![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 19, 2019, 5:22 AM IST
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ತಂಡ ಸತತ 2ನೇ ಗೆಲುವು ದಾಖಲಿಸಿದೆ. ರವಿವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶಿವಮೊಗ್ಗ ತಂಡ ಮೈಸೂರು ವಾರಿಯರ್ಗೆ 14 ರನ್ನುಗಳ ಸೋಲುಣಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ನಮ್ಮ ಶಿವಮೊಗ್ಗ 7 ವಿಕೆಟಿಗೆ 166 ರನ್ ಪೇರಿಸಿದರೆ, ಮೈಸೂರು ವಾರಿಯರ್ 19.2 ಓವರ್ಗಳಲ್ಲಿ 152ಕ್ಕೆ ಆಲೌಟ್ ಆಯಿತು. ಶಿವಮೊಗ್ಗ ಶನಿವಾರದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಗೆ ಸೋಲುಣಿಸಿತ್ತು.
ಪವನ್ ದೇಶಪಾಂಡೆ ಅವರ ಅರ್ಧ ಶತಕ ಶಿವಮೊಗ್ಗ ಇನ್ನಿಂಗ್ಸಿನ ಆಕರ್ಷಣೆಯಾಗಿತ್ತು. ಅವರು 42 ಎಸೆತಗಳಿಂದ 53 ರನ್ ಬಾರಿಸಿದರು (3 ಬೌಂಡರಿ, 2 ಸಿಕ್ಸರ್). ಮೈಸೂರು ಪರ ಆರಂಭಕಾರ ಕೆ. ಸಿದ್ಧಾರ್ಥ್ ಏಕಾಂಗಿಯಾಗಿ ಹೋರಾಡಿ 77 ರನ್ ಮಾಡಿದರು (54 ಎಸೆತ, 10 ಬೌಂಡರಿ, 1 ಸಿಕ್ಸರ್).
ಶಿವಮೊಗ್ಗ ತಂಡದ ಪ್ರದೀಪ್ ಟಿ. ಮತ್ತು ಎಚ್.ಎಸ್. ಶರತ್ ತಲಾ 3 ವಿಕೆಟ್, ನಾಯಕ ಅಭಿಮನ್ಯು ಮಿಥುನ್ ಮತ್ತು ಎಸ್.ಪಿ. ಮಂಜುನಾಥ್ ತಲಾ 2 ವಿಕೆಟ್ ಕಿತ್ತರು.
ಬೆಳ್ಳಾರಿಗೆ ರೋಚಕ ಜಯ
ಶನಿವಾರ ರಾತ್ರಿಯ ಪಂದ್ಯದಲ್ಲಿ ಬೆಳ್ಳಾರಿ ಟಸ್ಕರ್ ತಂಡ ಬೆಳಗಾವಿ ಪ್ಯಾಂಥರ್ ವಿರುದ್ಧ 6 ರನ್ನುಗಳ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಬೆಳ್ಳಾರಿ 5 ವಿಕೆಟಿಗೆ 144 ರನ್ ಹೊಡೆದರೆ, ಬೆಳಗಾವಿ 8 ವಿಕೆಟಿಗೆ 138 ರನ್ ಮಾಡಿತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.