IPL;ಮುಂಬೈ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಕೆಕೆಆರ್
Team Udayavani, May 12, 2024, 12:41 AM IST
ಕೋಲ್ಕತಾ:ಮಳೆಯಿಂದ ಅಡಚಣೆಗೊಳಗಾಗಿ 16 ಓವರ್ಗಳಿಗೆ ಸೀಮಿತಗೊಂಡ ಶನಿವಾರ ರಾತ್ರಿಯ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 18 ರನ್ ಜಯ ಸಾಧಿಸಿದ ಕೋಲ್ಕತಾ ನೈಟ್ರೈಡರ್ ಪ್ಲೇ ಆಫ್ ಪ್ರವೇಶಿಸಿತು.
ಕೆಕೆಆರ್ ಪ್ರಾಬಲ್ಯ ಮೆರೆದು 12 ನೇ ಪಂದ್ಯದಲ್ಲಿ 9 ನೇ ಜಯ ತನ್ನದಾಗಿಸಿಕೊಂಡಿತು. ಈಗಾಗಲೇ ಹೊರ ಬಿದ್ದಿರುವ ಮುಂಬೈ ಹೋರಾಟ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ.
ಬಿಗ್ ಹಿಟ್ಟಿಂಗ್ ತಂಡವಾದ ಕೆಕೆಆರ್ ಮೊದಲು ಬ್ಯಾಟಿಂಗ್ ನಡೆಸಿ 7 ವಿಕೆಟಿಗೆ 157 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೆಕೆಆರ್ ಬೌಲರ್ ಗಳು ಮುಂಬೈ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ವರುಣ್ ಚಕ್ರವರ್ತಿ ಬಿಗಿ ದಾಳಿ ನಡೆಸಿ ಎರಡು ವಿಕೆಟ್ ಪಡೆದರು. ಹರ್ಷಿತ್ ರಾಣಾ, ರಸ್ಸೆಲ್ ಕೂಡ ತಲಾ ಎರಡು ವಿಕೆಟ್ ಕಿತ್ತರು. ಸುನಿಲ್ ನಾರಾಯಣ್ ಒಂದು ವಿಕೆಟ್ ಕಿತ್ತರು.
ಇಶಾನ್ ಕಿಶನ್ 40 , ರೋಹಿತ್ ಶರ್ಮ 19, ಸೂರ್ಯಕುಮಾರ್ 11, ತಿಲಕ್ ವರ್ಮ 32 ರನ್ ಗಳಿಸಿ ಔಟಾದರು. ನಮನ್ 17 ರನ್ ಗಳಿಸಿದರು.
ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 42, ನಿತೀಶ್ ರಾಣಾ 33, ಆ್ಯಂಡ್ರೆ ರಸೆಲ್ 24 ರನ್ ಮಾಡಿದರು. ಫಿಲಿಪ್ ಸಾಲ್ಟ್ ಮೊದಲ ಎಸೆತವನ್ನೇ ಸಿಕ್ಸರ್ಗೆ ಬಡಿದಟ್ಟಿದರೂ 5ನೇ ಎಸೆತದಲ್ಲಿ ಪೆವಿಲಿಯನ್ ಸೇರಿಕೊಂಡರು. ಮತ್ತೋರ್ವ ಬಿಗ್ ಹಿಟ್ಟರ್ ಸುನೀಲ್ ನಾರಾಯಣ್ ಅವರದು ಗೋಲ್ಡನ್ ಡಕ್ ಸಂಕಟ; ಬುಮ್ರಾ ಎಸೆತದಲ್ಲಿ ಕ್ಲೀನ್ಬೌಲ್ಡ್. ಇದು ಐಪಿಎಲ್ನಲ್ಲಿ ಸುನೀಲ್ ನಾರಾಯಣ್ ಸುತ್ತಿದ 16ನೇ ಸೊನ್ನೆ. ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ರೋಹಿತ್ ಶರ್ಮ 17 ಸೊನ್ನೆಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ 44 ಸಲ ಸೊನ್ನೆಗೆ ಔಟಾದ ದಾಖಲೆ ಸುನೀಲ್ ನಾರಾಯಣ್ ಹೆಸರಿಗೆ ಬರೆಯಲ್ಪಟ್ಟಿತು. ಅಲೆಕ್ಸ್ ಹೇಲ್ಸ್ 2ನೇ ಸ್ಥಾನಕ್ಕೆ ಇಳಿದರು (43).
ನಾಯಕ ಶ್ರೇಯಸ್ ಅಯ್ಯರ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 7 ರನ್ ಮಾಡಿ ಅಂಶುಲ್ ಎಸೆತದಲ್ಲಿ ಬೌಲ್ಡ್ ಆದರು. ಆದರೆ ಒನ್ಡೌನ್ನಲ್ಲಿ ಆಡಲಿಳಿದ ವೆಂಕಟೇಶ್ ಅಯ್ಯರ್ ಮುಂಬೈ ದಾಳಿಯನ್ನು ತಡೆದು ನಿಂತು ಆಕ್ರಮಣಕಾರಿ ಆಟವಾಡಿದರು. ಇವರ ಗಳಿಕೆ 21 ಎಸೆತಗಳಿಂದ 42 ರನ್ (6 ಬೌಂಡರಿ, 2 ಸಿಕ್ಸರ್). ಪೀಯೂಷ್ ಚಾವ್ಲಾ ತಮ್ಮ ಮೊದಲ ಎಸೆತದಲ್ಲೇ ವೆಂಕಟೇಶ್ ಅಯ್ಯರ್ ವಿಕೆಟ್ ಹಾರಿಸಿದರು.
ನಿತೀಶ್ ರಾಣಾ 23 ಎಸೆತಗಳಿಂದ 33 ರನ್ ಕೊಡುಗೆ ಸಲ್ಲಿಸಿದರು (4 ಬೌಂಡರಿ, 1 ಸಿಕ್ಸರ್). ಅಂತಿಮವಾಗಿ ರನೌಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಮುಂಬೈ ಬೌಲಿಂಗ್ ಜತೆಗೆ ಫೀಲ್ಡಿಂಗ್ನಲ್ಲೂ ಮಿಂಚಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.