 ವಿಕೆಟ್‌). ಜಾಕ್‌ ಕ್ಯಾಲಿಸ್‌ ಮೊದಲಿಗ (2012 ಮತ್ತು 2013).

ವೆಂಕಟೇಶ್‌ ಅಯ್ಯರ್‌ ಐಪಿಎಲ್‌ ಪ್ಲೇಆಫ್ನಲ್ಲಿ 4 ಸಲ 50 ಪ್ಲಸ್‌ ರನ್‌ ಬಾರಿಸಿ ಡ್ವೇನ್‌ ಸ್ಮಿತ್‌, ಮೈಕಲ್‌ ಹಸ್ಸಿ ಮತ್ತು ಶೇನ್‌ ವಾಟ್ಸನ್‌ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾದರು. ದಾಖಲೆ ಸುರೇಶ್‌ ರೈನಾ ಹೆಸರಲ್ಲಿದೆ (7).

ಪ್ಯಾಟ್‌ ಕಮಿನ್ಸ್‌ ಐಪಿಎಲ್‌ ಸೀಸನ್‌ನಲ್ಲಿ 2ನೇ ಅತ್ಯಧಿಕ ವಿಕೆಟ್‌ ಉರುಳಿಸಿದ ನಾಯಕರೆನಿಸಿದರು (18). 2008ರಲ್ಲಿ ಶೇನ್‌ ವಾರ್ನ್ 19 ವಿಕೆಟ್‌ ಕೆಡವಿದ್ದು ದಾಖಲೆ.

ಸುನೀಲ್‌ ನಾರಾಯಣ್‌ ಅತ್ಯಧಿಕ 3 ಸಲ ಮೋಸ್ಟ್‌ ವ್ಯಾಲ್ಯುಯೇಬಲ್‌ ಪ್ಲೇಯರ್‌ ಪ್ರಶಸ್ತಿಗೆ ಭಾಜನರಾದರು. 2012ರ ಪದಾರ್ಪಣ ಪಂದ್ಯಾವಳಿ ಹಾಗೂ 2018ರಲ್ಲೂ ಅವರಿಗೆ ಈ ಪ್ರಶಸ್ತಿ ಒಲಿದಿತ್ತು.

ಟಾಪ್ ನ್ಯೂಸ್

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

1-crick

India vs England ಸೆಮಿ ಪಂದ್ಯ; ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

31

Kiran Pahal: ವನಿತೆಯರ 400 ಮೀ.; ಕಿರಣ್‌ ಪಹಲ್‌ ಒಲಿಂಪಿಕ್ಸ್‌ ಗೆ ಅರ್ಹತೆ

Ajinkya Rahane: ಲೀಸೆಸ್ಟರ್‌ ಶೈರ್‌ ಪರ ಕೌಂಟಿ ಆಡಲಿದ್ದಾರೆ ರಹಾನೆ

Ajinkya Rahane: ಲೀಸೆಸ್ಟರ್‌ ಶೈರ್‌ ಪರ ಕೌಂಟಿ ಆಡಲಿದ್ದಾರೆ ರಹಾನೆ

20

Superbet Classic Chess: ಸೂಪರ್‌ಬೆಟ್‌ ಕ್ಲಾಸಿಕ್‌ ಚೆಸ್‌; ಡಿ.ಗುಕೇಶ್‌ ಶುಭಾರಂಭ

19

Droupadi Murmu: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅಥ್ಲೀಟ್‌ಗಳಿಗೆ ರಾಷ್ಟ್ರಪತಿ ಶುಭಾಶಯ

1-crick

India vs England ಸೆಮಿ ಪಂದ್ಯ; ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

1-asss

R. Ashok ವಾಗ್ಧಾಳಿ; ದೋಚುವ ಸರಕಾರಕ್ಕೆ ಜನ ಕಪಾಳಮೋಕ್ಷ ಮಾಡಬೇಕು

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

31

Kiran Pahal: ವನಿತೆಯರ 400 ಮೀ.; ಕಿರಣ್‌ ಪಹಲ್‌ ಒಲಿಂಪಿಕ್ಸ್‌ ಗೆ ಅರ್ಹತೆ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.