ರಾಜ್‌ಕೋಟ್‌ನಲ್ಲಿ ದರ್ಬಾರು ನಡೆಸೀತೇ ಕರ್ನಾಟಕ?

ರಣಜಿ : ಇಂದಿನಿಂದ ಸೌರಾಷ್ಟ್ರ ವಿರುದ್ಧ ಸೆಣಸಾಟ

Team Udayavani, Jan 11, 2020, 5:28 AM IST

ra

ರಾಜ್‌ಕೋಟ್‌: ಬಲಿಷ್ಠ ಮುಂಬಯಿ ತಂಡದ ಹೆಡೆಮುರಿ ಕಟ್ಟಿದ ಬಳಿಕ ಕರ್ನಾಟಕ ಪಡೆ ರಣಜಿ ಕ್ರಿಕೆಟ್‌ ಲೀಗ್‌ ಎಲೈಟ್‌ “ಬಿ’ ಗುಂಪಿನ ಪಂದ್ಯದಲ್ಲಿ ಶನಿವಾರದಿಂದ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

ರಾಜ್‌ಕೋಟ್‌ನ “ಮಾಧವ ರಾವ್‌ ಸಿಂಧಿಯಾ ಕ್ರೀಡಾಂಗಣ’ದಲ್ಲಿ ನಡೆಯಲಿರುವ ಈ ಮುಖಾಮುಖೀ ಜೈದೇವ್‌ ಉನಾದ್ಕತ್‌ ನಾಯಕತ್ವದ ಸೌರಾಷ್ಟ್ರ ಪಾಲಿಗೆ ತವರಿನ ಪಂದ್ಯವಾಗಿದೆ.

ಇತ್ತ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಕರ್ನಾಟಕ ತಂಡವನ್ನು ಮೊದಲ ಸಲ ಶ್ರೇಯಸ್‌ ಗೋಪಾಲ್‌ ಮುನ್ನಡೆಸುತ್ತಿದ್ದಾರೆ. ನಾಯಕ ಕರುಣ್‌ ನಾಯರ್‌ ಮದುವೆ ಹಿನ್ನೆಲೆಯಲ್ಲಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ ಟೀಮ್‌ ಇಂಡಿಯಾದಲ್ಲಿದ್ದಾರೆ.

ಸಂಘಟಿತ ಹೋರಾಟ ಅಗತ್ಯ
ಮುಂಬಯಿಯನ್ನು ಅವರದೇ ಅಂಗಳದಲ್ಲಿ ಬಗ್ಗುಬಡಿದ ಬಳಿಕ ಕರ್ನಾಟಕ ತಂಡದಲ್ಲಿ ಹೊಸ ಹುರುಪು ಮೂಡಿದೆ. ಇದಕ್ಕೂ ಮೊದಲು ತಮಿಳುನಾಡನ್ನು ಮಣಿಸಿದ ರಾಜ್ಯ ತಂಡ, ಅನಂತರ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ವಿರುದ್ಧ ಡ್ರಾ ಸಾಧಿಸಿತ್ತು. ವಿಶೇಷವೆಂದರೆ, ಡ್ರಾಗೊಂಡ ಪಂದ್ಯಗಳೆರಡೂ ತವರಲ್ಲೇ ನಡೆದಿದ್ದವು. ಗೆಲುವುಗಳೆರಡೂ ಕರ್ನಾಟಕದಾಚೆ ಒಲಿದಿದ್ದವು. ದಿಂಡಿಗಲ್‌ನಲ್ಲಿ ಆತಿಥೇಯ ತಮಿಳುನಾಡನ್ನು 26 ರನ್‌ ಅಂತರದಿಂದ ಸೋಲಿಸಿ ಶುಭಾರಂಭ ಮಾಡಿತ್ತು.

