10 ವಿಕೆಟ್‌ ಹಾರಿಸಿದ ಕಶ್ವಿ‌ ಗೌತಮ್‌


Team Udayavani, Feb 26, 2020, 1:23 AM IST

GAUTAM

ಕಡಪ: ಚಂಡೀಗಢ ವನಿತಾ ಅಂಡರ್‌-19 ಕ್ರಿಕೆಟ್‌ ತಂಡದ ನಾಯಕಿ ಕಶ್ವಿ‌ ಗೌತಮ್‌ ವಿಶಿಷ್ಟ ದಾಖಲೆಯೊಂದಿಗೆ ಸುದ್ದಿಯಾಗಿದ್ದಾರೆ. ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇನ್ನಿಂಗ್ಸಿನ ಎಲ್ಲ 10 ವಿಕೆಟ್‌ ಉರುಳಿಸಿದ ಭಾರತದ ಮೊದಲ ಬೌಲರ್‌ ಆಗಿ ಮೂಡಿಬಂದಿದ್ದಾರೆ.

ಕಡಪದಲ್ಲಿ ನಡೆದ ಅರುಣಾಚಲಪ್ರದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಕಶ್ವಿ‌ ಕೇವಲ 29 ಎಸೆತಗಳಲ್ಲಿ 12 ರನ್‌ ನೀಡಿ ಈ ಸಾಧನೆಗೈದರು. 4.5 ಓವರ್‌ ಎಸೆದ ಅವರು ಒಂದು ಮೇಡನ್‌ ಮಾಡಿ, 12 ರನ್‌ ವೆಚ್ಚದಲ್ಲಿ ಅರುಣಾಚಲಪ್ರದೇಶ ತಂಡದ ಎಲ್ಲ 10 ವಿಕೆಟ್‌ ಉಡಾಯಿಸಿದರು. ಇದರಲ್ಲಿ 4 ಬೌಲ್ಡ್‌ ಹಾಗೂ 6 ಲೆಗ್‌ ಬಿಫೋರ್‌ ರೂಪದಲ್ಲಿ ಬಂದವು. 8 ಆಟಗಾರ್ತಿಯರು ರನ್‌ ಖಾತೆಯನ್ನೇ ತೆರೆಯಲಿಲ್ಲ. ಇನ್ನೂ ವಿಶೇಷವೆಂದರೆ, ಇದರಲ್ಲಿ ಹ್ಯಾಟ್ರಿಕ್‌ ಕೂಡ ಒಳಗೊಂಡಿತ್ತು!

ಕಶ್ವಿ‌ ಗೌತಮ್‌ ದಾಳಿಗೆ ಸಿಲುಕಿದ ಅರುಣಾಚಲಪ್ರದೇಶ 25 ರನ್ನಿಗೆ ಆಲೌಟ್‌ ಆಯಿತು. ಚಂಡೀಗಢ 161 ರನ್ನುಗಳ ಭರ್ಜರಿ ಗೆಲುವು ಸಾಧಿಸಿತು. ಬ್ಯಾಟಿಂಗಿನಲ್ಲೂ ಮಿಂಚಿದ ಕಶ್ವಿ‌ ಚಂಡೀಗಢ ಪರ ಸರ್ವಾಧಿಕ 49 ರನ್‌ ಬಾರಿಸಿದರು. ಇದರಲ್ಲಿ 6 ಬೌಂಡರಿಗಳಿದ್ದವು. ಚಂಡೀಗಢ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟಿಗೆ 186 ರನ್‌ ಗಳಿಸಿತ್ತು.

ಕಶ್ವಿ‌ ಗೌತಮ್‌ ಈ ಸಾಧನೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರ ವಿರುದ್ಧ 7 ವಿಕೆಟ್‌ ಹಾರಿಸಿದ್ದರು. ಇದರೊಂದಿಗೆ 3 ಪಂದ್ಯಗಳಿಂದ ಅವರ ವಿಕೆಟ್‌ ಗಳಿಕೆ 18ಕ್ಕೆ ಏರಿದೆ.

ಟಾಪ್ ನ್ಯೂಸ್

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

MNG-Deeraj

Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್‌ ಮುನಿರಾಜು

Kapu

Navarathiri: ಉಚ್ಚಿಲ ದಸರಾ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

krishna bhaire

FIR ದಾಖಲಾದ ಬಿಜೆಪಿಯವರು ರಾಜೀನಾಮೆ ನೀಡಲಿ: ಕೃಷ್ಣ ಭೈರೇಗೌಡ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Madikeri

Madikeri: ಕುಶಾಲನಗರದಲ್ಲಿ ಕೊಡಲಿಯಿಂದ ಕಡಿದು ಇಬ್ಬರ ಕೊ*ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shanghai Masters 2024: ಬೋಪಣ್ಣ ಜೋಡಿಗೆ ಜಯ

Shanghai Masters 2024: ಬೋಪಣ್ಣ ಜೋಡಿಗೆ ಜಯ

Irani Cup 2024: ಮುಂಬಯಿಗೆ ಲೀಡ್… 274 ರನ್‌ ಮುನ್ನಡೆ

Irani Cup 2024: ಮುಂಬಯಿಗೆ ಲೀಡ್… 274 ರನ್‌ ಮುನ್ನಡೆ

Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ

Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ

9

Cricketer: ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ರಶೀದ್‌ ಖಾನ್

Team India; Morkel, the bowling coach, is upset with Hardik Pandya

Team India; ಹಾರ್ದಿಕ್ ಪಾಂಡ್ಯ ಬಗ್ಗೆ ಅಸಮಾಧಾನಗೊಂಡ ಬೌಲಿಂಗ್‌ ಕೋಚ್‌ ಮಾರ್ಕೆಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ

1-aaaa

Bandipur ಸಫಾರಿ ವೀಕ್ಷಿಸಿದ CJI ಡಿ.ವೈ.ಚಂದ್ರಚೂಡ್‌: ಕಾಡಾನೆಗಳ ದರ್ಶನ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

MNG-Deeraj

Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್‌ ಮುನಿರಾಜು

1-asdd

PDOಗಳ ಅನಿರ್ದಿಷ್ಟಾವಧಿ ಧರಣಿ: ರಾಜ್ಯಾದ್ಯಂತ ಗ್ರಾ.ಪಂ. ಸೇವೆ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.