India vs Bangladesh: ನೆಟ್ಸ್ನಲ್ಲಿ ಭಾರತಕ್ಕೆ ಗುರ್ನೂರ್ ನೆರವು
Team Udayavani, Sep 14, 2024, 9:58 PM IST
ಚೆನ್ನೈ: ಎದುರಾಳಿ ತಂಡದ ಪ್ರಮುಖ ಬೌಲರ್ನ ಶೈಲಿಯನ್ನೇ ಹೊಂದಿರುವ ಎಸೆತಗಾರನನ್ನು ಟೀಮ್ ಇಂಡಿಯಾ ತನ್ನ ನೆಟ್ಸ್ನಲ್ಲಿ ಬಳಸಿಕೊಳ್ಳುವುದು ಮಾಮೂಲು. ನೂತನ ಕೋಚ್ ಗೌತಮ್ ಗಂಭೀರ್ ಹಾಗೂ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಕೂಡ ಇದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಸೆ.19ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧದ ಟೆಸ್ಟ್ಗಾಗಿ ಚೆನ್ನೈಯಲ್ಲಿ ಅಭ್ಯಾಸ ನಿರತರಾಗಿರುವ ಭಾರತ ತಂಡದ ನೆಟ್ಸ್ನಲ್ಲಿ ಪಂಜಾಬ್ನ ನೀಳಕಾಯದ ಪೇಸ್ ಬೌಲರ್ ಗುರ್ನೂರ್ ಬ್ರಾರ್ ಅವರ ಸೇವೆಯನ್ನು ಬಳಸಿಕೊಳ್ಳಲಾಗಿದೆ.
ಬಾಂಗ್ಲಾದೇಶದ ಅಪಾಯಕಾರಿ ಬೌಲರ್ ನಾಹಿದ್ ರಾಣಾ ಅವರನ್ನು ಎದುರಿಸುವ ಸಲುವಾಗಿ, ಅವರ ಬೌಲಿಂಗ್ ಶೈಲಿಯನ್ನೇ ಹೋಲುವ ಗುರ್ನೂರ್ ಬ್ರಾರ್ ಅವರ ನೆರವನ್ನು ಪಡೆಯಲಾಗಿದೆ. ಕಳೆದ ಪಾಕಿಸ್ತಾನ ಪ್ರವಾಸದ ವೇಳೆ 6 ಅಡಿ-5 ಇಂಚು ಎತ್ತರದ, ರಾಣಾ ಅವರ ಹೈ ಆರ್ಮ್ ಆ್ಯಕ್ಷನ್ ಎಸೆತಗಳನ್ನು ಎದುರಿಸಿ ನಿಲ್ಲಲು ಆತಿಥೇಯ ಬ್ಯಾಟರ್ಗಳಿಗೆ ಸಾಧ್ಯವಾಗಿರಲಿಲ್ಲ.
ನೀಳಕಾಯದ ಎಸೆತಗಾರ:
24 ವರ್ಷದ ಬ್ರಾರ್ ಕೂಡ 6 ಅಡಿ-4.5 ಇಂಚು ಎತ್ತರವಿದ್ದು, ಈವರೆಗೆ 5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಶನಿವಾರದ ಅಭ್ಯಾಸದ ವೇಳೆ ಬೌಲಿಂಗ್ ಕೋಚ್ ಮಾರ್ಕೆಲ್ ಅವರು ಸ್ಟಾರ್ ಬ್ಯಾಟರ್ಗಳಿಗೆ ಹೇಗೆ ಬೌಲಿಂಗ್ ನಡೆಸಬೇಕೆಂದು ಬ್ರಾರ್ ಅವರಿಗೆ ಸಲಹೆಯಿತ್ತರು.
ಮುಬೈಯ ಆಫ್ ಸ್ಪಿನ್ನರ್ ಹಿಮಾಂಶು ಸಿಂಗ್ ಕೂಡ ನೆಟ್ಸ್ನಲ್ಲಿದ್ದಾರೆ. ಇವರದು ಆರ್. ಅಶ್ವಿನ್ ಅವರ ಬೌಲಿಂಗ್ ಶೈಲಿಯಾಗಿದೆ. ಹಾಗೆಯೇ ತಮಿಳುನಾಡಿನ ನಿಧಾನ ಗತಿಯ ಎಡಗೈ ಬೌಲರ್ ಎಸ್. ಅಜಿತ್ ರಾಮ್ ಅವರನ್ನೂ ನೆಟ್ಸ್ಗೆ ಕರೆಸಿಕೊಳ್ಳಲಾಗಿದೆ.
ತ್ರಿವಳಿ ಸ್ಪಿನ್ ದಾಳಿ?:
ಶನಿವಾರದ ನೆಟ್ಸ್ನಲ್ಲಿ ಪೇಸರ್ಗಳಾದ ಆಕಾಶ್ ದೀಪ್ ಮತ್ತು ಯಶ್ ದಯಾಳ್ ಅವರು ಬುಮ್ರಾಗಿಂತ ಹೆಚ್ಚು ಎಸೆತಗಳನ್ನಿಕ್ಕಿದರು. ಆದರೆ ಚೆನ್ನೈಯಲ್ಲಿ ತ್ರಿವಳಿ ಸ್ಪಿನ್ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಇವರಿಬ್ಬರೂ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಬಾಂಗ್ಲಾದೇಶ ತಂಡ ಭಾನುವಾರ ಬಿಗಿ ಭದ್ರತೆಯಲ್ಲಿ ಚೆನ್ನೈಗೆ ಆಗಮಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಒಂದೇ ಫ್ರೇಮ್ನಲ್ಲಿ ಗಂಭೀರ್- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು
T20 world cup 2024; ವನಿತೆಯರ ವಿಶ್ವಕಪ್ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ
Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್ ದ್ರಾವಿಡ್
Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ
China Open Badminton: ಪ್ರಿಯಾಂಶು ರಾಜಾವತ್ ಹೊರಕ್ಕೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Rummy Aata Movie: ಸೆ.20ರಿಂದ ರಮ್ಮಿ ಆಟ ಶುರು
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್
Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು
India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.