ರಾಜ್ಯ ತಂಡದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಅಭಿಷೇಕ್‌ ರೆಡ್ಡಿ ಅವರನ್ನು ಕೈಬಿಡಲಾಗಿದೆ. ಫಿಟ್‌ನೆಸ್‌ನಲ್ಲಿ ಉತ್ತೀರ್ಣರಾದ ಕೆ.ವಿ. ಸಿದ್ಧಾರ್ಥ್, ಪವನ್‌ ದೇಶಪಾಂಡೆ ತಂಡಕ್ಕೆ ಮರಳಿದ್ದಾರೆ. ಖಾಯಂ ನಾಯಕ ಮನೀಷ್‌ ಪಾಂಡೆ ಭಾರತ ತಂಡದ ಪರ ಸೀಮಿತ ಓವರ್‌ಗಳ ಪಂದ್ಯದಲ್ಲಿ ಆಡುತ್ತಿರುವುದರಿಂದ ಲಭ್ಯರಿರುವುದಿಲ್ಲ. ಕಳೆದ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಬದಲು ಸ್ಥಾನ ಪಡೆದಿದ್ದ ಆರ್‌. ಸಮರ್ಥ್ ಉತ್ತಮ ಫಾರ್ಮ್ ಪ್ರದರ್ಶಿಸಿರುವುದು ಕರ್ನಾಟಕ ಪಾಲಿಗೆ ಸಮಾಧಾನಕರ ಸಂಗತಿ.

ಬೌಲಿಂಗ್‌ನಲ್ಲಿ ಮಿಥುನ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಕೌಶಿಕ್‌ ಕರ್ನಾಟಕದ ಆಧಾರಸ್ತಂಭವಾಗಿದ್ದಾರೆ.

ಸೌರಾಷ್ಟ್ರ ತವರಲ್ಲಿ ಪ್ರಬಲ
ಸೌರಾಷ್ಟ್ರ ಮೂರರಲ್ಲಿ 2 ಪಂದ್ಯಗಳನ್ನು ಗೆದ್ದಿದೆ. ಉತ್ತರ ಪ್ರದೇಶ ವಿರುದ್ಧ ಸೋತಿದೆ. ಸೌರಾಷ್ಟ್ರ ಪರ ಹಾರ್ವಿಕ್‌ ದೇಸಾಯಿ, ಚೇತೇಶ್ವರ ಪೂಜಾರ, ಶೆಲ್ಡನ್‌ ಜಾಕ್ಸನ್‌ರಂತಹ ದಿಗ್ಗಜ ಬ್ಯಾಟ್ಸ್‌ಮನ್‌ ಇದ್ದಾರೆ. ಜೈದೇವ್‌ ಉನಾದ್ಕತ್‌, ಧರ್ಮೇಂದ್ರ ಸಿನ್ಹ ಜಡೇಜ, ಕಮಲೇಶ್‌ ಮಕ್ವಾನ ಘಾತಕ ದಾಳಿ ಸಂಘಟಿಸಬಲ್ಲ ಬೌಲರ್‌ಗಳಿದ್ದಾರೆ. ಸೌರಾಷ್ಟ್ರ ತವರಿನಲ್ಲೇ ಆಡುವುದರಿಂದ ಕರ್ನಾಟಕ ತೀವ್ರ ಎಚ್ಚರಿಕೆಯಿಂದ ಹೋರಾಟ ಸಂಘಟಿಸಬೇಕಾದುದು ಅಗತ್ಯ.

2018-19ರ ಸಾಲಿನಲ್ಲಿ ಬೆಂಗಳೂರಿನಲ್ಲೇ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ 5 ವಿಕೆಟ್‌ಗಳಿಂದ ಸೌರಾಷ್ಟ್ರಕ್ಕೆ ಶರಣಾಗಿತ್ತು. ಇದಕ್ಕೆ ಅವರದೇ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ಕರ್ನಾಟಕಕ್ಕೆ ಎದುರಾಗಿದೆ.

ತಂಡಗಳು
ಕರ್ನಾಟಕ: ಶ್ರೇಯಸ್‌ ಗೋಪಾಲ್‌ (ನಾಯಕ), ದೇವದತ್ತ ಪಡಿಕ್ಕಲ್‌, ಡಿ. ನಿಶ್ಚಲ್‌, ಆರ್‌. ಸಮರ್ಥ್, ಕೆ.ವಿ. ಸಿದ್ಧಾರ್ಥ್, ಬಿ.ಆರ್‌. ಶರತ್‌, ರೋಹನ್‌ ಕದಮ್‌, ಪವನ್‌ ದೇಶಪಾಂಡೆ, ಜೆ. ಸುಚಿತ್‌, ಅಭಿಮನ್ಯು ಮಿಥುನ್‌, ವಿ. ಕೌಶಿಕ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಎಸ್‌. ಶರತ್‌, ಪ್ರವೀಣ್‌ ದುಬೆ.
ಸೌರಾಷ್ಟ್ರ: ಜೈದೇವ್‌ ಉನಾದ್ಕತ್‌ (ನಾಯಕ), ಹಾರ್ವಿಕ್‌ ದೇಸಾಯಿ, ಸ್ನೆಲ್‌ ಪಟೇಲ್‌, ಚೇತೇಶ್ವರ್‌ ಪೂಜಾರ, ಶೆಲ್ಡನ್‌ ಜಾಕ್ಸನ್‌, ಸಮರ್ಥ್ ವ್ಯಾಸ್‌, ಪ್ರತೀಕ್‌ ಮಂಕಡ್‌, ಧರ್ಮೇಂದ್ರ ಸಿನ್ಹ ಜಡೇಜ, ಪಾರ್ಥ್ ಭೂತ್‌, ಜಯ್‌ ಚೌಹಾಣ್‌, ಕಮಲೇಶ್‌ ಮಕ್ವಾನ.

