![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 24, 2022, 11:57 PM IST
ಮುಂಬೈ: ಬಹುಶಃ ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಇದಕ್ಕಿಂತ ಅವಮಾನಕಾರಿಯಾದ ಅನುಭವ ಇನ್ನೊಂದಿರಲಾರದು. ಅದು ಈ ಬಾರಿ ಐಪಿಎಲ್ನಲ್ಲಿ ಸತತ 8 ಪಂದ್ಯ ಸೋತಿದೆ. ಈ ತಂಡ ಪ್ಲೇಆಫ್ ಅವಕಾಶ ಕಳೆದುಕೊಂಡಿದೆ ಎನ್ನುವುದು ಈಗ ಹಳೆಯ ವಿಷಯ. ಇನ್ನದಕ್ಕೆ ಬಾಕಿಯಿರುವುದು 6 ಪಂದ್ಯಗಳು ಮಾತ್ರ. ಇದರಲ್ಲಿ ಎಷ್ಟು ಪಂದ್ಯಗಳನ್ನು ಗೆಲ್ಲುತ್ತದೆ ಎಂದು ಲೆಕ್ಕ ಮಾಡುವಂತಾಗಿದೆ. ಭಾನುವಾರ ಅದು ಲಕ್ನೋ ಸೂಪರ್ ಜೈಂಟ್ಸ್ ಎದುರು 36 ರನ್ಗಳಿಂದ ಸೋತುಹೋಯಿತು.
ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 6 ವಿಕೆಟಿಗೆ 168 ರನ್ನುಗಳನ್ನು ಪೇರಿಸಿತು. ಇದನ್ನು ಬೆನ್ನತ್ತಿದ ಮುಂಬೈ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 132 ರನ್ಗಳನ್ನು ಗಳಿಸಿತು. ಮುಂಬೈ ಪರ ನಾಯಕ ರೋಹಿತ್ ಶರ್ಮ (39), ತಿಲಕ್ ವರ್ಮ (38) ಮಾತ್ರ ಪರವಾಗಿಲ್ಲ ಎನಿಸಿದರು. ಲಕ್ನೋದ ಕೃಣಾಲ್ ಪಾಂಡ್ಯ 19 ರನ್ಗೆ 3 ವಿಕೆಟ್ ಪಡೆದರು.
ರಾಹುಲ್ ಶತಕ: ಮೊದಲು ಬ್ಯಾಟ್ ಮಾಡಿದ ಲಕ್ನೋ ನಾಯಕ ಕೆ.ಎಲ್.ರಾಹುಲ್ ಅಬ್ಬರದ ಶತಕ ಬಾರಿಸಿದರು. ರಾಹುಲ್ ಮತ್ತು ಮನೀಷ್ ಪಾಂಡೆ ಎಚ್ಚರಿಕೆಯ ಆಟವಾಡಿ ಮೊದಲ ಆಘಾತದಿಂದ ತಂಡವನ್ನು ಪಾರು ಮಾಡಲು ಪ್ರಯತ್ನಿಸಿದರು. ಮುಂಬೈ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರಿಬ್ಬರು ದ್ವಿತೀಯ ವಿಕೆಟಿಗೆ 58 ರನ್ನುಗಳ ಜತೆಯಾಟ ನಡೆಸಿದರು. ಆಬಳಿಕ ತಂಡ ಸ್ಟಾಯಿನಿಸ್, ಕೃಣಾಲ್ ಪಾಂಡ್ಯ ಮತ್ತು ದೀಪಕ್ ಹೂಡಾ ಅವರನ್ನು ಬೇಗನೇ ಕಳೆದುಕೊಂಡ ಕಾರಣ ತಂಡದ ರನ್ ವೇಗ ಕುಸಿಯುವಂತಾಯಿತು. ಸ್ಟಾಯಿನಿಸ್ ಶೂನ್ಯಕ್ಕೆ ಔಟಾದರೆ ಹೂಡಾ 10 ರನ್ ಗಳಿಸಿದರು.
ಕೊನೆ ಹಂತದಲ್ಲಿ ಬಿರುಸಿನ ಆಟವಾಡಿದ ರಾಹುಲ್ ಮತ್ತು ಆಯುಷ್ ಬದೋನಿ ಆರನೇ ವಿಕೆಟಿಗೆ 47 ರನ್ ಪೇರಿಸಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. ಬದೋನಿ 14 ರನ್ ಗಳಿಸಿದರು. ಇದೇ ವೇಳೆ ಕ್ರೀಸ್ನ ಒಂದು ಬದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ರಾಹುಲ್ ಈ ಐಪಿಎಲ್ನಲ್ಲಿ ಎರಡನೇ ಶತಕ ಪೂರ್ತಿಗೊಳಿಸಿದರು. 62 ಎಸೆತಗಳಲ್ಲಿ ಅವರು 12 ಬೌಂಡರಿ, 4 ಸಿಕ್ಸರ್ ಸಮೇತ 103 ರನ್ ಬಾರಿಸಿದರು. ರಾಹುಲ್ ಅವರ ಈ ಹಿಂದಿನ ಶತಕ ಮುಂಬೈ ವಿರುದ್ಧವೇ ದಾಖಲಾಗಿತ್ತು.
ಸಂಕ್ಷಿಪ್ತ ಸ್ಕೋರ್: ಲಕ್ನೋ 20 ಓವರ್, 168/6 (ಕೆ.ಎಲ್.ರಾಹುಲ್ 103, ಮನೀಷ್ ಪಾಂಡೆ 22, ರಿಲೀ ಮೆರೆಡಿತ್ 40ಕ್ಕೆ 2). ಮುಂಬೈ 20 ಓವರ್ 132/8 (ರೋಹಿತ್ ಶರ್ಮ 39, ತಿಲಕ್ ವರ್ಮ 38, ಕೃಣಾಲ್ ಪಾಂಡ್ಯ 19ಕ್ಕೆ 3).
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.