ಸೊರಗಿದ ಮುಂಬಯಿಗೆ ತಮಿಳುನಾಡು ಸವಾಲು
ಚೆನ್ನೈ: ಸತತ 2 ಸೋಲುಂಡ ಆಘಾತದಲ್ಲಿರುವ ರಣಜಿ ಕಿಂಗ್‌ ಮುಂಬಯಿ ಚೆನ್ನೈಯಲ್ಲಿ ಆತಿಥೇಯ ತಮಿಳುನಾಡಿನ ಸವಾಲನ್ನು ಎದುರಿಸಲಿದೆ. ಆರ್‌. ಅಶ್ವಿ‌ನ್‌, ದಿನೇಶ್‌ ಕಾರ್ತಿಕ್‌ ಅವರನ್ನೊಳಗೊಂಡ ಪೂರ್ಣ ಸಾಮರ್ಥ್ಯದ ತಮಿಳುನಾಡು ತಂಡವನ್ನು ಎದುರಿಸುವುದು ಮುಂಬಯಿಗೆ ಸುಲಭವಲ್ಲ ಎಂದೇ ಭಾವಿಸಲಾಗಿದೆ.

ನಾಯಕ ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಅನೇಕ ತಾರಾ ಆಟಗಾರರ ಸೇವೆಯಿಂದ ಮುಂಬಯಿ ವಂಚಿತವಾಗಿದೆ. ಯಾದವ್‌ ನ್ಯೂಜಿಲ್ಯಾಂಡ್‌ ಪ್ರವಾಸ ಕ್ಕಾಗಿ ಭಾರತ “ಎ’ ತಂಡವನ್ನು ಸೇರಿಕೊಂಡಿದ್ದಾರೆ. ಆರಂಭಕಾರ ಪೃಥ್ವಿ ಶಾ ಗಾಯಾಳಾಗಿದ್ದಾರೆ. ಶಾದೂìಲ್‌ ಠಾಕೂರ್‌, ಶಿವಂ ದುಬೆ, ಶ್ರೇಯಸ್‌ ಅವರೆಲ್ಲ ಭಾರತದ ಟಿ20 ತಂಡದಲ್ಲಿದ್ದಾರೆ. ಹೀಗಾಗಿ ಆದಿತ್ಯ ತಾರೆ ನಾಯಕತ್ವದ ಮುಂಬಯಿ “ಎಂ.ಎ. ಚಿದಂಬರಂ ಸ್ಟೇಡಿಯಂ’ನ ನಿಧಾನ ಗತಿಯ ಟ್ರ್ಯಾಕ್‌ನಲ್ಲಿ ನಿಜವಾದ ಅಗ್ನಿಪರೀಕ್ಷೆ ಎದುರಿಸಬೇಕಿದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Paralympics closing ceremony: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌, ಪ್ರೀತಿ ಧ್ವಜಧಾರಿಗಳು

Paralympics: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌ ಸಿಂಗ್‌, ಪ್ರೀತಿ ಪಾಲ್‌ ಧ್ವಜಧಾರಿಗಳು

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

Paris Paralympics; Another gold for India; Praveen Kumar won gold in high jump

Paralympics; ಭಾರತಕ್ಕೆ ಮತ್ತೊಂದು ಬಂಗಾರ; ಹೈಜಂಪ್‌ ನಲ್ಲಿ ಚಿನ್ನ ಗೆದ್ದ ಪ್ರವೀಣ್‌ ಕುಮಾರ್

Vikram Rathore; Former coach of Team India joined New Zealand team

Vikram Rathour; ನ್ಯೂಜಿಲ್ಯಾಂಡ್‌ ತಂಡ ಸೇರಿದ ಟೀಂ ಇಂಡಿಯಾ ಮಾಜಿ ಕೋಚ್

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.